ಮುಂಬೈ:ಕಳೆದ ಮೂರು ದಿನಗಳಿಂದ ಷೇರು ಮಾರುಕಟ್ಟೆ ಏರುಗತಿಯ ಲಯದಲ್ಲಿದೆ. ಷೇರು ಮಾರುಕಟ್ಟೆ ತಜ್ಞ ಸಂಜೀವ್ ಭಾಸಿನ್ ಅವರು ಮುಂಬರುವ ದಿನಗಳಲ್ಲಿ 3 ಷೇರುಗಳಲ್ಲಿ ಲಾಭ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಏರು ಪೇರುಗಳ ವಾತಾವರಣವಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೊಸ ಬ್ರೇಕೌಟ್ ಬರಬಹುದು. ಹೂಡಿಕೆದಾರರು ಮಾರುಕಟ್ಟೆಯಲ್ಲಿ ಮೇಲ್ಮುಖ ನಡೆಯನ್ನು ನಿರೀಕ್ಷಿಸುತ್ತಾರೆ ಮತ್ತು ಉತ್ತಮ ಷೇರುಗಳನ್ನು ಹುಡುಕುತ್ತಿದ್ದಾರೆ.
ಷೇರು ಮಾರುಕಟ್ಟೆ ತಜ್ಞ ಸಂಜೀವ್ ಭಾಸಿನ್ ಅವರು ಮುಂಬರುವ ದಿನಗಳಲ್ಲಿ ಮೂರು ಷೇರುಗಳನ್ನು ಸೂಚಿಸಿದ್ದಾರೆ, ಇದು ಉತ್ತಮ ಆದಾಯವನ್ನು ನೀಡುತ್ತದೆ ಎಂದಿದ್ದಾರೆ. ಅವರು ಸೂಚಿಸಿದ 3 ಷೇರುಗಳತ್ತ ಗಮನಹರಿಸೋಣ…
ರೆಲಿಗೇರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರುಗಳ ಬೆಲೆ ಗುರುವಾರ 235.45 ರೂಪಾಯಿ ಮುಟ್ಟಿದೆ. ಬ್ರೋಕರೇಜ್ ಮತ್ತು ವಿಮೆಯ ಜೊತೆಗೆ ಇತರ ವ್ಯವಹಾರಗಳಿಂದಲೂ ಈ ಕಂಪನಿಗೆ ಹಣ ಬರುತ್ತಿದೆ. ಕಂಪನಿ ಉತ್ತಮ ಲಾಭ ಗಳಿಸುತ್ತಿದೆ ಎಂದು ಸಂಜೀವ್ ಭಾಸಿನ್ ಹೇಳಿದ್ದಾರೆ.
300 ರೂ.ಗಳ ಗುರಿಯೊಂದಿಗೆ ಈ ಷೇರುಗಳ ವಹಿವಾಟು ನಡೆಸಬೇಕು. ಮುಂದಿನ ದಿನಗಳಲ್ಲಿ ಈ ಷೇರಿನ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಈ ಸ್ಟಾಕ್ ನಲ್ಲಿ ಸ್ಟಾಪ್ ಲಾಸ್ 220 ರೂಪಾಯಿ ಎಂದು ಅವರು ಹೇಳಿದ್ದಾರೆ.
ಒಂದು ಹಂತದ ಏರಿಕೆಯ ನಂತರ, ಈ ಷೇರು ಮತ್ತೆ ಅದರ ಖರೀದಿ ವಲಯಕ್ಕೆ ಬಂದಿದೆ ಎಂದು ಹೇಳಿದರು. ಇದರ ಮಾರುಕಟ್ಟೆ ಬಂಡವಾಳ ಒಂದು ಸಾವಿರ ಕೋಟಿ ರೂಪಾಯಿಗಳಾಗಿದ್ದು, ಈ ಸ್ಟಾಕ್ ಉತ್ತಮ ಮೌಲ್ಯದಲ್ಲಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ಈ ಷೇರು ರೂ. 75ರ ಗುರಿ ತಲುಪಬಹುದು, ಆದರೆ, ಪ್ರಸ್ತುತ 65 ರೂ.ಗಳ ಗುರಿ ನೀಡಿ ಖರೀದಿಸಬೇಕು. ಈ ಸ್ಟಾಕ್‌ನಲ್ಲಿ ಸ್ಟಾಪ್ ಲಾಸ್ ಅನ್ನು 36 ರೂ. ಮಟ್ಟದಲ್ಲಿ ಇಡಬೇಕು ಎಂದು ಭಾಸಿನ್ ಹೇಳಿದ್ದಾರೆ.
ಗುರುವಾರದ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಏರಿಕೆಯಾದ ನಂತರ ಧನಲಕ್ಷ್ಮಿ ಬ್ಯಾಂಕ್ 45.55 ರೂ. ತಲುಪಿದೆ. ಇಲ್ಲಿಂದ ಈ ಸ್ಟಾಕ್ ಮತ್ತೊಮ್ಮೆ ಏರಿಕೆ ಕಾಣಬಹುದು ಎಂದು ಭಾಸಿನ್ ಹೇಳಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಬೆಲೆ ಬಹುಶಃ ಅದರ ಕೆಳಭಾಗವನ್ನು ಕಂಡಿದ್ದು, ಈ ಷೇರು ಈಗ ಮುಂದಿನ ದಾರಿಗೆ ಸಿದ್ಧವಾಗಿದೆ. ಇದರಲ್ಲಿ ಡಬಲ್ ಬಾಟಮ್ ಏರ್ಪಟ್ಟಿದ್ದು, ಇಲ್ಲಿಂದ ಬೆಂಬಲ ಪಡೆದು ಮೇಲಕ್ಕೆ ಹೋಗುತ್ತಿದೆ ಎಂದು ಭಾಸಿನ್​ ಹೇಳಿದ್ದಾರೆ. ಸ್ಟಾಪ್ ಲಾಸ್ 1360 ರೂ.ಗೆ ಇಟ್ಟುಕೊಂಡು 1600 ರೂ. ಗುರಿ ನಿಗದಿಪಡಿಸಬೇಕು ಎಂದು ಭಾಸಿನ್ ಸಲಹೆ ನೀಡಿದ್ದಾರೆ.

ಕರ್ನಾಟಕದ ದಾವಣಗೆರೆ ಶುಗರ್​ ಸೇರಿ ಕೆಲ ಷೇರುಗಳ ಬೆಲೆ ಒಂದೇ ದಿನದಲ್ಲಿ 20% ಹೆಚ್ಚಳ: ಶುಕ್ರವಾರವೂ ಈ ಷೇರುಗಳಿಗೆ ಭಾರೀ ಬೇಡಿಕೆ

ಗರಿಷ್ಠ ಬೆಲೆ ಮುಟ್ಟಿದ ಜೊಮ್ಯಾಟೊ ಷೇರುಗಳು: ಈ ಸ್ಟಾಕ್​ ಖರೀದಿಸಿದರೆ ಲಾಭ ಎಂದು ಸಿಎಲ್​ಎಸ್​ಎ, ಜೆಫರೀಸ್ ಹೇಳಿದ್ದೇಕೆ?

ಮಾರ್ಚ್​ 2ರ ರಜಾದಿನದಂದು ಕೂಡ ಷೇರು ವಹಿವಾಟು: ಎನ್​ಎಸ್​ಇ ನಡೆಸಲಿದೆ ಸ್ಪೇಶಲ್​ ಲೈವ್​ ಟ್ರೇಡಿಂಗ್ ಸೆಷನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
