ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ನಡೆದ ಯುನೆಸ್ಕೋದ 46ನೇ ವಿಶ್ವ ಪರಂಪರೆ ಸಮಿತಿ ಅಧಿವೇಶನದಲ್ಲಿ ಶುಕ್ರವಾರ(ಜುಲೈ 26) ಅಸ್ಸಾಂನ ಅಹೋಮ್ ರಾಜವಂಶದ ಮೊಯಿದಮ್‌ಗಳನ್ನು ಭಾರತದ 43ನೇ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲಾಯಿತು.
ಇದನ್ನು ಓದಿ:ಸರ್ಕಾರಕ್ಕೆ ಹಣಬೇಕೆಂದು ತೆರಿಗೆ ಹೆಚ್ಚಿಸಿಲ್ಲ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​
ಇದು ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲಸ ಮಾಡುವ ವಿಶ್ವಸಂಸ್ಥೆಯ ಸಂಸ್ಥೆಯಿಂದ ಈ ಪ್ರತಿಷ್ಠಿತ ಮನ್ನಣೆಯನ್ನು ಪಡೆದ ಈಶಾನ್ಯ ರಾಜ್ಯದ ಮೂರನೇ ಸ್ಥಳವಾಗಿದೆ. ಈ ಮೊದಲು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ್ ರಾಷ್ಟ್ರೀಯ ಉದ್ಯಾನವನಗಳು 1985ರಲ್ಲಿ ನೈಸರ್ಗಿಕ ವರ್ಗದಲ್ಲಿ ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಲಾಗಿದೆ.

ಅಸ್ಸಾಂನಲ್ಲಿರುವ ಚರೈಡಿಯೊ ಮೊಹಿದಮ್​​​ ಈಶಾನ್ಯ ಭಾರತದ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. ಈ ಪ್ರಾಚೀನ ಸಮಾಧಿ ದಿಬ್ಬಗಳನ್ನು13 ರಿಂದ 18ನೇ ಶತಮಾನದ ಅವಧಿಯಲ್ಲಿ ಅಹೋಮ್ ರಾಜರು ನಿರ್ಮಿಸಿದರು ಎನ್ನಲಾಗಿದೆ. ಇದಕ್ಕೂ ಮೊದಲು ಏಷ್ಯಾದ ಯಾವುದೇ ಸಮಾಧಿ ಸ್ಥಳವನ್ನು ವಿಶ್ವ ಪರಂಪರೆಯೆಂದು ಘೋಷಿಸಲಾಗಿಲ್ಲ.
ಇದು ಭಾರತದ ಪ್ರಮುಖ ಮಧ್ಯಕಾಲೀನ ಅಹೋಮ್ ರಾಜವಂಶದ ರಾಜಮನೆತನದ ಸದಸ್ಯರಿಗಾಗಿ ನಿರ್ಮಿಸಲಾದ ಸಮಾಧಿ ದಿಬ್ಬವಾಗಿದೆ. ಇದನ್ನು ಅಸ್ಸಾಂನ ಪಿರಮಿಡ್ ಎಂದೂ ಕರೆಯುತ್ತಾರೆ. 1228 ರಿಂದ 1826ರಲ್ಲಿ ಯಾಂಡಬೊ ಒಪ್ಪಂದದ ಮೂಲಕ ಬ್ರಿಟಿಷರಿಗೆ ಸ್ವಾಧೀನಪಡಿಸಿಕೊಳ್ಳುವವರೆಗೆ 600 ವರ್ಷಗಳ ಕಾಲ ಅಸ್ಸಾಂ ಅನ್ನು ಆಳಿದ ಅಹೋಮ್‌ಗಳ ಮೊದಲ ರಾಜಧಾನಿ ಚರೈಡಿಯೊ ಆಗಿತ್ತು. ಶಾಹಿ ಮೈದಾನವು ಅಸ್ಸಾಂ ರಾಜ್ಯದ ಚರೈಡಿಯೊದಲ್ಲಿ ಮಾತ್ರ ಕಂಡುಬರುತ್ತದೆ.

ಪ್ರತಿ ಮೊಯಿದಮ್ ಅಹೋಮ್ ಆಡಳಿತಗಾರ ಅಥವಾ ಗಣ್ಯರ ವಿಶ್ರಾಂತಿ ಸ್ಥಳವೆಂದು ನಂಬಲಾಗಿದೆ. ಅವರ ಅವಶೇಷಗಳು ಮತ್ತು ಅಮೂಲ್ಯವಾದ ಕಲಾಕೃತಿಗಳು ಮತ್ತು ಸಂಪತ್ತನ್ನು ಇಲ್ಲಿ ಸಂರಕ್ಷಿಸಲಾಗಿದೆ. ಮೊಯಿದಮ್ ಅಸ್ಸಾಮಿಯ ಗುರುತು ಮತ್ತು ಪರಂಪರೆಯ ಶ್ರೀಮಂತ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.
ಅಸ್ಸಾಂನಲ್ಲಿರುವ ಈ ಮೈದಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ಭಾರತ ಸರ್ಕಾರವು 15 ಏಪ್ರಿಲ್ 2014ರಂದು ಯುನೆಸ್ಕೋಗೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಮೊಯಿದಮ್ ಅನ್ನು 2014ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ಜನವರಿ 2023ರಲ್ಲಿ ಭಾರತವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ವಿಶ್ವ ಪರಂಪರೆಯ ಬಿರುದು ಪಡೆದರೆ ಪ್ರವಾಸಿ ದೃಷ್ಟಿಯಿಂದ ಭಾರತಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬ ನಂಬಿಕೆ ಇದೆ. (ಏಜೆನ್ಸೀಸ್​​)
ಕಾರ್ಗಿಲ್​ ವಿಜಯದಿವಸ್​; ತನ್ನ ತಪ್ಪುಗಳಿಂದ ಪಾಕಿಸ್ತಾನ ಇನ್ನೂ ಪಾಠ ಕಲಿತಿಲ್ಲ ಪ್ರಧಾನಿ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 6 =
Remember me
