ಸಂಭಾಲ್​: ಹೈ ಸ್ಕೂಲ್​ ವಿದ್ಯಾಭ್ಯಾಸದಲ್ಲಿರುವ ಮಕ್ಕಳಿಗೆ ಯಾವುದು ಮುಖ್ಯ? ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಡಿಪಾಯವಾಗಬೇಕಾಗಿರುವ ಈ ವಯಸ್ಸಿನಲ್ಲಿ ವಿದ್ಯಾಭ್ಯಾಸದತ್ತ ಮತ್ತು ತಮ್ಮ ಪ್ರತಿಭೆಗಳತ್ತ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ಹಿರಿಯರು. ಆದರೆ ಕೆಲವು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕು, ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅಂತದ್ದೇ ಒಂದು ಸ್ಟೋರಿ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಅಮಾನಿಕೆರೆಯಲ್ಲಿ ಅಂತರಗಂಗೆ ನಿಯಂತ್ರಣಕ್ಕೆ ಕ್ರಮ: ಶಾಸಕ ಜಿ.ಬಿ.ಜ್ಯೋತಿಗಣೇಶ್
10ನೇ ತರಗತಿಯ ಬಾಲಕನೊಬ್ಬನನ್ನು 9ನೇ ತರಗತಿಯ ಬಾಲಕಿ ಪ್ರೀತಿಸುತ್ತಿದ್ದಳು. ಈ ಪ್ರೀತಿ ವಿಚಾರ ಎರಡೂ ಕುಟುಂಬಗಳಿಗೆ ಗೊತ್ತಾಗಿದೆ. ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯತಿ ಮಾಡಿ ಇಬ್ಬರಿಗೂ ಬುದ್ಧಿ ಹೇಳಿದ್ದಾರೆ. ನಿಮ್ಮದು ಪ್ರೀತಿಸುವ ವಯಸ್ಸಲ್ಲ ಎಂದು ತಿಳಿಹೇಳಲಾಗಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಬಾಲಕ, ತನ್ನನ್ನು ಮದುವೆಯಾಗು ಎಂದು ಬಾಲಕಿಯನ್ನು ಪೀಡಿಸಿದ್ದಾನೆ.
ಅದೇ ಹುಚ್ಚು ಪ್ರೀತಿಯನ್ನು ನಂಬಿದ ಬಾಲಕಿ, ತನ್ನ ಪ್ರಿಯತಮನೊಂದಿಗೆ ಮನೆ ಬಿಟ್ಟು ಬಂದಿದ್ದಾಳೆ. ಬುಧವಾರ ಮನೆ ಬಿಟ್ಟು ಬಂದ ಬಾಲಕಿ, ಗುರುವಾರ ರಾತ್ರಿ ಹತ್ತಿರದ ಕಾಡಿನ ಮರವೊಂದರಲ್ಲಿ ಶವವಾಗಿ ನೇತಾಡುವಂತಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುಳಿವು
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿಯಲ್ಲಿ ಕಂಡುಬಂದಿದೆ. ಇಬ್ಬರೂ ಪ್ರೇಮಿಗಳು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅದರೆ ಬಾಲಕನ ಕೊರಳಿಗೆ ಬಿಗಿದಿದ್ದ ಹಗ್ಗ ಲಡ್ಡಾಗಿದ್ದಿದ್ದರಿಂದ ಆತ ಸಾವನ್ನಪ್ಪಿಲ್ಲ, ಬಾಲಕಿ ಮಾತ್ರ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ತಿನ್ನುವ ಮೀನಿನ ಮಾಂಸದೊಳಗೆ ಕಾರ್ಕೋಟಕ ವಿಷ..!

ಗ್ರಾಮದಲ್ಲಿದ್ದವರಿಗೆಲ್ಲ ಕರೊನಾ ವೈರಸ್ ಸೋಂಕು- ಒಬ್ಬ ಮಾತ್ರ ಬಚಾವ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
