ಆಲಪ್ಪುಳ:ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 27 ವರ್ಷಗಳ ಬಳಿಕ ಬಂಧಿಸಿರುವ ಘಟನ ಕೇರಳದ ಆಲಪ್ಪುಳದಲ್ಲಿ ನಡೆದಿದೆ.ಇದನ್ನೂ ಓದಿ:ಭೂಮಿ ಕಳೆದುಕೊಂಡವರಿಗೆ ಪರಿಹಾರ ಮರಿಚಿಕೆ: ಅನಿಲ ಮೆಣಸಿನಕಾಯಿ – ಗ್ರಾಮೀಣಾಭಿವೃದ್ಧಿ ವಿವಿ ಸ್ಥಾಪನೆಯ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಅಕ್ರಮ: ರವಿಕಾಂತ ಅಂಗಡಿಬಂಧಿತ ಮಹಿಳೆಯನ್ನು ರೆಜಿ ಎಂದು ಗುರುತಿಸಲಾಗಿದ್ದು, ಆಕೆ 1990ರ ಮರಿಯಮ್ಮ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾಳೆ.ಘಟನೆ ಹಿನ್ನೆಲೆ:1990ರ ಫೆಬ್ರವರಿ 21ರಂದು ಕೇರಳದ ಅಲಪ್ಪುಳ ಜಿಲ್ಲೆಯ ಮಾವೇಲಿಕ್ಕಾರದಲ್ಲಿ ಮರಿಯಮ್ಮ (61) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಆರೋಪಿ ರೇಜಿ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಮರಿಯಮ್ಮನ ಸೇವೆ ಮಾಡುತ್ತಿದ್ದರು. ಅಂದು ನಡೆದ ಕೃತ್ಯದಲ್ಲಿ ಮರಿಯಮ್ಮಗೆ ಚಾಕುವಿನಿಂದ 9 ಬಾರಿ ಇರಿದು ಚಿನ್ನದ ಸರ ಕದ್ದು ಕಿವಿ ಕತ್ತರಿಸಿ, ಕಿವಿಯೋಲೆ ಎಸೆದು ಹೋಗಿದ್ದರು.ರೇಜಿ ಮನೆ ಮಗಳಂತಿದ್ದು, ಯಾರಿಗೂ ಅನುಮಾನಬಾರದಂತೆ ನಟಿಸಿದ್ದಳು. ಕೂಲಂಕಷ ತನಿಖೆಯ ನಂತರ, ಪೊಲೀಸರು ರೇಜಿಯನ್ನು ಅನುಮಾನದ ಆಧಾರದ ಮೇಲೆ ಬಂಧಿಸಿದ್ದರು. ಆದರೆ ಮೂರು ವರ್ಷಗಳ ನಂತರ, ಮಾವೆಲಿಕ್ಕರ್ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ರಾಜಿಯನ್ನು ದೋಷಮುಕ್ತಗೊಳಿಸಿತ್ತು.ಇದನ್ನೂ ಓದಿ:ಮಾದಕ ವ್ಯಸನಕ್ಕೆ ಒಳಗಾಗುವುದು ಸುಲಭ, ಹೊರಬರುವುದು ಕಷ್ಟ – ಎ. ಬಿ ಮಠಪತಿನಂತರ, ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ 1996ರ ಸೆಪ್ಟೆಂಬರ್ 11ರಂದು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ರಾಜಿ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಭಯಭೀತರಾದ ರೇಜಿ ತಲೆಮರೆಸಿಕೊಂಡಿದ್ದಳು.ಆಕೆಯ ಪತ್ತೆಗಾಗಿ ಕೇರಳ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಸಿಕ್ಕಿರಲಿಲ್ಲ. ನಂತರ ಅವಳು ತನ್ನ ಹೆಸರನ್ನು ಬದಲಾಯಿಸಿಕೊಂಡು ಕೊಟ್ಟಾಯಂ ಜಿಲ್ಲೆಯಲ್ಲಿ ಕೂಲಿ ಕೆಲಸವನ್ನು ಮಾಡುತ್ತ ತಮಿಳುನಾಡಿನ ಕಟ್ಟಡ ಕಾರ್ಮಿಕನನ್ನು ಮದುವೆಯಾಗಿ ಅವನೊಂದಿಗೆ ಎರ್ನಾಕುಲಂಗೆ ತೆರಳಿದ್ದಳು.ಇದನ್ನೂ ಓದಿ:ಬಸವಣ್ಣ ಜೀವನ ಉತ್ಸಾಹದ ಪ್ರತೀಕ ; ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಮತ
1999ರಲ್ಲಿ ಮದುವೆಯಾದ ಅವರು ಟಕ್ಕಳಕ್ಕೆ ಬಂದು ಕೆಲ ದಿನ ಕೋಟಮಂಗಲದ ಪಲ್ಲರಿಮಂಗಲ ಪಂಚಾಯ್ತಿಯ ಅಟ್ಟಿವಾಡಕ್ಕೆ ಬಂದು ಮಿನಿ ರಾಜು ಎಂಬ ಹೆಸರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದಳು. ಜತೆಗೆ ಐದು ವರ್ಷಗಳಿಂದ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ವಾರಂಟ್ ಹೊರಡಿಸಿದಾಗ ಈ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರ ಬಳಿಯ ಹಳೆಯ ಪತ್ರಿಕೆಯ ಫೋಟೋದಲ್ಲಿ ಆಕೆಯ ಬರೆದ ವಿಳಾಸ ಮಾತ್ರ ಇತ್ತು. ರೇಜಿ ಮುಂಬೈ, ತಮಿಳುನಾಡು ಅಥವಾ ಗುಜರಾತ್‌ನಲ್ಲಿ ಅಥವಾ ಯಾವುದೋ ಅನಾಥಾಶ್ರಮದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸ್ಥಳೀಯರಿಂದ ಲಭಿಸಿದ್ದು, ಆದರೆ ಯಾವುದೂ ಖಚಿತವಾಗಿರಲಿಲ್ಲ.ಇದನ್ನೂ ಓದಿ:ಟಿಕೆಟ್​ ವಿವಾದ; ಕೆಲಸ ತೊರೆದ ಮಹಿಳಾ ಬಸ್ ಡ್ರೈವರ್​ಗೆ ಕಾರು ಗಿಫ್ಟ್ ಕೊಟ್ಟ ನಟ ಕಮಲ್ ಹಾಸನ್ಕೊನೆಗೆ ಆಕೆಯ ಗಂಡನ ವಿಳಾಸವನ್ನು ಬೆನ್ನಟ್ಟಿದ್ದ ಚೆಂಗನ್ನೂರು ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣದ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 17 =
Remember me
