ಬೆಂಗಳೂರು: ರಾಜ್ಯದಲ್ಲೇ ಹೆಚ್ಚು ರೈಲುಗಳು ಸಂಚರಿಸುವ ಬೆಂಗಳೂರು-ಚೆನ್ನೈ ಮಾರ್ಗದ ವೈಟ್ಫೀಲ್ಡ್ ಬಳಿ ರೈಲು ಹಳಿಗಳಲ್ಲಿ ಸಮಸ್ಯೆ ಕಂಡುಬಂದ ಕಾರಣ ಚೆನ್ನೈ, ತಿರುಪತಿ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರದ ನಾನಾ ಕಡೆ ಸಂಚರಿಸುವ ರೈಲುಗಳ ವೇಳೆಯಲ್ಲಿ ವ್ಯತ್ಯಾಸವಾಗಿತ್ತು.
ಇದನ್ನೂ ಓದಿ:ಬಜೆಟ್​ನಲ್ಲಿ ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು? ಇಲ್ಲಿದೆ ವಿವರ..
ಬೆಳಗ್ಗೆ ೯.೩೦ರಿಂದ ೧೦.೩೦ರವರೆಗೆ ಸಮಸ್ಯೆ ಕಂಡುಬಂದಿದ್ದು, ಬಳಿಕ ಸಿಬ್ಬಂದಿ ಸರಿಪಡಿಸಿದ ನಂತರ ಸಮಸ್ಯೆ ಬಗೆಹರಿಯಿತು. ಅಲ್ಲಿ ತನಕ ಬೆಂಗಳೂರಿನಿಂದ ಬಂಗಾರಪೇಟೆ ತನಕ ಸ್ಥಳೀಯ ರೈಲುಗಳಷ್ಟೇ ಅಲ್ಲದೆ ಎಕ್ಸ್​ಪ್ರೆಸ್​, ಸೂಪರ್​ ಫಾಸ್ಟ್​ ಮತ್ತು ವಂದೇಭಾರತ್​ ರೈಲು ಸಹ ನಿಂತಲ್ಲೇ ನಿಲ್ಲಬೇಕಾಯಿತು.
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ವಂದೇಭಾರತ್​ ರೈಲು ಮಾಲೂರು-ವೈಟ್​ಫೀಲ್ಡ್​ ನಡುವಿನ ದೇವನಗೊಂದಿ ನಿಲ್ದಾಣದಲ್ಲಿ 1ಗಂಟೆಗೂ ಹೆಚ್ಚು ಸಮಯ ನಿಲಗಡೆಯಾಗಿತ್ತು. ಚೆನ್ನೈ ಕಡೆಯಿಂದ ಬಂದ ಈ ರೈಲು ಬೆಂಗಳೂರಿನಿಂದ ಚೆನ್ನೈ ಕಡೆ ತೆರಳುವ ರೈಲುಗಳಿಗೆ ನಿಗದಿಪಡಿಸಿರುವ ಮಾರ್ಗದಲ್ಲಿ ಅನಿವಾರ್ವವಾಗಿ ನಿಂತಿದ್ದು, ಮಾರ್ಗದ ಸಮಸ್ಯೆಯ ತೀವ್ರತೆ ಸೂಚಿಸುತ್ತಿತ್ತು.
ವಂದೇ ಭಾರತ್ ಅಷ್ಟೇ ಅಲ್ಲದೆ, ಬಂಗಾರಪೇಟೆ, ಕುಪ್ಪಂ, ಮಾರಿಕುಪ್ಪಂ(ಕೆಜಿಎಫ್​), ಕೋಲಾರ, ಜಾಲಾರಪೇಟೆ ಮತ್ತು ಬೆಂಗಳೂರು ಕಡೆ ನಿತ್ಯ ಸಂಚರಿಸುವ ಸಹಸ್ರಾರು ಪ್ರಯಾಣಿಕರು, ಉದ್ಯೋಗಿಗಳು ಪರದಾಡುವಂತಾಯಿತು.ರೈಲುಗಳು ೧ರಿಂದ 2 ಗಂಟೆಗೂ ಹೆಚ್ಚು ಸಮಯ ವಿವಿಧ ನಿಲ್ದಾಣಗಳಲ್ಲಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ವಂದೇ ಭಾರತ್​ ಸೇರಿದಂತೆ ತಮಿಳುನಾಡು, ಆಂಧ್ರ ಮತ್ತು ಕೇರಳಕ್ಕೆ ಸಂಚರಿಸುವ ಎಕ್ಸ್​ಪ್ರೆಸ್​ ರೈಲುಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟು ಉದ್ಯೋಗಿಳೇ ಹೆಚ್ಚಾಗಿ ಪ್ರಯಾಣಿಸುವ ಮಾರಿಕುಪ್ಪಂ(ಕೆಜಿಎಫ್​)ನಿಂದ ಬೆಂಗಳೂರಿಗೆ 10ಗಂಟೆಗೆ ಬರಬೇಕಾದ ರೈಲನ್ನು ನಿತ್ಯ 10.30ಗಂಟೆ, 11ಗಂಟೆಗೆ ಬರುವಂತೆ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೋಲಾರ ಜಿಲ್ಲೆಯ ನಿತ್ಯ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸಿದ್ದರಾಮಯ್ಯ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
