ಹೈದರಾಬಾದ್​:ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್​ ಡಾ.ಬಿ.ಆರ್​.ಅಂಬೇಡ್ಕರ್​ ಅವರ 132ನೇ ಜನ್ಮ ಜಯಂತಿ ಪ್ರಯುಕ್ತ ಅವರ 125 ಅಡಿ ಉದ್ದದ ಪ್ರತಿಮೆಯನ್ನು ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ಭಾರತದಲ್ಲಿ ಅಂಬೇಡ್ಕರ್​ ಅವರ ಅತಿ ಎತ್ತರವಾದ ಪ್ರತಿಮೆಯಾಗಿದ್ದು ಹೈದರಾಬಾದಿನ ಹುಸೇನ್​ಸಾಗರ್​ ಸರೋವರದ ದಡದಲ್ಲಿ ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಕಾರ್ಯವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಹಾಗೂ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್​ ನೆರವೇರಿಸಿದರು.
ಇನ್ನು ಪ್ರತಿಮೆ ಉದ್ಘಾಟನೆ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ರಾಜ್ಯ ಸಚಿವಾಲಯದ ಪಕ್ಕ ಸ್ಥಾಪಿಸಿರುವ ಅಂಬೇಡ್ಕರ್ ಅವರ ಪ್ರತಿಮೆ ಜನರಿಗೆ ಹಾಗೂ ಆಡಳಿತ ವರ್ಗಕ್ಕೆ ಸ್ಪೂರ್ತಿ ನೀಡುತ್ತದೆ.
#WATCH| Telangana CM K Chandrashekar Rao unveils the 125 ft-tall statue of Dr BR Ambedkar in Hyderabad. Dr BR Ambedkar's grandson and Vanchit Bahujan Aaghadi president, Prakash Ambedkar also here.(Video Source: Telangana State Media)pic.twitter.com/Yv2yXHh0a3

98 ವರ್ಷದ ಶಿಲ್ಪಿ ರಾಮ್​ ವಾಂಜಿ ಸುತಾರ್​ ಪ್ರತಿಮೆ ನಿರ್ಮಾಣದಲ್ಲಿ ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್​ ಪ್ರಶಂಶಿಸಿದ್ಧಾರೆ.
ತೆಲಂಗಾಣ ಸರ್ಕಾರ ವತಿಯಿಂದ ಪದ್ಮಭೂಷಣ ಪ್ರಶ್ತಿ ಪುರಸ್ಕೃತರಾದ ರಾಮ್​ ವಾಂಜಿ ಸುತಾರ್​​ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ತೆಲಂಗಾಣ ಸಚಿವ ಸಂಪುಟದ ಸದಸ್ಯರು, ಶಾಸಕರು ಹಾಗೂ ಅಂಬೇಡ್ಕರ್​ ಅವರ ಮೊಮ್ಮಗ ಪ್ರಕಾಶ್​ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರಿದ್ದರು ಎಂದು ಹೇಳಲಾಗಿದೆ. ಎಲ್ಲರಿಗೂ ಮಜ್ಜಿಗೆ, ಸಿಹಿ ತಿನಿಸು, ಬೋಜನ ಹಾಗೂ ನೀರಿನ ಪ್ಯಾಕೆಟ್​ಗಳ ವ್ಯವಸ್ಥೆಯನ್ನು ಸರ್ಕಾರದ ವತಿಯಿಂದ ಮಾಡಲಾಗಿತ್ತು.
Telangana CM K Chandrashekar Rao unveils the 125 ft-tall statue of Dr BR Ambedkar in Hyderabad.Dr BR Ambedkar's grandson and Vanchit Bahujan Aaghadi president Prakash Ambedkar also present here.pic.twitter.com/TvqoMfeOn0

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 5 =
Remember me
