ಅಹಮದಾಬಾದ್‌:ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ, ವ್ಯಾಪಾರ ಬಿರುಸಿನಿಂದ ಪ್ರಾರಂಭಗೊಂಡಿದ್ದು, ದೀಪಗಳನ್ನು ಹಚ್ಚಿ, ಸಿಹಿ ಹಂಚಿ ಸಂಭ್ರಮಿಸುವ ಜನಸಾಮಾನ್ಯರು ಹಬ್ಬದ ಪ್ರಯುಕ್ತ ಮನೆಗೆ ಸಿಹಿ ತಿಂಡಿ-ತಿನಿಸುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುತ್ತಾರೆ. ಕೆಲವರು ಮನೆಯಲ್ಲೇ ತಯಾರಿಸಿದರೆ ಹಲವರು ಹೊರಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸ್ವೀಟ್​ ತರುತ್ತಾರೆ. ಆದ್ರೆ, ಇಲ್ಲೊಂದು ಸಿಹಿ ತಿಂಡಿಗಳ ಮಳಿಗೆ ತಮ್ಮ ವಿಶೇಷ ಸ್ವೀಟ್​ನ ಒಂದು ಕೆಜಿಗೆ ನಿಗದಿಪಡಿಸಿರುವ ದರ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ.
ಇದನ್ನೂ ಓದಿ:ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ
ಅಹಮದಾಬಾದ್‌ನಲ್ಲಿ ‘ಸ್ವರ್ಣ ಮುದ್ರಾ’ ಎಂಬ ಸ್ವೀಟ್​ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದು, ಇದರ ಪ್ರತಿ ಕೆಜಿಗೆ 21,000 ರೂ. ಬೆಲೆ ನಿಗದಿಯಾಗಿದೆ. ಸದ್ಯಕ್ಕೆ ಇದು ಅತ್ಯಂತ ದುಬಾರಿ ಸ್ವೀಟ್​ ಆಫ್​ ಅಹಮದಾಬಾದ್​ ಆಗಿದೆ. ಈ ಸುದ್ದಿ ಕೇಳಿ ಸಿಹಿಪ್ರಿಯರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.
‘ಸ್ವರ್ಣ ಮುದ್ರಾ’ ಹೆಸರಿನ ಸಿಹಿತಿಂಡಿ ಅಹಮದಾಬಾದ್‌ನಲ್ಲಿ ಜನಪ್ರಿಯವಾಗುತ್ತಿದೆ. ದೀಪಾವಳಿಗೂ ಮುನ್ನವೇ ಜನರು ಸಿಹಿತಿಂಡಿಗಳನ್ನು ಸಂಗ್ರಹಿಸುತ್ತಿರುವುದರಿಂದ, ಅದರ ಮೇಲೆ 24-ಕ್ಯಾರೆಟ್ ಚಿನ್ನದ ಪದರವನ್ನು ಬಳಸುವ ಈ ಖಾದ್ಯವು ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ:25 ಸಾಧಕರಿಗೆ ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ ಪ್ರಶಸ್ತಿ: ಪ್ರತಿಷ್ಠಿತ ಐಎಫ್​ಐಇ ಗೌರವ; ಮಾನವೀಯ ಸೇವೆ ಮಾಡುವವರೇ ಸ್ಫೂರ್ತಿ ಎಂದ ಗೆಹಲೋತ್
ಸಿಹಿತಿಂಡಿಯ ಬೆಲೆ ಕೆಜಿಗೆ 21,000 ರೂ. ಇದ್ದು, ಅದರ ಒಂದು ತುಂಡು ಬೆಲೆ 1,400 ರೂ. ಒಂದು ಕಿಲೋಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ. ಇದು ಬಾದಾಮಿ, ಬ್ಲೂಬೆರ್ರಿ, ಪಿಸ್ತಾ ಮತ್ತು ಕ್ರ್ಯಾನ್‌ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್‌ನ ಗ್ವಾಲಿಯಾ ಎಸ್‌ಬಿಆರ್ ಔಟ್‌ಲೆಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಈ ವರ್ಷ ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕುತ್ತಿದ್ದು, ಸ್ವೀಟ್​ ಆರ್ಡರ್ ಪಡೆದು ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದೇವೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ಹೊರತುಪಡಿಸಿ, 350 ರೂ.ನಿಂದ 15,000 ರೂ.ವರೆಗಿನ ಸಿಹಿತಿಂಡಿಗಳು ಮತ್ತು ಡ್ರೈ ಫ್ರೂಟ್ಸ್‌ಗಳಿಗಾಗಿ ಔಟ್‌ಲೆಟ್ ಅನೇಕ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರವೀನಾ ತಿಲ್ವಾನಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಹಾರದಲ್ಲಿ ಶೇ.75 ಮೀಸಲು?: ನಿತೀಶ್ ಸರ್ಕಾರ ಪ್ರಸ್ತಾವ; ವಿಧಾನಸಭೆಯಲ್ಲಿ ಜಾತಿ ಗಣತಿ ಮಂಡನೆ
ಕೆಲವರು ತಮ್ಮ ಆರ್ಡರ್​ಗಳನ್ನೂ ಕಸ್ಟಮೈಸ್ ಮಾಡಿಸುತ್ತಿದ್ದಾರೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳು ಇದೀಗ ಸ್ವೀಟ್​ ಖರೀದಿಸಲು ಆಗಮಿಸುವವರ ಗಮನ ಸೆಳೆಯುತ್ತಿವೆ ಎಂದರು,(ಏಜೆನ್ಸೀಸ್).
ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + four =
Remember me
