ನವದೆಹಲಿ:ವಾಯುಮಾಲಿನ್ಯ, ಜಲಮಾಲಿನ್ಯ, ವಾತಾವರಣದ ಮಾಲಿನ್ಯ, ವಾಯುಮಾಲಿನ್ಯ, ಶಬ್ಧ ಮಾಲಿನ್ಯದಂತಹ ಹಲವಾರು ರೀತಿಯ ಮಾಲಿನ್ಯಗಳಿವೆ. ಇಂದು ಶಬ್ದ ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮಾನವನ ಜೀವನ ಮಟ್ಟಕ್ಕೂ ಗಂಭೀರ ಅಪಾಯವಾಗಿದೆ.
ಶಬ್ಧ ಮಾಲಿನ್ಯ ಇಂದಿನ ದಿನಗಳಲ್ಲಿ ಅತ್ಯಂತ ಮಾರಕವಾಗಿ ಪರಿಣಮಿಸಿದೆ. ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಶಬ್ಧ ಮಾಲಿನ್ಯದಿಂದ ನರಳುವಂತಾಗಿದೆ. ಶಬ್ಧ ಮಾಲಿನ್ಯವು ಪ್ರಕೃತಿ ಮತ್ತು ಪರಿಸರಕ್ಕೆ ಮಾತ್ರವಲ್ಲದೆ ಮಾನವನಿಗೂ ಗಂಭೀರ ಹಾನಿಯನ್ನುಂಟುಮಾಡುತ್ತದೆ.
ಶಬ್ಧದ ಮಟ್ಟ ಹೆಚ್ಚಾದರೆ ಶ್ರವಣ ಶಕ್ತಿ ಕಡಿಮೆಯಾಗುತ್ತದೆ. ಮಾನಸಿಕ ಒತ್ತಡ ಉಂಟಾಗುತ್ತದೆ. ಮೇಲಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಶಬ್ಧದಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚುತ್ತಿದೆ ಎಂಬುದು ಇತ್ತೀಚಿನ ಅಧ್ಯಯನದಲ್ಲಿ ಸಾಬೀತಾಗಿದೆ.
ಅಂತರಾಷ್ಟ್ರೀಯ ಸಂಶೋಧಕರ ತಂಡವು ಸಾಂಕ್ರಾಮಿಕ ರೋಗಶಾಸ್ತ್ರದ ಡೇಟಾವನ್ನು ಪರಿಶೀಲಿಸಿದೆ, ಇದು ನಿರ್ದಿಷ್ಟ ಕಾಯಿಲೆಗೆ ಅಪಾಯಕಾರಿ ಅಂಶಗಳನ್ನು ಗುರುತಿಸಲು ಪುರಾವೆಗಳನ್ನು ಒದಗಿಸಿದೆ. ಮಧುಮೇಹ ಮತ್ತು ಹೃದಯಾಘಾತ ಸೇರಿದಂತೆ ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇಕಡಾ 3.2 ರಷ್ಟು ಹೆಚ್ಚಾಗುತ್ತದೆ.
ವಿಶೇಷವಾಗಿ ರಾತ್ರಿ ನಿದ್ರೆಗೆ ಭಂಗ ತರುವ ಸಂಚಾರ ದಟ್ಟಣೆಯಿಂದ ರಕ್ತನಾಳಗಳಲ್ಲಿ ಒತ್ತಡ ಉಂಟು ಮಾಡುವ ಹಾರ್ಮೋನ್ ಗಳ ಪ್ರಮಾಣ ಹೆಚ್ಚಿ ಅಧಿಕ ರಕ್ತದೊತ್ತಡ ಹಾಗೂ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ರಾತ್ರಿ-ಸಮಯದ ಟ್ರಾಫಿಕ್ ಶಬ್ಧವು ನಿದ್ರೆಯ ಸಮಯವನ್ನು ಅಡ್ಡಿಪಡಿಸುತ್ತದೆ ಮತ್ತು ಕಡಿಮೆಗೊಳಿಸುತ್ತದೆ, ಇದು ರಕ್ತನಾಳಗಳಲ್ಲಿ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಉರಿಯೂತ, ಅಧಿಕ ರಕ್ತದೊತ್ತಡ ಕಾಯಿಲೆಗಳನ್ನು ಉತ್ತೇಜಿಸುತ್ತದೆ.
ಪ್ರಬಲ ಪುರಾವೆಗಳ ಕಾರಣದಿಂದಾಗಿ ಟ್ರಾಫಿಕ್ ಶಬ್ಧವು ಈಗ ಅಂತಿಮವಾಗಿ ಹೃದಯರಕ್ತನಾಳದ ಕಾಯಿಲೆಗೆ ಅಪಾಯಕಾರಿ ಅಂಶವೆಂದು ಗುರುತಿಸಲ್ಪಟ್ಟಿದೆ” ಎಂದು ಜರ್ಮನಿಯ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಮೈಂಜ್‌ನ ಹಿರಿಯ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ಲೇಖಕ ಥಾಮಸ್ ಎಂಜೆಲ್ ಹೇಳಿದ್ದಾರೆ. ಸರ್ಕ್ಯುಲೇಷನ್ ರಿಸರ್ಚ್ ಜರ್ನಲ್ ಹೇಳಿದೆ.
ಸಂಶೋಧಕರು ಸ್ಥಳೀಯ ಅಧಿಕಾರಿಗಳಿಗೆ ರಸ್ತೆ, ರೈಲು ಮತ್ತು ವಾಯು ಸಂಚಾರದಿಂದ ಶಬ್ದವನ್ನು ತಗ್ಗಿಸಲು ತಂತ್ರಗಳನ್ನು ಸೂಚಿಸಿದ್ದಾರೆ.
1) ಜನನಿಬಿಡ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಶಬ್ಧ ತಡೆಗಳನ್ನು ನಿರ್ಮಿಸುವುದರಿಂದ ಶಬ್ಧದ ಮಟ್ಟವನ್ನು 10 ಡೆಸಿಬಲ್‌ಗಳವರೆಗೆ ಗಮನಾರ್ಹವಾಗಿ ಕಡಿಮೆ ಮಾಡಬಹುದು.
2) ಶಬ್ಧ-ಕಡಿಮೆಗೊಳಿಸುವ ಡಾಂಬರು ಬಳಸಿ ರಸ್ತೆಗಳನ್ನು ನಿರ್ಮಿಸುವುದು.
3) ಚಾಲನೆಯ ವೇಗವನ್ನು ಸೀಮಿತಗೊಳಿಸುವುದು ಮತ್ತು ಕಡಿಮೆ ಶಬ್ದದ ಟೈರ್‌ಗಳ ಬಳಕೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು.
4) ನಗರ ರಸ್ತೆ ಟ್ರಾಫಿಕ್ ಶಬ್ಧವನ್ನು ಕಡಿಮೆ ಮಾಡಲು ಬೈಸಿಕಲ್ ಸವಾರಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಶಿಪಾರಸ್ಸು ಮಾಡಬೇಕು.
ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

ಸ್ಟಾರ್ ನಟಿ ಶ್ರೀಲೀಲಾ ಈಗ ಐಟಂ ಡಾನ್ಸರ್; ಈ ಬ್ಯೂಟಿಗೆ ಭಾರೀ ಬೇಡಿಕೆ…

ಒಂದೇ ಒಂದು ಮುಗುಳ್ನಗೆಯಿಂದಲೇ ಈತ ಫೇಮಸ್; ನಗುವಿನ ಗುಟ್ಟು ಈಗ ರಟ್ಟು…

ಮುತ್ತು ಕೊಡುವುದು, ಬೆಡ್​ರೂಮ್​​ ಸೀನ್​ನಲ್ಲಿ ನಾನು ನಟಿಸುವುದಿಲ್ಲ; ಗ್ಲಾಮರಸ್ ಪಾತ್ರಕ್ಕೆ ನೋ ಎಂದಿದ್ಯಾಕೆ  ಮೃಣಾಲ್ ಠಾಕೂರ್..

ಅಡುಗೆ ಮಾಡುವ ಮೊದಲು ಅಕ್ಕಿ ತೊಳೆಯದಿದ್ದರೆ ನಿಮ್ಮ ಹೃದಯ ಬಡಿತ ನಿಲ್ಲಬಹುದು ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + ten =
Remember me
