ತಿರುಪತಿ:ಕಲಿಯುಗದ ವೈಕುಂಠವೆಂದೇ ಖ್ಯಾತವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸೆಪ್ಟೆಂಬರ್​ ತಿಂಗಳಿನಲ್ಲಿ ಬರುವ ಭಕ್ತರಿಗೆ ಟಿಟಿಡಿ ಸೋಮವಾರ(ಜೂ.24) ಆನ್‌ಲೈನ್‌ನಲ್ಲಿ 300ರೂ.ನ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ:‘ಕಲ್ಕಿ’ ಯಲ್ಲಿ ‘ಕಮಲ್’ ಕಮಾಲ್​! ಡಬ್ಬಿಂಗ್ ನಲ್ಲೂ ವೈವಿಧ್ಯತೆ ತೋರಿದ ವಿಶ್ವನಾಯಕ.. ಅಭಿಮಾನಿಗಳಿಗೆ ಅಚ್ಚರಿ!!
ಭಾರತೀಯರಷ್ಟೇ ಅಲ್ಲದೆ ವಿಶ್ವದ ನಾನಾ ಭಾಗಗಳಿಂದ ನಿತ್ಯ ಲಕ್ಷಾಂತರ ಜನ ತಿರುಮಲೆಗೆ ಭೇಟಿ ನೀಡಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಹಂಬಲಿಸುತ್ತಾರೆ. ಆದರೆ ಕೆಲವು ತಿಂಗಳುಗಳಿಂದ ಕ್ಷೇತ್ರದಲ್ಲಿ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬರುತ್ತಲೇ ಇದೆ. ದೇವಾಲಯದ ಎಲ್ಲಾ ವಿಭಾಗಗಳು ಭರ್ತಿಯಾಗುತ್ತಿವೆ. ವೈಕುಂಠ ಕಾಂಪ್ಲೆಕ್ಸ್​ ಭರ್ತಿಯಾಗಿ ಕಿಲೋಮೀಟರ್​ ಗಟ್ಟಲೆ ಸರತಿ ಸಾಲು ಸಾಮಾನ್ಯವಾಗಿದೆ. ದರ್ಶನಕ್ಕೆ ಎರಡು ಮೂರು ದಿನ ಬೇಕು ಎಂಬ ಪರಿಸ್ಥಿತಿ ಇದೆ.
ಇನ್ನು ಸರತಿ ಸಾಲಿನಲ್ಲಿ ನಿಲ್ಲಲಾಗದೆ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತವರಿಗೆ ಸರಿಯಾದ ಸೌಲಭ್ಯಗಳಿಲ್ಲ ಎಂಬುದು ಹಲವರ ಟೀಕೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಂಧ್ರದಲ್ಲಿ ಸರ್ಕಾರ ಬದಲಾಗಿದೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಚಂದ್ರಬಾಬು ತಿರುಮಲದಿಂದ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಹಿಂದಿನ ಟಿಟಿಡಿ ಇಒ ಅವರನ್ನು ತೆಗೆದು ಶ್ಯಾಮಲಾ ರಾವ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪರಿಶೀಲಿಸುತ್ತಿದ್ದಾರೆ. ಇತ್ತೀಚೆಗೆ ಮೆಟ್ಟಿಲು ಮಾರ್ಗದಲ್ಲಿ ನಡೆದು ಬರುವ ಭಕ್ತರಿಗೆ ಸರ್ವದರ್ಶನಂ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಲಾಗಿದೆ. ಸರತಿ ಸಾಲಿನಲ್ಲಿದ್ದವರಿಗೆ ಸ್ವಾಮಿಯ ಪ್ರಸಾದ, ಮಜ್ಜಿಗೆ ಓದಗಿಸಲಾಗುತ್ತಿದೆ. ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿಯೇ ಸೆಪ್ಟೆಂಬರ್ ತಿಂಗಳಿಗೆ ಟಿಟಿಡಿ 300ರೂ. ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ತಿರುಮಲ ಮತ್ತು ತಿರುಪತಿಯಲ್ಲಿ ಸೆಪ್ಟೆಂಬರ್ ತಿಂಗಳ ಕೊಠಡಿಗಳ ಕೋಟಾವನ್ನು ಸಹ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮತ್ತೊಂದೆಡೆ, ಸ್ವಾಮಿಯ ವಿಶೇಷ ಸೇವೆಯ ಟಿಕೆಟ್​ಗಳನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.
ಇಷ್ಟೇ ಅಲ್ಲದೆ, ಮಧ್ಯಾಹ್ನ 12 ಗಂಟೆಗೆ ನಡೆಯುವ ನವನೀತ ಸೇವೆ ಹಾಗೂ 1 ಗಂಟೆಗೆ ಪರಕಾಮಣಿ ಸೇವೆ ಟಿಕೆಟ್​ಗಳು ಸಹ ಆನ್‌ಲೈನ್‌ನಲ್ಲಿ ಸಿಗಲಿವೆ. ಭಕ್ತರು ದರ್ಶನ ಟಿಕೆಟ್‌ಗಳು, ವಸತಿ ಕೊಠಡಿಗಳು ಮತ್ತು ಸೇವಾ ಕೋಟಾವನ್ನು ಕಾಯ್ದಿರಿಸಬಹುದಾಗಿದೆ. ಭಕ್ತರು ಶಿವನ ಆರ್ಜಿತಸೇವೆ ಮತ್ತು ದರ್ಶನ ಇತ್ಯಾದಿಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವಂತೆ ತಿರುಮಲ ತಿರುಪತಿ ದೇವಸ್ಥಾನಂ ಪ್ರಕಟಣೆಯಲ್ಲಿ ಸೂಚಿಸಿದೆ.
ನೀಟ್​ ಅಕ್ರಮ: 110 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ ಎನ್​ಟಿಎ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − one =
Remember me
