ಹೈದರಾಬಾದ್‌:ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿರುವುದಾಗಿ ಮನೆಯವರಿಗೆ ತಿಳಿಸಿದ ನಂತರ 17 ವರ್ಷದ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಪ್ಯಾರಾಬ್ಯಾಡ್ಮಿಂಟನ್ ಆಟಗಾರನ ಕೊಲೆ: ಮಾಜಿ ಪ್ರೇಯಸಿ, ಆಕೆಯ ಗೆಳೆಯ ಅರೆಸ್ಟ್​!
ಆಂಧ್ರ ಮೂಲದ ಹುಡುಗಿ ವಿಶಾಖಪಟ್ಟಣಂ ಪಾಲಿಟೆಕ್ನಿಕ್‌ನಲ್ಲಿ ಓದುತ್ತಿದ್ದಳು. ಸಾಯುವ ಕೆಲ ಕ್ಷಣಗಳ ಮುನ್ನ ಬಾಲಕಿ ತನ್ನ ಮನೆಯವರಿಗೆ ತನಗಾದ ಸಂಕಷ್ಟದ ಬಗ್ಗೆ ತಿಳಿಸಿದ್ದಾಳೆ. ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿರುವುದಾಗಿ ವಿದ್ಯಾರ್ಥಿನಿ ತಿಳಿಸಿದ್ದು, ಹಲ್ಲೆಕೋರರು ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಕಾಲೇಜು ಅಧಿಕಾರಿಗಳು ಅಥವಾ ಪೊಲೀಸರಿಗೆ ದೂರು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.
ಕಾಲೇಜಿನಲ್ಲಿ ಇತರ ಹುಡುಗಿಯರಿಗೂ ಈ ರೀತಿ ಹಿಂಸೆ ನೀಡಲಾಗುತ್ತಿದೆ ಎಂದು ಬಾಲಕಿ ತನ್ನ ಸಹೋದರಿಗೆ ಕಳುಹಿಸಿರುವ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾಳೆ. ‘ಐ ಆಮ್ ಸಾರಿ ಸಿಸ್ಟರ್, ಐ ಹ್ಯಾವ್ ಟು ಗೋ’ ಎಂದು ಮೆಸೇಜ್ ಕಳೂಹಿಸಿದ ಬಳಿಕ ಬಾಲಕಿ ಪ್ರಾಣ ತೆತ್ತಿದ್ದಾಳೆ.
ಗುರುವಾರ ರಾತ್ರಿ 10 ಗಂಟೆಗೆ ಕಾಲೇಜಿನಿಂದ ಬಾಲಕಿ ನಾಪತ್ತೆಯಾಗಿದ್ದಳು. ಫೋನ್ ತೆಗೆಯದಿದ್ದಾಗ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12.50ಕ್ಕೆ ಬಾಲಕಿ ಮನೆಯವರಿಗೆ ಪ್ರತಿಕ್ರಿಯಿಸಿ ಆತಂಕ ಬೇಡ ಎಂದು ಹೇಳಿದ್ದಾಳೆ. ‘ನಾನು ಯಾಕೆ ಹೊರಡುತ್ತಿದ್ದೇನೆ ಎಂದು ಹೇಳಲಾರೆ. ನಿಮಗೆ ಅರ್ಥವಾಗುವುದಿಲ್ಲ. ನನ್ನ ಬಗ್ಗೆ ಮರೆತು ಬಿಡಿ. ನನಗೆ ಜನ್ಮ ನೀಡಿದ ನನ್ನ ತಂದೆ ಮತ್ತು ತಾಯಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಜೀವನ ಮುಗಿಯುತ್ತಿದೆ. ನಿಮ್ಮೆಲ್ಲರಿಗೂ ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ನಾನು ಹೋಗಬೇಕು’ ಹುಡುಗಿ ಸಂದೇಶದಲಿ ಬರೆದಿದಾಳೆ
ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಬಾಲಕಿಯ ತಂದೆ ತಿಳಿಸಿದ್ದಾರೆ. ನನ್ನ ಮಗಳು ಏಕೆ ಸತ್ತಳು ಎಂದು ನನಗೆ ತಿಳಿಯಬೇಕು. ಅವಳನ್ನು ಸಾಧ್ಯವಾದಷ್ಟು ಪ್ರೀತಿಯಿಂದ ಬೆಳೆಸಲಾಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ಉತ್ತಮ ಶಿಕ್ಷಣ ನೀಡಲು ಕಾಲೇಜಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾಲೇಜು ಪ್ರಾಂಶುಪಾಲ ಪ್ರತಿಕ್ರಿಯಿಸಿ, ಬಾಲಕಿ ತಂಗಿದ್ದ ಹಾಸ್ಟೆಲ್‌ಗೆ ಪುರುಷರ ಪ್ರವೇಶಕ್ಕೆ ಅವಕಾಶವಿಲ್ಲ. ಮಹಿಳಾ ವಾರ್ಡನ್‌ಗಳಿದ್ದಾರೆ. ಹೀಗಾಗಿ ಲೈಂಗಿಕ ಕಿರುಕುಳ ನಡೆದಿರುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಕಾಲೇಜಿನ ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಕಟುಕ ಸಹೋದರ.. ಸ್ವಂತ ತಂಗಿಗೆ ಯಾಕೆ ಹೀಗೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
