ನವದೆಹಲಿ: ಅವರು ಕರೊನಾದಿಂದಾಗಿ ಸತ್ತ 200ಕ್ಕೂಅಧಿಕ ಮಂದಿಯ ಶವಗಳನ್ನು ತನ್ನ ಆಂಬುಲೆನ್ಸ್​ನಲ್ಲಿ ಸಾಗಿಸಿದ್ದರು. ಆರು ತಿಂಗಳ ಕಾಲ ಮನೆಯಿಂದ ದೂರವಿದ್ದು ಕರೊನಾ ವಾರಿಯರ್​ ಆಗಿ ಶ್ರಮಿಸಿದ್ದರು. ದುರದೃಷ್ಟವಶಾತ್​ ಕೊನೆಗೆ ಕರೊನಾಗೇ ಬಲಿಯಾದರು!
ಹೀಗೆ ಕರೊನಾಗೆ ಬಲಿಯಾದ ಆಂಬುಲೆನ್ಸ್​ ಚಾಲಕರ ಹೆಸರು ಆರಿಫ್​ ಖಾನ್​. ದೆಹಲಿಯ ಶಹೀದ್ ಭಗತ್ ಸಿಂಗ್​ ಸೇವಾ ದಳ ಎಂಬ ಎನ್​ಜಿಒಗೆ ಸೇರಿದ್ದ ಆಂಬುಲೆನ್ಸ್ ಚಲಾಯಿಸುತ್ತಿದ್ದ ಖಾನ್​, ಕಳೆದ ಆರು ತಿಂಗಳಿಂದ ತನ್ನ ಮನೆಯಿಂದ 28 ಕಿ.ಮೀ. ದೂರದಲ್ಲಿದ್ದ ಆಂಬುಲೆನ್ಸ್ ಪಾರ್ಕಿಂಗ್ ಲಾಟ್​ನಲ್ಲೇ ಬಹುತೇಕ ಕಾಲ ಕಳೆದಿದ್ದರು. ಹೀಗೆ 200ಕ್ಕೂ ಅಧಿಕ ಕೋವಿಡ್​ ರೋಗಿಗಳ ಶವಗಳನ್ನು ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದ, ಖಾನ್​ ಅ. 3ರಂದು ಅನಾರೋಗ್ಯಕ್ಕೀಡಾಗಿದ್ದರು. ನಂತರ ಕರೊನಾ ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಖಾನ್​ ಒಬ್ಬರೇ ಮನೆಯ ಜೀವನಾಧಾರವಾಗಿದ್ದರು. ಬರುತ್ತಿದ್ದ 16 ಸಾವಿರ ರೂ. ಸಂಬಳದಲ್ಲಿ 9 ಸಾವಿರ ರೂ. ಮನೆ ಬಾಡಿಗೆಗೇ ಖರ್ಚಾಗುತ್ತಿತ್ತು ಎನ್ನಲಾಗಿದೆ.
ಬಿಜೆಪಿ ಮಾಜಿ ಶಾಸಕ ಜಿತೇಂದ್ರ ಸಿಂಗ್​ ಶುಂಠಿ ಈ ಎನ್​ಜಿಒ ನಡೆಸುತ್ತಿದ್ದು, ಖಾನ್​ ನಿಧನದಿಂದ ಇತರ ಚಾಲಕರ ನೈತಿಕ ಸ್ಥೈರ್ಯ ಕುಸಿದಿದೆ ಎಂದಿದ್ದಾರೆ. ವಾರಸುದಾರರಿಲ್ಲದ ಶವಗಳನ್ನು ಹಲವು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿರುವ ಈ ಎನ್​ಜಿಒ, ರಕ್ತದಾನ ಶಿಬಿರ ಜತೆಗೆ ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಕೆಲಸಗಾರರಿಗೆ ಲಂಗರ್ ಸೇವೆಯನ್ನು ನೀಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 1 =
Remember me
