ತಮಿಳುನಾಡು:ಇತ್ತೀಚಿನ ದಿನಗಳಲ್ಲಿ ಪುಸ್ತಕವನ್ನು ಕೈಲಿ ಹಿಡಿದು ಓದುವ ಹವ್ಯಾಸ ಮರೆಯಾಗುತ್ತಿದೆ. ಇಲ್ಲೊಬ್ಬ ಹಣ್ಣಿನ ವ್ಯಾಪಾರಿ ತಮ್ಮ ಎಲ್ಲಾ ಗ್ರಾಹಕರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇವರ ಈ ಮಹತ್ವದ ಯೋಜನೆ ಹಿಂದೆ ಒಂದು ಕಣ್ಣೀರಿನ ಕಥೆ ಇದೆ.
ತಮಿಳುನಾಡಿನ ತಂಜಾವೂರಿನ ಪೂಕ್ಕರ ಬೀದಿಯಲ್ಲಿ ನೆಲೆಸಿರುವ ಖಾಜಾ ಮೊಯ್ದೀನ್ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಹಣ್ಣಿನ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರ ಹಣ್ಣಿನ ಅಂಗಡಿಗೆ ಬರುವ ಗ್ರಾಹಕರಿಗೆ ಉಡುಗೊರೆಯಾಗಿ ಪುಸ್ತಕವನ್ನು ನೀಡುತ್ತಿದ್ದಾರೆ.
ಪುಸ್ತಕಗಳನ್ನು ಓದುವ ಮೌಲ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಅವರು ತಮ್ಮ ಗ್ರಾಹಕರಿಗೆ ನಾಯಕರ ಜೀವನಚರಿತ್ರೆ, ಮಕ್ಕಳ ಕಥೆಗಳು ಮತ್ತು ತಮಿಳು-ಇಂಗ್ಲಿಷ್ ನಿಘಂಟುಗಳಂತಹ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಇದನ್ನೂ ಓದಿ:ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ಈ ಕುರಿತಾಗಿ ಮಾತನಾಡಿದ ಅಂಗಡಿ ಮಾಲೀಕ ಖಾಜಾ ಮೊಯ್ದೀನ್, ನನ್ನ ಕೌಟುಂಬಿಕ ಪರಿಸ್ಥಿತಿಗಳು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸದಂತೆ ತಡೆಯುತ್ತಿದ್ದರಿಂದ ನಾನು ನನ್ನ ಒಂಬತ್ತನೇ ತರಗತಿಯ ಅಧ್ಯಯನವನ್ನು ಪೂರ್ಣಗೊಳಿಸಿದೆ. ಮದುವೆಯಾದ ನಂತರ ನನ್ನ ಹೆಂಡತಿಯನ್ನು ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸಿದೆ. ಹಲವಾರು ತೊಂದರೆಗಳನ್ನು ಅನುಭವಿಸಿದ ನಂತರ, ನನ್ನ ಹೆಂಡತಿಯನ್ನು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ನೇಮಿಸಲಾಯಿತು. ನನ್ನ ಮಗ ಕೂಡ ವಕೀಲನಾಗಿದ್ದ. ನಾನು ನನ್ನ ಹೆಂಡತಿ ಮತ್ತು ಮಗನನ್ನು ಚೆನ್ನಾಗಿ ಓದಿಸಿದ್ದೇನೆ. ಹೀಗಾಗಿ ಗ್ರಾಹಕರನ್ನು ಕುಟುಂಬದವರೆಂದು ಭಾವಿಸಿ ಅವರಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂಬ ಹಂಬಲದಿಂದ ಕಳೆದ 11 ವರ್ಷಗಳಿಂದ ಪುಸ್ತಕ, ನೀರಿನ ಬಾಟಲ್‌ಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇನೆ ಎಂದು ಅಂಗಡಿ ಮಾಲೀಕರು ಹೇಳಿದರು.
ಇದನ್ನೂ ಓದಿ:ತಾಯಿ ಕಣ್ಮುಂದೆ ಕಟ್ಟಡದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡ ಮಗು
‘ದುರದೃಷ್ಟವಶಾತ್ ನನ್ನ ಮಗ 11 ವರ್ಷಗಳ ಹಿಂದೆ ನಿಧನರಾದರು. ಘಟನೆಯಿಂದ ನೋವನ್ನು ಮರೆಯಲು, ಗ್ರಾಹಕರನ್ನು ಕುಟುಂಬ ಸದಸ್ಯರೆಂಬಂತೆ ಕಾಣಲು ನಾನು ನನ್ನ ಪುಸ್ತಕ ಸಂಗ್ರಹವನ್ನು ಜನರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.
ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದಲ್ಲೇ ಇವೆ 39 ನಗರಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
