ಬಿಹಾರ:ಸಿವಾನ್ ಜಿಲ್ಲೆಯ ಮೈರ್ವಾ ಲಕ್ಷ್ಮೀಪುರ ಇಳಿಜಾರಿನ ಬಳಿ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಸಿವಾನ್-ಗೋರಖ್‌ಪುರ ರೈಲ್ವೆ ವಿಭಾಗದ ಮೈರ್ವಾ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಹೇಗೆ ಸಂಭವಿಸಿತು  ಎಂಬ ವಿವರ ಇಲ್ಲಿದೆ ನೋಡಿ…
ಅಪಘಾತ ಹೇಗೆ ಸಂಭವಿಸಿತು?
ಸಿವಾನ್-ಗೋರಖ್‌ಪುರ ರೈಲ್ವೆ ವಿಭಾಗದ ಮೈರ್ವಾ ನಿಲ್ದಾಣದ ಬಳಿಯ ಲಕ್ಷ್ಮೀಪುರ ರೈಲು ಮಾರ್ಗದ ಬಳಿ ಈ ಘಟನೆ ನಡೆದಿದೆ. ಮಹಿಳೆಯರಿಬ್ಬರು ಗೋಧಿ ಕೊಯ್ಲು ಮುಗಿಸಿ ತಮ್ಮ ಮಕ್ಕಳೊಂದಿಗೆ ಮನೆಗೆ ಮರಳುತ್ತಿದ್ದಳು ಎಂದು ಹೇಳಲಾಗುತ್ತಿದೆ. ಆಗ ರೈಲು ಹಳಿ ಮೇಲೆ ಇದ್ದ ಇಬ್ಬರು ಮಕ್ಕಳಿಗೆ ರೈಲು ಡಿಕ್ಕಿ ಹೊಡೆದಿದೆ. ಮಕ್ಕಳನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಇಬ್ಬರು ಮಹಿಳೆಯರು ಕೂಡ ರೈಲಿಗೆ ಸಿಲುಕಿದ್ದಾರೆ. ಇದರಿಂದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಲಕ್ಷ್ಮೀಪುರ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಎಲ್ಲರೂ ಗೋಧಿ ಕೊಯ್ಲು ಮುಗಿಸಿ ಮನೆಗೆ ಮರಳುತ್ತಿದ್ದರು. ಆಗ ಲಕ್ಷ್ಮೀಪುರ ರೈಲು ಮಾರ್ಗದ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ನಾಲ್ವರೂ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಥಳೀಯರುಹೇಳಿದ್ದೇನು?
ಮೃತ ನೀತು ದೇವಿ, ಶ್ರೀಮತಿ ದೇವಿ ಗೋಧಿ ಕೊಯ್ಲು ಮುಗಿಸಿ ಹಿಂತಿರುಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಷ್ಟರಲ್ಲಿ ಅವರ ಇಬ್ಬರು ಮಕ್ಕಳು ರೈಲನ್ನು ನೋಡುವ ಆಸೆಯಿಂದ ಹಳಿಯ ಬಳಿ ಓಡತೊಡಗಿದರು. ಈ ವೇಳೆ ಎರಡೂ ಕಡೆಯಿಂದ ರೈಲುಗಳು ಬಂದವು. ತಮ್ಮ ಮಕ್ಕಳನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಇಬ್ಬರು ಮಹಿಳೆಯರು ಕೂಡ ರೈಲಿಗೆ ಸಿಲುಕಿದ್ದಾರೆ. ಪರಿಣಾಮ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
190 ಕೆ.ಜಿ. ತೂಕವಿದ್ದ ವಿಶ್ವದ ಅತ್ಯಂತ ದಪ್ಪ ಬಾಲಕ ಈಗ ಯಾವ ರೀತಿ ಫಿಟ್ ಆಗಿದ್ದಾನೆಂದರೆ ನೀವು ನಂಬಲು ಅಸಾಧ್ಯ!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − six =
Remember me
