ಉತ್ತರಕಾಶಿ:ಉತ್ತರಕಾಶಿ ನಿರ್ಮಾಣ ಹಂತದ ಸುರಂಗ ಕುಸಿತಗೊಂಡು ಇದೀಗ ಎರಡು ವಾರಗಳನ್ನು ಸಮೀಪಿಸುತ್ತಿದ್ದು, ಅವಶೇಷಗಳಡಿ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದೀಗ ರಕ್ಷಣಾ ಕಾರ್ಯಾಚರಣೆ ಕುರಿತು ಅಂತಾರಾಷ್ಟ್ರೀಯ ಸುರಂಗಜ್ಞ ಅರ್ನಾಲ್ಡ್ ಡಿಕ್ಸ್ ಹೊಸ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:BBKS10: ಹೆಚ್ಚಾಗ್ತಿದೆ ಕನ್ನಡ ಪದಗಳ ಬಳಕೆ; ಮೈಕಲ್​ ಪ್ರಯತ್ನಕ್ಕೆ ಸಿಕ್ತು ಕಿಚ್ಚನ ಚಪ್ಪಾಳೆ!
“ಅಮೆರಿಕದ ಆಗರ್ ಯಂತ್ರದ ಬ್ಲೇಡ್‌ಗಳು ಅವಶೇಷಗಳಲ್ಲಿ ಸಿಲುಕಿದ ನಂತರ ಕಳೆದ 24 ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈಗ ಅಧಿಕಾರಿಗಳು ಹಸ್ತಚಾಲಿತ ಡ್ರಿಲ್ಲಿಂಗ್ ಅಥವಾ ವರ್ಟಿಕಲ್ ಡ್ರಿಲ್ಲಿಂಗ್ ಇತರ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಒಂದು ಮಿಷನ್ ವಾರದವರೆಗೆ ವಿಳಂಬವಾಗಿದೆ. ಇದು ಬಹಳ ಕಷ್ಟಕರವಾದ ಮಿಷನ್, ನಮಗೆ ಹೆಚ್ಚಿನ ತಾಳ್ಮೆ ಇರಬೇಕು” ಎಂದು ಎನ್‌ಡಿಎಂಎ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೇನ್ ಹೇಳಿದರು.
ಇದನ್ನೂ ಓದಿ:ಬದುಕಿನ ಉಸಿರಾಗಲಿ ಕನ್ನಡ  -ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಆಶಯ -ನೂತನ- ದವನ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
“ಸಿಲುಕಿರುವ ಕಾರ್ಮಿಕರು ಯಾವ ಸಮಯಕ್ಕೆ ಹೊರಬರುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಅಂದರೆ ನಾವು ಆತುರಪಡಬಾರದು. ನಾವು ಅತ್ಯಂತ ಮುಖ್ಯವಾದ ವಿಷಯವನ್ನು ಪರಿಗಣಿಸಬೇಕು ಮತ್ತು ಕಾರ್ಮಿಕರು ಸುರಕ್ಷಿತವಾಗಿ ಮನೆ ಸೇರಲಿದ್ದಾರೆ” ಎಂದು ಸುರಂಗಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿದರು.
“ಶೀಘ್ರವೇ ಅವರ ಕುಟುಂಬದವರೊಂದಿಗೆ ಇರಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಸಿಲುಕಿರುವ ಕಾರ್ಮಿಕರು ಸದ್ಯ ಸುರಕ್ಷಿತವಾಗಿದ್ದು, ಬೆಳಕು, ಆಮ್ಲಜನಕ, ಆಹಾರ, ನೀರು ಮತ್ತು ಔಷಧಿಗಳನ್ನು ತಜ್ಞರು ಒದಗಿಸುತ್ತಿದ್ದಾರೆ” ಎಂದು ಅರ್ನಾಲ್ಡ್ ಹೇಳಿದ್ದಾರೆ,(ಏಜೆನ್ಸೀಸ್).
BBKS10: ಹೆಚ್ಚಾಗ್ತಿದೆ ಕನ್ನಡ ಪದಗಳ ಬಳಕೆ; ಮೈಕಲ್​ ಪ್ರಯತ್ನಕ್ಕೆ ಸಿಕ್ತು ಕಿಚ್ಚನ ಚಪ್ಪಾಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 20 =
Remember me
