ಪಂಜಾಬ್​​:ಉನ್ನತ ಅಧಿಕಾರಿಗಳು, ರಾಜಕೀಯ ಗಣ್ಯರು, ಉದ್ಯಮಿಗಳಿಗೆ ಸರ್ಕಾರದಿಂದ ಭದ್ರತೆ ನೀಡಲಾಗುತ್ತದೆ.  ಕೆಲವು ನಟ-ನಟಿಯರಿಗೆ ಜೀವ ಬೆದರಿಕೆ ಇದ್ದರೆ ಸರ್ಕಾರ ಭದ್ರತೆ ನಿಯೋಜನೆ ಮಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ಭದ್ರತೆಗೆ ಸಂಬಂಧಿಸಿದ ವಿಡಿಯೋವೊಂದು ಇಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?;ಇದು ಪ್ರಧಾನಿ ಅಥವಾ ಮುಖ್ಯಮಂತ್ರಿ ಅಥವಾ ಬಹುಶಃ ಕೇಂದ್ರ ಸಚಿವರ ಬೆಂಗಾವಲು ಎಂದು ನೀವು ಭಾವಿಸಬಹುದು, ಆದರೆ ನೀವು ತಪ್ಪಾಗಿ ಭಾವಿಸುತ್ತೀರಿ. ಇದು ಪಂಜಾಬ್ ಸಿಎಂ ಅವರ ಪತ್ನಿ ಡಾ. ಗುರುಪ್ರೀತ್ ಕೌರ್ ಅವರ ಬೆಂಗಾವಲು ಪಡೆಯಾಗಿದೆ.
ಡಾ. ಗುರುಪ್ರೀತ್ ಚುನಾಯಿತ ಪ್ರತಿನಿಧಿಯೂ ಅಲ್ಲ ಅಥವಾ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ ಆದರೂ ಅವರಿಗೆ ನೀಡಿರುವ ಭದ್ರತೆ ನೋಡಿದ್ರೆ ಯಾರೋ ಉನ್ನತ ಹುದ್ದೆಯಲಲ್ಲಿರುವ ಅಧಿಕಾರಿ ಎಂದು ಅನ್ನಿಸುತ್ತದೆ.
You might think this is the convoy of the Prime Minister or Chief Minister or perhaps a Union Minister,but you would be mistaken.This is the convoy of Dr. Gurpreet Kaur,wife of our Punjab CM@BhagwantMann. Dr. Gurpreet is neither an elected representative nor does she hold any…pic.twitter.com/PK5waQsIFu— Manik Goyal (@ManikGoyal_)December 17, 2023
You might think this is the convoy of the Prime Minister or Chief Minister or perhaps a Union Minister,but you would be mistaken.This is the convoy of Dr. Gurpreet Kaur,wife of our Punjab CM@BhagwantMann. Dr. Gurpreet is neither an elected representative nor does she hold any…pic.twitter.com/PK5waQsIFu
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದಾಗಿ ಸಿಎಂ ಪತ್ನಿಗೆ 1-2 ಗನ್‌ಮನ್‌ಗಳು ಇರುವುದು ಸಮರ್ಥನೀಯವಾಗಿದೆ ಎಂಬುದನ್ನು ನಾವು ಗಮನಿಸಬೇಕು. ಆದರೆ ಇಲ್ಲಿ ನೂರಾರು ಗನ್‌ಮೆನ್‌ಗಳನ್ನು ಮತ್ತು ಡಜನ್‌ಗಟ್ಟಲೆ ಭದ್ರತಾ ವಾಹನಗಳನ್ನು ಬಳಸುತ್ತಿದ್ದಾರೆ. 2 ಕೋಟಿ ರೂ.ಗೂ ಅಧಿಕ ಮೌಲ್ಯದ ಸರ್ಕಾರಿ ಬುಲೆಟ್‌ಪ್ರೂಫ್ ಲ್ಯಾಂಡ್ ಕ್ರೂಸರ್​ಗಳನ್ನು ಬಳಸಲಾಗುತ್ತದೆ.
ಚುನಾವಣೆಗೂ ಮುನ್ನ ಕೆಲವು ರಾಜಕೀಯ ನಾಯಕರ ಭದ್ರತೆಯ ಬಗ್ಗೆ ದೊಡ್ಡ ಟೀಕೆಯಾಗಿತ್ತು ಆದರೆ ಈಗ ಅವರ ಕುಟುಂಬವೂ ಅವರಿಗಿಂತ ಹೆಚ್ಚಿನ ಭದ್ರತೆಯನ್ನು ಬಳಸುತ್ತಿದೆ. ಸಿಎಂ ಭಗವಂತ್ ಮಾನ್ ಸ್ಪಷ್ಟವಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪಂಜಾಬ್ ಖಜಾನೆಯನ್ನು ಬರಿದು ಮಾಡುತ್ತಿದ್ದಾರೆ. ಇದು ಇಲ್ಲಿಯ ವಾಸ್ತವವಾಗಿ ಎಂದು ನೆಟ್ಟಿಗರು ಸೋಶಿಯಲ್​​ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬಾಯ್‌ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸಲ್ಲ ಅಂತಾ ಅದನ್ನೇ ನಿಲ್ಲಿಸಿದ ಮಹಿಳೆ!; ಸಿಲ್ಲಿ ಕಾರಣ ಸಾಕಾ? ಎಂದ ನೆಟ್ಟಿಗರು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + thirteen =
Remember me
