ಮುಂಬೈ:ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ವಲಯದ ಪ್ರಮುಖ ಕಂಪನಿಯಾಗಿರುವ ಜೆನ್ಸೋಲ್ ಇಂಜಿನಿಯರಿಂಗ್ ಲಿಮಿಟೆಡ್, ಗುಜರಾತ್ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಸಹಿ ಮಾಡಿದ ಪ್ರಮುಖ ಒಪ್ಪಂದದಿಂದ ಗುರುತಿಸಲ್ಪಟ್ಟ ಈ ರೂ 2,000 ಕೋಟಿಯ ಬೃಹತ್​ ಮೈತ್ರಿಯಿಂದಾಗಿ ಅತ್ಯಾಧುನಿಕ ಜೆನ್ಸೋಲ್ ಇವಿ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತದೆ, ಹಸಿರು ಉದ್ಯೋಗಗಳ ಮೂಲಕ 1,500 ವ್ಯಕ್ತಿಗಳಿಗೆ ಉದ್ಯೋಗ ನೀಡುತ್ತದೆ. ಅಲ್ಲದೆ, ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆಯ ವೈವಿಧ್ಯಮಯ ಬಂಡವಾಳವು ಗುಜರಾತ್‌ನ ಇವಿ ಪರಿಸರ ವ್ಯವಸ್ಥೆಯನ್ನು ಸಮೃದ್ಧಗೊಳಿಸುತ್ತದೆ.
ಈ ಕಾರ್ಯತಂತ್ರದ ಜೋಡಣೆಯು ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ಭಾರತದ ಹಸಿರು ದೃಷ್ಟಿಗೆ ಉಭಯ ಪಕ್ಷಗಳ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸುತ್ತದೆ,
ಈ ಹಿಂದೆ, ಜೆನ್ಸೋಲ್​ (Gensol) ಇಂಜಿನಿಯರಿಂಗ್ ಕಂಪನಿಯು ಭಾರತದ ಪ್ರಮುಖ ಉಕ್ಕು ಉತ್ಪಾದಕ ಮತ್ತು ಉನ್ನತ ಫೆರೋ ಮಿಶ್ರಲೋಹ ರಫ್ತುದಾರ ಎಸ್​ಇಎಂಎಲ್​ (SEML) ಜತೆ ಪಾಲುದಾರಿಕೆ ಹೊಂದಿತ್ತು. ಎಸ್​ಇಎಂಎಲ್​ನ ಛತ್ತೀಸ್‌ಗಢ ಸ್ಥಾವರಕ್ಕಾಗಿ 33 ಮೆವಾ ವಾಟ್​ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಒಪ್ಪಂದವನ್ನು ಮಾಡಿಕೊಂಡಿದೆ, 138.72 ಕೋಟಿ ರೂ.ಗಳ ಈ ಯೋಜನೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ, ಇದು ಜೆನ್ಸೋಲ್‌ಗೆ ಮಹತ್ವದ ಮೈಲಿಗಲ್ಲಾಗಿದೆ.
ಜೆನ್ಸೋಲ್​ ಇಂಜಿನಿಯರಿಂಗ್ ಲಿಮಿಟೆಡ್​ (Gensol Engineering Ltd) ಕಂಪನಿಯ ಷೇರುಗಳು ಕೇವಲ 1 ವರ್ಷದಲ್ಲಿ 150 ಪ್ರತಿಶತದಷ್ಟು ಹಾಗೂ 3 ವರ್ಷಗಳಲ್ಲಿ 4,000 ಪ್ರತಿಶತದಷ್ಟು ಆದಾಯವನ್ನು ನೀಡಿದೆ.
ಮಂಗಳವಾರ ಮತ್ತು ಬುಧವಾರ ಕೂಡ ಈ ಕಂಪನಿಯ ಷೇರುಗಳು ಬಿಎಸ್​ಇಯಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ಕಂಡವು. ಹಿಂದಿನ ದಿನ ರೂ 803.06 ರಿಂದ ರೂ 843.75 ಕ್ಕೆ ಮಂಗಳವಾರ ತಲುಪಿದವೆ. ಬುಧವಾರ ಕೂಡ 41.70 ರೂಪಾಯಿ ಏರಿಕೆ ಕಂಡಿವೆ.
ಈ ಕಂಪನಿಯು 3,200 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಸೆಪ್ಟೆಂಬರ್ 30, 2023 ರ ಹೊತ್ತಿಗೆ ಕಂಪನಿಯ ಆರ್ಡರ್ ಬುಕ್ 531 ಕೋಟಿ ರೂ.ಗಳಷ್ಟಿದೆ. ಎಫ್‌ಐಐಗಳು (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ) ತಮ್ಮ ಪಾಲನ್ನು ಶೇಕಡಾ 2.57 ಕ್ಕೆ ಹೆಚ್ಚಿಸಿವೆ. ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಮುಕುಲ್ ಅಗರವಾಲ್ ಈ ಕಂಪನಿಯಲ್ಲಿ ಗಮನಾರ್ಹ ಪಾಲನ್ನು (ಶೇ. 1.64) ಹೊಂದಿದೆ.
ಜೆನ್ಸೋಲ್​ ಇಂಜಿನಿಯರಿಂಗ್ ಲಿಮಿಟೆಡ್​ ನವೀಕರಿಸಬಹುದಾದ ಇಂಧನ ಯೋಜನೆ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಸೌರ ಸ್ಥಾವರಗಳನ್ನು ನಿರ್ಮಿಸುತ್ತದೆ. ಜೆನ್ಸೋಲ್ ಇಂಜಿನಿಯರಿಂಗ್ ಭಾರತದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ತಯಾರಿಸುತ್ತದೆ.

ಏಕನಾಥ್ ಶಿಂಧೆ ಬಣವೇ ನೈಜ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್ ಮಹಾ ತೀರ್ಪಿಗೆ ಆಧಾರಗಳೇನು?

ಮೇಲ್ಛಾವಣಿ ಸೌರ ವಿದ್ಯುತ್ ಸಬ್ಸಿಡಿ ಹೆಚ್ಚಳ ; ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಲಾಭದಾಯಕ

ಬಿಎಸ್​ಇ ಸೂಚ್ಯಂಕವು 270 ಅಂಕ ಏರಿಕೆ: ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳಿಗೆ ಉತ್ತಮ ಲಾಭ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four − 2 =
Remember me
