ತೆಲಂಗಾಣ:ತೆಲಂಗಾಣದಲ್ಲಿ ನವೆಂಬರ್ 30ರಂದು ನಡೆದ ಮತದಾನದೊಂದಿಗೆ 5 ರಾಜ್ಯಗಳ ಚುನಾವಣೆ ಮುಕ್ತಾಯಗೊಂಡಿದೆ. ಈ ನಡುವೆ ಚುನಾವಣೆಯ ಎಕ್ಸಿಟ್ ಪೋಲ್‌ಗಳೂ ಹೊರಬಿದ್ದಿವೆ. ಕೆಲವು ಸಮೀಕ್ಷೆಯಲ್ಲಿ ಮಧ್ಯಪ್ರದೇಶದಲ್ಲಿ ಗೊಂದಲವಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎನ್ನಲಾಗಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪುನರಾವರ್ತನೆಯಾಗುವ ನಿರೀಕ್ಷೆಯಿದೆ. ಆದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.  ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದರೆ ಅದು ಕೇವಲ ಅದರ ಗೆಲುವಾಗದೆ, ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಪಲ್ಲಟವಾದಂತಾಗುತ್ತದೆ.
ಹೌದು, ರಾಜ್ಯದಲ್ಲಿ ಬಿಆರ್‌ಎಸ್‌ನೊಂದಿಗೆ ಕಾಂಗ್ರೆಸ್ ನೇರವಾಗಿ ಸ್ಪರ್ಧಿಸುತ್ತಿದ್ದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರೊಂದಿಗೆ ನಿಂತಿರುವುದನ್ನು ನಾವಿಲ್ಲಿ ಗಮನಿಸಬಹುದು.
ತೆಲಂಗಾಣದಲ್ಲಿ ಮುಸ್ಲಿಂ ಮತಗಳು ಕೈ ತಪ್ಪದಂತೆ ಕೆಸಿಆರ್ ಮತ್ತು ಓವೈಸಿ ಒಟ್ಟಾಗಿ ಚುನಾವಣೆ ಎದುರಿಸಿದ್ದು ಗಮನಾರ್ಹ. ಆದರೆ, ಈ ವೋಟ್ ಬ್ಯಾಂಕ್‌ನಲ್ಲಿ ಕಾಂಗ್ರೆಸ್ ಸೆಡ್ಡುಹೊಡೆದಿದೆ. ಈಗ ಅದು ‘ಕೈ’ ಕಿಟ್ಟಿಯಲ್ಲಿ ಬರುವಂತಿದೆ. ಒವೈಸಿ ಅವರ ಸಾಂಪ್ರದಾಯಿಕ ಮತದಾರರು ಅವರಿಂದ ದೂರ ಸರಿಯುವುದಿಲ್ಲ ಮತ್ತು ಬೇರೆಯವರ ಬಳಿ ಹೋಗುವುದಿಲ್ಲ ಎಂದು ತಜ್ಞರು ನಂಬಿದ್ದಾರೆ. ಒವೈಸಿ ಜೊತೆ ಕೆಸಿಆರ್ ಬರಲು ಇದೇ ಕಾರಣ. ಹೈದರಾಬಾದ್ ಸೇರಿದಂತೆ ಮುಸ್ಲಿಮರಲ್ಲಿ ಓವೈಸಿ ಪ್ರಭಾವ ಹೆಚ್ಚಿರುವುದು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಗೆ ಗೊತ್ತಿತ್ತು. ಹೀಗಿರುವಾಗ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ವಾಲದಂತೆ ಎರಡೂ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಒಗ್ಗೂಡಿದವು.
ಎಕ್ಸಿಟ್ ಪೋಲ್ ಏನು ಹೇಳುತ್ತದೆ?ಎಕ್ಸಿಟ್ ಪೋಲ್ ಪ್ರಕಾರ, ತೆಲಂಗಾಣದ 119 ಸ್ಥಾನಗಳಲ್ಲಿ ಕಾಂಗ್ರೆಸ್ 49 ರಿಂದ 65 ಸ್ಥಾನಗಳನ್ನು ಗೆಲ್ಲಬಹುದು. ತೆಲಂಗಾಣದಲ್ಲಿ ಸರ್ಕಾರ ರಚಿಸಲು 60 ಸ್ಥಾನಗಳ ಅಗತ್ಯವಿದ್ದು, ಬಿಆರ್‌ಎಸ್ 38 ರಿಂದ 54 ಸ್ಥಾನಗಳನ್ನು ಪಡೆಯುತ್ತಿದೆ. ಎಐಎಂಐಎಂ ಚುನಾವಣೆಯಲ್ಲಿ 5 ರಿಂದ ಒಂಬತ್ತು ಸ್ಥಾನಗಳನ್ನು ಗೆಲ್ಲಬಹುದು, ಆದರೆ ಬಿಜೆಪಿ 5 ರಿಂದ 13 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಚುನಾವಣಾ ಸಮೀಕರಣ ಹೇಗಿದೆ?ಒವೈಸಿ ಹೈದರಾಬಾದ್ ಮತ್ತು ಸುತ್ತಮುತ್ತಲಿನ 9 ಸ್ಥಾನಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬಿಆರ್‌ಎಸ್ ತನ್ನ ಅಭ್ಯರ್ಥಿಗಳನ್ನು ಓವೈಸಿಯ ಸ್ಥಾನಗಳಲ್ಲಿ ನಿಲ್ಲಿಸಿದರೂ, ಅವರು ದುರ್ಬಲರು. ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸುವುದರಿಂದ ಈ ಸ್ಥಾನಗಳು ಮೈತ್ರಿಗೆ ಬರುವುದು ಖಚಿತ. ಹಾಗೆಯೇ ಹೈದರಾಬಾದ್‌ನ ಹೊರಗೆ ಮುಸ್ಲಿಂ ಮತಗಳನ್ನು ಗಳಿಸಲು ಕೆಸಿಆರ್ ಒವೈಸಿಯ ಬೆಂಬಲವನ್ನೂ ಪಡೆಯುತ್ತಾರೆ.
ಹೈದರಾಬಾದ್ ನಲ್ಲಿ ಮುಸ್ಲಿಂ ಜನಸಂಖ್ಯೆಹೈದರಾಬಾದ್ ಒಂದರಲ್ಲೇ ಸುಮಾರು 17 ಲಕ್ಷ 30 ಸಾವಿರ ಮುಸ್ಲಿಂ ಜನಸಂಖ್ಯೆ ಇದ್ದು, ಇಡೀ ರಾಜ್ಯದ ಶೇ.40ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಹೈದರಾಬಾದ್‌ನಲ್ಲಿ 15 ವಿಧಾನಸಭಾ ಸ್ಥಾನಗಳಿವೆ ಮತ್ತು ಹೆಚ್ಚಿನ ಸ್ಥಾನಗಳಲ್ಲಿ ಮುಸ್ಲಿಂ ಮತದಾರರು ಫಲಿತಾಂಶವನ್ನು ನಿರ್ಧರಿಸುತ್ತಾರೆ. 119 ಸ್ಥಾನಗಳ ತೆಲಂಗಾಣ ಅಸೆಂಬ್ಲಿಯಲ್ಲಿ, ಸುಮಾರು 45 ಲಕ್ಷದಷ್ಟು ಮುಸ್ಲಿಂ ಜನಸಂಖ್ಯೆ ಇದೆ, ಇದು ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 13 ರಷ್ಟಿದೆ. ಈ ಮುಸ್ಲಿಂ ಮತದಾರರು ರಾಜ್ಯದಲ್ಲಿ 40-45 ಸ್ಥಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತಾರೂಢ ಬಿಆರ್‌ಎಸ್ ಒವೈಸಿಯಿಂದಾಗಿ ಒಗ್ಗಟ್ಟಾಗಿ ಮುಸ್ಲಿಂ ಮತಗಳನ್ನು ಪಡೆಯಬಹುದೆಂಬ ನಿರೀಕ್ಷೆಯಲ್ಲಿತ್ತು, ಆದರೆ ಪ್ರಸ್ತುತ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಚಿತ್ರಣವು ಉಲ್ಟಾಪಲ್ಟಾ ಕಾಣುತ್ತಿದೆ.
ತೆಲಂಗಾಣ ಚುನಾವಣಾ ಫಲಿತಾಂಶದ ನಂತರ ಕಿಂಗ್‌ ಮೇಕರ್ ಆಗ್ತಾರಾ ಓವೈಸಿ?, ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಈ ಸೂಚನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
