ತೆಲಂಗಾಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಕೊವಿಡ್ 19 ನಿಯಂತ್ರಣಕ್ಕಾಗಿ ಸರ್ಕಾರ, ಸ್ಥಳೀಯ ಆಡಳಿತಗಳು ಹೋರಾಡುತ್ತಿವೆ. ಆದರೆ ಜನರು ಸರಿಯಾದ ಸಹಕಾರ ನೀಡುತ್ತಿಲ್ಲ ಎಂದು ವರದಿಯಾಗಿದೆ. ಅದರಲ್ಲೂ ಮುಖ್ಯವಾಗಿ ಆಸ್ಪತ್ರ, ಕೊವಿಡ್​-19 ಸೆಂಟರ್​ಗಳಿಂದ ರೋಗಿಗಳು ಪರಾರಿಯಾಗುತ್ತಿರುವುದು ತುಂಬ ಆತಂಕಕ್ಕೆ ಕಾರಣವಾಗುತ್ತಿದೆ.
ಅದರಲ್ಲೂ ಶನಿವಾರ ಅದಿಲಾಬಾದ್​ ರಾಜೀವ್​ ಗಾಂಧಿ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್ (ಆರ್​ಐಎಂಎಸ್) ಆಸ್ಪತ್ರೆಯಿಂದ 10 ರೋಗಿಗಳು ಪರಾರಿಯಾಗಿದ್ದಾರೆ.​
ಈ ಹತ್ತು ಮಂದಿಯಲ್ಲಿ 6 ಜನರು ಕೊವಿಡ್​-19 ಸೋಂಕಿತರಾಗಿದ್ದಾರೆ. ಹಾಗೇ ಉಳಿದಿಬ್ಬರು ಕೋವಿಡ್​-19 ಟೆಸ್ಟ್​ ಮಾಡಿಸಲಾಗಿದ್ದು, ವರದಿ ಇನ್ನೂ ಬರಬೇಕಿತ್ತು. ಆದರೆ ಈ ಹತ್ತೂ ಮಂದಿಗೆ ಕೊವಿಡ್​-19 ಲಕ್ಷಣಗಳಿವೆ ಎನ್ನಲಾಗಿದೆ.ಹತ್ತೂ ಮಂದಿ ನಾಪತ್ತೆಯಾಗಿದ್ದು ಹೇಗೆ ಎಂಬ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೂ ತಿಳಿಯಲಿಲ್ಲ. ನಮಗೆ ಯಾರಿಗೂ ಏನೂ ಮಾಹಿತಿ ನೀಡದೆ ಹೋಗಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದಾರೆ.ಇದನ್ನೂ ಓದಿ:ಕರೊನಾ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ ; ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಆರೋಪ
ಅವರೆಲ್ಲರ ಆಧಾರ್​ ಕಾರ್ಡ್​ ಹಾಗೂ ಫೋನ್​ ನಂಬರ್​ಗಳು ಆಸ್ಪತ್ರೆಯಲ್ಲಿದ್ದು, ಅದರ ಆಧಾರದ ಮೇಲೆ ಪೊಲೀಸರು ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಆಸ್ಪತ್ರೆಯಲ್ಲಿ ಎರಡು ಪ್ರತ್ಯೇಕ ಐಸೋಲೇಶನ್​ ವಾರ್ಡ್​ಗಳಿವೆ. ಕೊವಿಡ್​ -19 ಸೋಂಕಿತರಿಗೆ ಒಂದು ಹಾಗೂ ವರದಿಗಾಗಿ ಕಾಯುತ್ತಿರುವವರಿಗೆ ಇನ್ನೊಂದು. ಆದರೆ ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ಐಸೋಲೇಶನ್​ನಲ್ಲಿರುವವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಹಾಗಾಗಿ ಇದೇ ಆಸ್ಪತ್ರೆಯಿಂದ ಪದೇಪದೆ ಸೋಂಕಿತರು ಪರಾರಿಯಾಗುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಐಫೋನ್​ ತಂದು ಠಾಣೆಗೆ ನೀಡಿದ ಪ್ರಾಮಾಣಿಕ ಕೂಲಿ ಕಾರ್ಮಿಕನಿಗೆ ಶಾಲು ಹೊದೆಸಿ ಸನ್ಮಾನ ಮಾಡಿದ ಪೊಲೀಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 1 =
Remember me
