ಪತಂಚೆರುವು:ಬಾಯ್​ಫ್ರೆಂಡ್​ ಮದುವೆಗೆ ಒಪ್ಪದಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪತಂಚೆರುವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತಂಚೆರವು ವಲಯದ ಲಕ್ದರಮ್​ ಗ್ರಾಮದ ನಿವಾಸಿ ಶ್ರಾವಣಿ (21) ಮೃತ ದುರ್ದೈವಿ. ಅದೇ ಗ್ರಾಮದ ವೆಂಕಟರಾಮಿರೆಡ್ಡಿ ಅಲಿಯಾಸ್​ ವಿಕ್ಕಿ ಎಂಬುವನ ಪ್ರೀತಿಯ ಬಲೆಯಲ್ಲಿ ಶ್ರಾವಣಿ ಸಿಲುಕಿದ್ದಳು. ಶ್ರಾವಣಿಯ ಅಂಕಲ್ ರಾಜಶೇಖರ್​ ರೆಡ್ಡಿ​ ಮದುವೆ ಬಗ್ಗೆ ವಿಕ್ಕಿ ಜತೆ ಮಾತನಾಡಿದ್ದರು. ಆದರೆ, ಆಕೆಯನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನಿರಾಕರಿಸಿದ್ದ. ಹಾಗದರೆ ಇನ್ನೆಂದು ಶ್ರಾವಣಿಯನ್ನು ಹಿಂಬಾಲಿಸಬಾರದು ಎಂದು ವಿಕ್ಕಿಗೆ ರಾಜಶೇಖರ್​ ರೆಡ್ಡಿ ಬುದ್ಧಿ ಹೇಳಿ ಬಂದಿದ್ದ.
ಇದನ್ನೂ ಓದಿರಿ:ಕುಡಿದು ಸಹೋದರಿ ಮನೆಗೇ ಹೋಗಿ ರೇಪ್​ ಮಾಡಿದ; ಗೆಳೆಯನಿಂದ ಅದನ್ನೂ ವಿಡಿಯೋ ಮಾಡಿಸಿದ…
ಹೀಗಿರುವಾಗ ರಾಜಶೇಖರ್​ ರೆಡ್ಡಿ ಕಳೆದ ವರ್ಷ ಮೃತಪಡುತ್ತಾರೆ. ಇದಾದ ಬೆನ್ನಲ್ಲೇ ವಿಕ್ಕಿ, ಶ್ರಾವಣಿಯನ್ನು ಹಿಂಬಾಲಿಸಲು ಆರಂಭಿಸುತ್ತಾನೆ ಮತ್ತು ಇಷ್ಟಪಡುತ್ತಿರುವುದಾಗಿ ಹೇಳುತ್ತಾನೆ. ಶ್ರಾವಣಿ ಸಹ ಪ್ರೀತಿಸುತ್ತಿರುತ್ತಾಳೆ. ಈ ವಿಚಾರ ಶ್ರಾವಣಿ ತಾಯಿ ವಿಜಯಲಕ್ಷ್ಮಿ ಗಮನಕ್ಕೆ ಬರುತ್ತದೆ. ನಂತರ ತನ್ನ ಮಗಳೊಂದಿಗೆ ಮಾತನಾಡದಂತೆ ವಿಕ್ಕಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ.
ಇದರ ನಡುವೆ ವಿಜಯಲಕ್ಷ್ಮಿ ಅವರ ಹಿರಿಯ ಸಹೋದರ ಮರಣ ಹೊಂದಿದಾಗ ಅಂತ್ಯಸಂಸ್ಕಾರಕ್ಕೆಂದು ಇಡೀ ಕುಟುಂಬ ಊರಿಗೆ ತೆರಳುತ್ತಾರೆ. ಭಾನುವಾರ ಮಧ್ಯಾಹ್ನವೇ ಅಂತ್ಯಸಂಸ್ಕಾರದ ನಡುವೆಯೇ ಶ್ರಾವಣಿ ಮನೆಗೆ ಮರಳುತ್ತಾಳೆ. ಇತ್ತ ಪಾಲಕರು ಸಹ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವ ಶ್ರಾವಣಿಯನ್ನು ನೋಡುತ್ತಿದ್ದಂತೆಯೇ ಪಾಲಕರ ಆಕ್ರಂದನ ಮುಗಿಲು ಮುಟ್ಟುತ್ತದೆ.
ಇದನ್ನೂ ಓದಿರಿ:ಚಿಕ್ಕಪ್ಪಾ… ಎನ್ನುತ್ತಲೇ ಪ್ರೀತಿಯಿಂದ ತಬ್ಬಿಕೊಳ್ಳಲು ಕೈಚಾಚಿದ 5 ವರ್ಷದ ಮಗಳ ಕತ್ತನ್ನೇ ಕೊಯ್ದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ
ಇದಾದ ಬಳಿಕ ಮಗಳಿಗೆ ಪ್ರೀತಿಯ ಹೆಸರಲ್ಲಿ ವಿಕ್ಕಿ ಮೋಸ ಮಾಡಿದ್ದಾನೆ. ಆಕೆಯ ಆತ್ಮಹತ್ಯೆಗೆ ಇದೇ ಕಾರಣವೆಂದು ದೂರು ನೀಡುತ್ತಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದರು. ಅದಕ್ಕೂ ಮುನ್ನ ಶ್ರಾವಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪತಂಚೆರುವು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.(ಏಜೆನ್ಸೀಸ್​)
ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ಎಫ್​ಐಆರ್​ ದಾಖಲಿಸಲು ಒಂದು ಲಕ್ಷ ರೂ. ಲಂಚ: ಲೇಡಿ ಸಬ್​ ಇನ್ಸ್​ಪೆಕ್ಟರ್, ಪೇದೆ ಅರೆಸ್ಟ್​​

ಲಂಚ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪೊಲೀಸರು! ಎಸ್ಕೇಪ್​ ಆಗಲು ಹೋಗಿ ಕಾಲು ಮುರಿದುಕೊಂಡ ಪೇದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
