ಮುಂಬೈ:ಡೈನಾಕಾನ್ಸ್ ಸಿಸ್ಟಮ್ಸ್ ಅಂಡ್ ಸೊಲ್ಯೂಷನ್ಸ್ ಲಿಮಿಟೆಡ್ (Dynacons Systems and Solutions Limited) ಕಂಪನಿಯು ಬ್ರೇಕ್‌ಫಿಕ್ಸ್ ಸೇವೆಗಳು, ಸಿಸ್ಟಮ್ಸ್ ಇಂಟಿಗ್ರೇಷನ್ ಸೇವೆಗಳು, ಮೂಲಸೌಕರ್ಯ ಸೇವೆಗಳು, ಕ್ಲೌಡ್ ಕಂಪ್ಯೂಟಿಂಗ್, ಮುದ್ರಣ ಸೇವೆಗಳು, ಅಪ್ಲಿಕೇಶನ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಒಳಗೊಂಡಿರುವ ವಿವಿಧ ಎಂಟರ್‌ಪ್ರೈಸ್ ಐಟಿ ಮತ್ತು ಆಫೀಸ್ ಆಟೊಮೇಷನ್ ಸೇವೆಗಳನ್ನು ಒದಗಿಸುತ್ತದೆ.
ಇದೊಂದು ಸ್ಮಾಲ್​ ಕ್ಯಾಪ್​ ಕಂಪನಿಯಾಗಿದೆ. ಕಳೆದ 5 ವರ್ಷಗಳ ಹಿಂದೆ ಈ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದವರು ಅಪಾರ ಲಾಭ ಗಳಿಸಿದ್ದಾರೆ.
ಏಪ್ರಿಲ್ 2020 ರಲ್ಲಿ ಈ ಕಂಪನಿಯ ಷೇರುಗಳನ್ನು ತಲಾ 17.75 ರೂ.ಗೆ ಮಾರಾಟ ಮಾಡಲಾಗಿತ್ತು. ಈ ಷೇರುಗಳ ಬೆಲೆ ಈಗ 759 ರೂಪಾಯಿ ಬೆಲೆ ತಲುಪಿದೆ. ಈ ಸಮಯದಲ್ಲಿ, ಇದು ಅಂದಾಜು 4300 ಪ್ರತಿಶತದಷ್ಟು ದಿಗ್ಭ್ರಮೆಗೊಳಿಸುವ ಆದಾಯವನ್ನು ಸೃಷ್ಟಿಸಿದೆ. ಈ ವೇಳೆ ರೂ.1 ಲಕ್ಷದ ಹೂಡಿಕೆ ರೂ. 44 ಲಕ್ಷಕ್ಕೂ ಹೆಚ್ಚು ಬೆಳೆದಿದೆ.
2020ರಲ್ಲಿ ಈ ಸ್ಟಾಕ್ 162 ಪ್ರತಿಶತದಷ್ಟು ಮಲ್ಟಿ-ಬ್ಯಾಗರ್ ಲಾಭವನ್ನು ನೀಡಿದೆ. ಇದರ ನಂತರ 2021ರಲ್ಲಿ 151 ಪ್ರತಿಶತ ಪ್ರಭಾವಶಾಲಿ ಆದಾಯವನ್ನು ನೀಡಿದೆ. 2022ರಲ್ಲಿ 112 ಪ್ರತಿಶತದಷ್ಟು ಲಾಭದೊಂದಿಗೆ ಈ ವೇಗವು ಮುಂದುವರೆಯಿತು. 2023ರಲ್ಲಿ ಶೇಕಡಾ 77 ಲಾಭ ನೀಡಿದೆ.
ಈ ವರ್ಷ ಈ ಕಂಪನಿಯು ಹಲವಾರು ಆರ್ಡರ್​ಗಳನ್ನು ಪಡೆದುಕೊಂಡಿದೆ. ನೆಟ್‌ವರ್ಕ್ ಆಪರೇಷನ್ ಸೆಂಟರ್ ಮತ್ತು ಕಮಾಂಡ್ ಸೆಂಟರ್ ಸೇರಿದಂತೆ ಇಂಟಿಗ್ರೇಟೆಡ್ ಟೆಲಿಕಾಂ ನೆಟ್‌ವರ್ಕ್‌ಗಳು ಮತ್ತು ಐಟಿ ಪರಿಹಾರಗಳನ್ನು ಒದಗಿಸಲು ಕಂಪನಿಯು ಜನವರಿ 12 ರಂದು ಬಿಎಸ್‌ಎನ್‌ಎಲ್‌ನಿಂದ ರೂ 90 ಕೋಟಿಯ ಕಾಮಗಾರಿ ಆದೇಶ ಪಡೆದಿದೆ.
ಜನವರಿ 6 ರಂದು, ಹೈಪರ್-ಕನ್ವರ್ಜ್ಡ್ ಸಾಫ್ಟ್‌ವೇರ್ ಮತ್ತು ಮೂಲಸೌಕರ್ಯ ಪರಿಹಾರಗಳಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 214 ಕೋಟಿ ರೂ. ಆರ್ಡರ್​ ಗಳಿಸಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಕಂಪನಿಯಿಂದ 137 ಕೋಟಿ ರೂ. ಆದೇಶ ಪಡೆದುಕೊಂಡಿದೆ.
ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್ ಲಿಮಿಟೆಡ್ (ಡಿಎಸ್ಎಸ್ಎಲ್) ಮಾಹಿತಿ ತಂತ್ರಜ್ಞಾನ ಕ್ಷೇತ್ರದ (ಐಟಿ) ಕಂಪನಿಯಾಗಿದೆ. ಈ ಸಂಸ್ಥೆಯು ಸಂಪೂರ್ಣ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದೆ. ಈ ಕಂಪನಿಯು 1995 ರಲ್ಲಿ ಸ್ಥಾಪನೆಯಾಯಿತು. ಕಂಪನಿಯ ಮುಖ್ಯ ಕಚೇರಿ ಮುಂಬೈನಲ್ಲಿದೆ.
ಇದು ಎಂಟರ್‌ಪ್ರೈಸ್ ವ್ಯವಹಾರ, ಇ-ಕಾಮರ್ಸ್, ಇಂಟರ್ನೆಟ್ ಪರಿಹಾರಗಳು, ಸಲಹಾ ಸೇವೆಗಳು ಮತ್ತು ಸಿಸ್ಟಮ್‌ಗಳ ಏಕೀಕರಣದಂತಹ ಸಾಫ್ಟ್‌ವೇರ್-ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಇದು ಡೈನಾಕೇರ್, ಡೈನಾಇಆರ್‌ಪಿ ಮತ್ತು ಡೈನಾಫೋಲಿಯೊದಂತಹ ಉತ್ಪನ್ನಗಳನ್ನು ಒದಗಿಸುತ್ತದೆ.

ಮೊದಲ ದಿನವೇ 200% ಲಾಭದೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ; ಸೋಲಾರ್​ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆ

ದಿವಾಳಿ ಅಂಚಿನಲ್ಲಿದ್ದ ಅನಿಲ್​ ಅಂಬಾನಿಯ ರಿಲಯನ್ಸ್ ಕ್ಯಾಪಿಟಲ್​ ಷೇರುಗಳಿಗೆ ಬರಲಿದೆ ಡಿಮ್ಯಾಂಡು: ಈಗಷ್ಟೇ ಲಾಭ ಮಾಡಿದ ಕಂಪನಿ ಖರೀದಿಸುತ್ತಿದೆ ಹಿಂದುಜಾ ಗ್ರೂಪ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + 13 =
Remember me
