ಬಿಹಾರ:ಬಿಹಾರದಿಂದ ಕೆಲವು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕೆಲವೊಮ್ಮೆ ರೈಲು ಎಂಜಿನ್, ಮತ್ತೆ ಕೆಲವೊಮ್ಮೆ ಸೇತುವೆ ಇಲ್ಲಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ಆದರೆ ಇತ್ತೀಚಿನ ವಿಷಯ ಸಂಬಂಧಿಸಿರುವುದು ಶಿಕ್ಷಣ ಇಲಾಖೆಯದ್ದು. ಹೌದು, ಇಲ್ಲಿನ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಹಲವು ವರ್ಷಗಳಿಂದ ಶಾಲಾ ಮಕ್ಕಳು ಪಠ್ಯಕ್ರಮದ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ.
ಹೌದು, ಕಳೆದ 12 ವರ್ಷಗಳಿಂದ ಶಾಲಾ ಪಠ್ಯಪುಸ್ತಕದಲ್ಲಿ ಕೊಟ್ಟಿರುವ ವಿಷಯ ನೋಡಿದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅಂದರೆ ವಿದ್ಯಾರ್ಥಿಗಳು ಶಾಲಾ ಪುಸ್ತಕದಲ್ಲಿ ಹುಲಿಯನ್ನು ಸಿಂಹ ಎಂದೇ ಓದುತ್ತಿದ್ದಾರೆ. ಅಷ್ಟೇ ಅಲ್ಲ ಒಂದೇ ಕೋರ್ಸ್​​​​​​ನ ಪುಸ್ತಕದಲ್ಲಿ ಇಲಾಖೆ ಎರಡು ಬಾರಿ ದೊಡ್ಡ ತಪ್ಪು ಮಾಡಿದೆ. ಈ ಕುರಿತು ಇಲಾಖೆಗೆ ದೂರು ನೀಡಿದಾಗ ತಪ್ಪು ಎಂದು ಪರಿಗಣಿಸಿ ಬದಲಾಯಿಸುವಂತೆ ಕೇಳಿಕೊಂಡಿದೆ.
ಸಂಸ್ಕೃತಕ್ಕೆ ಸಂಬಂಧಿಸಿದ ವಿಷಯಈ ವಿಷಯವು ಸಂಸ್ಕೃತ ವಿಷಯಕ್ಕೆ ಸಂಬಂಧಿಸಿದೆ. ಲಖಿಸಾರೈನ ಸಂಸ್ಕೃತ ಶಿಕ್ಷಕ ಕಮ್ ಟ್ಯಾಲೆಂಟ್ ಸೆಲೆಕ್ಷನ್ ಏಕ್ತಾ ಮಂಚ್‌ನ ಕಾರ್ಯದರ್ಶಿ ಪಿಯೂಷ್ ಕುಮಾರ್ ಝಾ ಅವರ ಪ್ರಕಾರ, ಬಿಹಾರ ಶಿಕ್ಷಣ ಇಲಾಖೆಯು 10 ನೇ ತರಗತಿಯ ಸಂಸ್ಕೃತ ವಿಷಯದ ಪೀಯೂಷಮ್ ದ್ವಿತೀಯೋ ಭಾಗ್ ಪುಸ್ತಕದ ಹನ್ನೊಂದನೇ ಪಾಠದಲ್ಲಿ ದೊಡ್ಡ ತಪ್ಪು ಮಾಡಿದೆ. ಈ ಪಾಠದ ಆರಂಭದಲ್ಲಿ ಮುದ್ರಿಸಿರುವ ಫೋಟೋ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುತ್ತಿದೆ.
ಹುಲಿಯ ಕಥೆಯಲ್ಲಿ ಸಿಂಹದ ಫೋಟೋಪುಸ್ತಕದ ಹನ್ನೊಂದನೇ ಅಧ್ಯಾಯದಲ್ಲಿ ಇಲಾಖೆ ತಪ್ಪು ಮಾಡಿದ್ದು, ಹುಲಿ ಕಥೆಯಲ್ಲಿ ಸಿಂಹದ ಫೋಟೋ ಸೇರಿಸಿದೆ ಎನ್ನುತ್ತಾರೆ ಪಿಯೂಷ್ ಕುಮಾರ್ ಝಾ. ಅಚ್ಚರಿಯ ಸಂಗತಿ ಎಂದರೆ ಕಳೆದ 12 ವರ್ಷಗಳಿಂದ ಪುಸ್ತಕದಲ್ಲಿ ತಪ್ಪು ಫೋಟೋ ಮುದ್ರಿಸಿರುವುದು ಯಾವ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಈ ವಿಷಯದಲ್ಲಿ ಮಾತ್ರ ಇಲಾಖೆ ತಪ್ಪು ಮಾಡಿಲ್ಲ, ಅದಕ್ಕಿಂತಲೂ ದೊಡ್ಡ ತಪ್ಪು ಕೂಡ ನಡೆದಿದೆ.
ವಿಶ್ವ ಶಾಂತಿಯ ಕಥೆಯಲ್ಲಿ ಜಲಿಯನ್ ವಾಲಾಬಾಗ್ ಫೋಟೋಈ ಪಠ್ಯದಲ್ಲಿ ಜಲಿಯನ್ ವಾಲಾಬಾಗ್ ಫೋಟೋವನ್ನು ಕೊಡಲಾಗಿದೆ. ಆದರೆ ಈ ಲೇಖನದಲ್ಲಿ ಎಲ್ಲಿಯೂ ಜಲಿಯನ್‌ವಾಲಾ ಬಾಗ್‌ನ ಬಗ್ಗೆ ಉಲ್ಲೇಖವಿಲ್ಲ. ಈ ಬಗ್ಗೆಯೂ ಪಿಯೂಷ್ ಕುಮಾರ್ ಝಾ ಅವರು ಆಕ್ಷೇಪಣೆ ಸಲ್ಲಿಸಿದ್ದು, ಫೋಟೋ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಎಸ್‌ಸಿಇಆರ್‌ಟಿ ಪಾಟ್ನಾದಿಂದ ಮಾಹಿತಿ ಕೇಳಿದಾಗ ಈ ದೊಡ್ಡ ತಪ್ಪು ಮಾಡಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇದಾದ ನಂತರ, ಪಠ್ಯ ಪುಸ್ತಕದ ಮುಂದಿನ ಪ್ರಕಟಣೆಯಲ್ಲಿ ತಿದ್ದುಪಡಿ ಮಾಡುವ ಭರವಸೆ ನೀಡಲಾಗಿದೆ.
ತಪ್ಪನ್ನು ಒಪ್ಪಿಕೊಂಡ ಇಲಾಖೆ10ನೇ ತರಗತಿಯ ಸಂಸ್ಕೃತ ಪಠ್ಯ ಪುಸ್ತಕದಲ್ಲಿ ತಪ್ಪು ಉದ್ಧರಣಗಳು ಮುದ್ರಣವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್‌ಸಿಇಆರ್‌ಟಿ ಇಲಾಖೆ ಪ್ರಭಾರಿ ಪಟ್ನಾ ವಿಭಾ ರಾಣಿ ಮಾಧ್ಯಮಗಳೊಂದಿಗೆ ತಿಳಿಸಿದರು. ಪುಸ್ತಕದಲ್ಲಿ ಹುಲಿಯ ಬದಲು ಸಿಂಹದ ಚಿತ್ರವನ್ನು ಮುದ್ರಿಸಲಾಗಿದೆ. ಮುಂದಿನ ಪ್ರಕಟಣೆಯಲ್ಲಿ ಇದನ್ನು ಸುಧಾರಿಸಲಾಗುತ್ತಿದೆ. ಶೀಘ್ರದಲ್ಲೇ ಹೊಸ ಆವೃತ್ತಿಯ ಸುಧಾರಿತ ಪುಸ್ತಕವನ್ನು ಶಾಲೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು.
ಪ್ರಧಾನಿ ಮೋದಿಯವರ ಜಾತಿ ವಿಚಾರವಾಗಿ ಮಾತನಾಡಿದ ರಾಹುಲ್, “ಅವರು OBC ಅಲ್ಲ…”

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಖರ್ಗೆಯಲ್ಲ; ರಾಜ್ಯಸಭೆಯಲ್ಲಿ ಮತ್ತೆ ಗುಡುಗಿದ ದೇವೇಗೌಡ್ರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − eighteen =
Remember me
