ನವದೆಹಲಿ:ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಕರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ಸಲುವಾಗಿ ಭಾರತದಿಂದ ಮಲೇರಿಯಾಕ್ಕೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ಈ ಔಷಧ ತಯಾರಿಸುವ ಸಸ್ಯಕ್ಕೆ ಈಗ ಭಾರಿ ಬೇಡಿಕೆ ಬಂದಿದೆ.ಅಷ್ಟೇ ಅಲ್ಲದೇ, ಈ ಔಷಧಕ್ಕೆ ಟ್ರಂಪ್‌ ಅವರು ಬೇಡಿಕೆ ಒಡ್ಡಿದ ಬೆನ್ನಲ್ಲೇ ವಿವಿಧ ಆಸ್ಪತ್ರೆಗಳಿಂದಲೂ ಇದರ ಬೇಡಿಕೆ ಹೆಚ್ಚಾಗಿದೆ. ಇನ್ನೊಂದೆಡೆ ಗ್ರಾಹಕರು ಕೂಡ ಈ ಮಾತ್ರೆ ಪಡೆಯಲು ಮುಗಿ ಬೀಳುತ್ತಿದ್ದಾರೆ.ಹೈಡ್ರಾಕ್ಸಿಕ್ಲೋರೋಕ್ವಿನ್ ಕರೊನಾ ವೈರಸ್ ಮೇಲೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳು ಇದುವರೆಗೂ ಕಂಡುಬಂದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾತ್ರೆಗಳ ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕದಿದ್ದರೆ ಸಂಭಾವ್ಯ ಪ್ರತೀಕಾರದ ಬಗ್ಗೆ ಟ್ರಂಪ್ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ, ಇದನ್ನೀಗ ರಫ್ತು ಮಾಡಲಾಗಿದೆ.ಹಿಮಾಲಯದ ತಪ್ಪಲೇ ತವರುಹಾಗಿದ್ದರೆ ಹೈಡ್ರಾಕ್ಸಿಕ್ಲೋರೊಕ್ವಿನ್ ಮೂಲ ಯಾವುದು? ಈ ಮಾತ್ರೆಯನ್ನು ಯಾವುದರಿಂದ ತಯಾರಿಸಲಾಗುತ್ತದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಅಂದಹಾಗೆ, ಈ ಮಾತ್ರೆಯ ತವರು ಹಿಮಾಲಯದ ತಪ್ಪಲು. ಡಾರ್ಜಿಲಿಂಗ್‌ ಸೇರಿದಂತೆ ಸುತ್ತಮುತ್ತಲೂ ಸುಮಾರು 6,900 ಎಕರೆ (28 ಕಿಲೋಮೀಟರ್) ತೋಟದಲ್ಲಿ ಈ ಮಾತ್ರೆಯನ್ನು ತಯಾರಿಸುವ ಮರಗಳ ತೋಟವಿದೆ. ಈ ಮರದ ಹೆಸರು ಸಿಂಚೋನಾ. ಇದರ ತೊಗಟೆಯು ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ತಯಾರಿಕೆಗೆ ಮೂಲ ವಸ್ತು.ಇನ್ನು ಕೆಲವು ಮರಗಳಿಂದ ಈ ಮಾತ್ರೆಯನ್ನು ತಯಾರಿಸುವುದು ಕಂಡುಬಂದಿದ್ದರೂ ಸಿಂಚೋನಾ ತೊಗಟೆ ಅತ್ಯಂತ ಪರಿಣಾಮಕಾರಿ ಎನ್ನಲಾಗಿದೆ. ‘ಇದರಿಂದ ಪಡೆಯುವ ಕ್ವಿನೈನ್ ಸಲ್ಫೇಟ್ ಹೆಚ್ಚು ಪ್ರಬಲವಾಗಿದೆ, ಅನೇಕ ಮಾತ್ರೆಗಳಲ್ಲಿ ಅಡ್ಡ ಪರಿಣಾಮಗಳೇ (ಸೈಡ್‌ ಇಫೆಕ್ಟ್‌) ಹೆಚ್ಚಿಗೆ ಇರುತ್ತದೆ. ಆದರೆ ಸಿಂಚೋನಾ ತೊಗಟೆಯಿಂದ ಮಾಡಿದ ಮಾತ್ರೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಡ್ಡಪರಿಣಾಮಗಳಿವೆ’ ಎಂದು ಡಾರ್ಜಿಲಿಂಗ್‌ನ ಕಾರ್ಖಾನೆಯ ಸಹಾಯಕ ಕ್ವಿನಾಲಜಿಸ್ಟ್ ಉಡೆನ್ ಆಂಗ್ಮು ಯೋನ್‌.ಅಂದ ಹಾಗೆ ಈ ಬೆಳೆಯನ್ನು ವರ್ಷಕ್ಕೊಮ್ಮೆ ಕಟಾವು ವರ್ಷಕ್ಕೊಮ್ಮೆ ಸೀಮಿತವಾಗಿರುತ್ತದೆ, ಡಿಸೆಂಬರ್ ಮತ್ತು ಜನವರಿಯಲ್ಲಿ ಕಟಾವು ಕಾರ್ಯ ಶುರುವಾಗುತ್ತದೆ. ನವೆಂಬರ್‌ ತಿಂಗಳಿನಲ್ಲಿ ತೊಗಟೆಯ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತದೆ. 2019ರ ನವೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ತೊಗಟೆ ಒಂದು ಕಿಲೋಗ್ರಾಂಗೆ 111 ರೂಪಾಯಿಗಳಿಗೆ ಮಾರಾಟವಾಗಿದೆ. ಈ ತೋಟದಲ್ಲಿ 5 ಸಾವಿರಕ್ಕೂ ಅಧಿಕ ಕಾಯಂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಾತ್ರೆ ತಯಾರಿಕಾ ಕಂಪನಿಯಲ್ಲಿ 400 ಕ್ಕೂ ಹೆಚ್ಚು ನೌಕರರು ಇದ್ದಾರೆ.ಹಿಮಾಲಯದ ತಪ್ಪಲಿನಲ್ಲಿ ಈ ಬೆಳೆ ಬೆಳೆಯಲು ಶುರುವಾದದ್ದು 1864ರಲ್ಲಿ. ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕೋಲ್ಕತ್ತಾದ ಬೊಟಾನಿಲಲ್‌ ಗಾರ್ಡನ್‌ನಲ್ಲಿ ಕಂಡು ಬಂದಿತ್ತು. ನಂತರ 1864ರಲ್ಲಿ ಡಾರ್ಜಿಲಿಂಗ್ ತೋಟದಲ್ಲಿ ಇದನ್ನು ನೆಡಲು ಶುರು ಮಾಡಲಾಯಿತು. ಈ ಸಸ್ಯಗಳನ್ನು ಸ್ಥಳೀಯ ಭಾಷೆಯಲ್ಲಿ ಕಿನಾಕಿನಾ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಸಿನಾ ಎಂದು ಕರೆದರು.20 ನೇ ಶತಮಾನದ ಮಧ್ಯಭಾಗದಲ್ಲಿ ಈ ಸಸ್ಯದ ಬೇಡಿಕೆ ಸ್ವಲ್ಪ ತಗ್ಗುತ್ತ ಬಂದಿತ್ತು. ಆದರೀಗ ಮತ್ತೆ ಮುನ್ನೆಲೆಗೆ ಬಂದಿದೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen − nine =
Remember me
