ನವದೆಹಲಿ:ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್​ಐಟಿ) ರಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​​ ಶುಕ್ರವಾರ(ಆಗಸ್ಟ್​​ 2) ತಿರಸ್ಕರಿಸಿದೆ. ಅರ್ಜಿಯು ವೈಯಕ್ತಿಕ ದೂರುಗಳು, ಅಂದರೆ ರಾಜಕೀಯ ಪಕ್ಷ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಒಪ್ಪಂದದ ಪರಸ್ಪರ ಲಾಭವನ್ನು ಆಧರಿಸಿರುತ್ತದೆ ಎಂಬ ಊಹೆಗಳಿವೆ. ಆದ್ದರಿಂದ ಚುನವಣಾ ಬಾಂಡ್​​ಗಳ ಖರೀದಿಯ ಬಗ್ಗೆ ಎಸ್​​ಐಟಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಪೀಠವು ತಿಳಿಸಿದೆ.
ಇದನ್ನು ಓದಿ:ನೀಟ್​​ ವಿವಾದ; ಸುಪ್ರೀಂ​ ತೀರ್ಪು ಕೇಂದ್ರದ ನಿಲುವನ್ನು ಸಮರ್ಥಿಸುತ್ತದೆ ಎಂದಿದ್ದೇಕೆ ಧರ್ಮೇಂದ್ರ ಪ್ರಧಾನ್
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠವು, ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ನ್ಯಾಯಾಲಯವು ಪರಿಗಣಿಸಿದೆ ಏಕೆಂದರೆ ಅದು ನ್ಯಾಯಾಂಗ ಪರಿಶೀಲನೆಯ ಅಂಶವನ್ನು ಹೊಂದಿದೆ. ಆದರೆ ಕ್ರಿಮಿನಲ್ ತಪ್ಪುಗಳನ್ನು ಒಳಗೊಂಡ ಪ್ರಕರಣಗಳು 32ನೇ ವಿಧಿಯ ಅಡಿಯಲ್ಲಿ ಬರಬಾರದು. ಈ ಹಂತದಲ್ಲಿ ಹಸ್ತಕ್ಷೇಪ ಮಾಡುವುದು ಅನುಚಿತ ಮತ್ತು ಸೂಕ್ತವಲ್ಲ ಎಂದು ಹೇಳಿದೆ.

ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್‌ಗಳ ನಡುವಿನ ದೇಣಿಗೆ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಚುನಾವಣಾ ಬಾಂಡ್‌ಗಳ ಮೂಲಕ, ಯಾವುದೇ ಸಂಸ್ಥೆ ಅಥವಾ ಕಂಪನಿ ಅಥವಾ ವ್ಯಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಹಣವನ್ನು ದಾನ ಮಾಡಬಹುದು. ಯಾವುದೇ ರಾಜಕೀಯ ಪಕ್ಷವು ಬಾಂಡ್‌ಗಳನ್ನು ಸ್ವೀಕರಿಸಿದ 15 ದಿನಗಳಲ್ಲಿ ಅವುಗಳನ್ನು ಎನ್‌ಕ್ಯಾಶ್ ಮಾಡಬಹುದು. ನೋಂದಾಯಿತ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಬಾಂಡ್‌ಗಳನ್ನು ನೀಡಬಹುದು.
ಈ ಹಿಂದೆ ಸುಪ್ರೀಂಕೋರ್ಟ್​​​ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ, ಇದು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.(ಏಜೆನ್ಸೀಸ್​​)
ಆ.8ರವರೆಗೆ ಇಸ್ರೇಲ್​​​​ನ​​​ ಈ ಸ್ಥಳಕ್ಕೆ ವಿಮಾನ ಹಾರಾಟ ರದ್ದು; ಏರ್​ಇಂಡಿಯಾ ಕೊಟ್ಟ ಕಾರಣ ಇದು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
