ನವದೆಹಲಿ: ಕರೊನಾ ವಿರುದ್ಧ ಸಮರಕ್ಕೆ ಕೈಜೋಡಿಸುವಂತೆ ಕರೆ ನೀಡುತ್ತಿರುವ ಕೇಂದ್ರ ಹಾಗೂ ಸರ್ಕಾರಗಳು ಯಾಕೋ ನಿವೃತ್ತಿಯಾಗುವವರ ವಿಚಾರವಾಗಿ ಮೃದು ಧೋರಣೆ ತಳೆದಂತಿಲ್ಲ. ಅಗತ್ಯ ಸರ್ಕಾರಿ ಸೇವೆಗಳನ್ನು ಹೊರತುಪಡಿಸಿದರೆ ಇನ್ನುಳಿದವರಿಗೆ ಮನೆಯಲ್ಲಿಯೇ ಇರುವಂತೆ ಹೇಳಿವೆ. ಅಧಿಕೃತವಾಗಿ ರಜೆಯನ್ನೂ ಘೋಷಣೆ ಮಾಡಿವೆ. ಈ ಅವಧಿಯಲ್ಲಿ ನಿವೃತ್ತರಾಗಲಿರುವ ಕೇಂದ್ರ ಸರ್ಕಾರಿ ನೌಕರರು ಕಾಯಂ ಆಗಿ ಮನೆಯಲ್ಲಿಯೇ ಉಳಿಯುವಂತಾಗಿದೆ.
ಏಪ್ರಿಲ್​ 14ರವರೆಗೆ ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾಗಿರುವ ಕಾರಣ ಈ ಅವಧಿಯಲ್ಲಿ ಕೊನೆಯ ದಿನಾಂಕವಿರುವ, ಮಾನ್ಯತೆ ಅವಧಿ ಪೂರ್ಣಗೊಂಡಿರುವ ದಾಖಲೆಗಳು, ಅರ್ಜಿ ಸಲ್ಲಿಕೆ, ವಿವಿಧ ಪರೀಕ್ಷೆ ಮೊದಲಾದವುಗಳ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸೇವಾವಧಿ ಪೂಣರ್ಗೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೆ ಯಾವುದೇ ವಿಸ್ತರಣೆ ಇರುವುದಿಲ್ಲಎಂದು ಸ್ಪಷ್ಟಪಡಿಸಲಾಗಿದೆ.
2020ರ ಮಾರ್ಚ್​ 31ರೊಳಗೆ ವಯೋನಿವೃತ್ತಿ ಹೊಂದಿದವರ ಸೇವಾವಧಿಯನ್ನುವಿಸ್ತರಿಸಲಾಗುತ್ತಿಲ್ಲ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ ಅವರು ರಜೆಯ ಮೇಲಿರಲಿ ಅಥವಾ ಮನೆಯಿಂದಲೇ ಕೆಲಸ ಮಾಡುತ್ತಿರಲಿ ಲಾಕ್​ಡೌನ್​ ಅಥವಾ ಇನ್ನಾವುದೇ ಕಾರಣಕ್ಕೂ ಕರ್ತವ್ಯದ ಅವಧಿಯನ್ನು ಮುಂದುವರಿಸಲಾಗದು ಎಂದು ಹೇಳಿದೆ.
ಪ್ರಸ್ತುತ ಏಪ್ರಿಲ್​ 14ರವರೆಗೂ ಲಾಕ್​ಡೌನ್​ ಇರಲಿದೆ. ಈ ಅವಧಿಯಲ್ಲಿ ನಿವೃತ್ತಿಯಾಗುವವರಿಗೆ ಮೇಲಿನ ಆದೇಶವೇ ಅನ್ವಯವಾಗುತ್ತಾ ಅಥವಾ ಅಗತ್ಯ ಸೇವೆಯಲ್ಲಿರುವವರನ್ನು ಕರ್ತವ್ಯ ಮುಂದುವರಿಸಲು ಸೂಚಿಸಲಾಗುತ್ತದೇಯೇ ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ನಿವೃತ್ತಿ ಅಂಚಿನಲ್ಲಿದ್ದು, ಮನೆಯಲ್ಲಿದ್ದವರು ಮತ್ತೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಭಾಗ್ಯವೇ ಇಲ್ಲವಾಗಿ ಕಾಯಂ ಆಗಿ ಮನೆಯಲ್ಲಿಯೇ ಮುಂದುವರಿಯುವಂತಾಗಿದೆ.
ಇದು ಏಪ್ರಿಲ್ ಫೂಲ್ ಅಲ್ಲ- ಬೈಕ್, ಸ್ಕೂಟರ್, ಕಾರು, ಜೀಪು ಹಿಡ್ಕೊಂಡು ಬೀದಿಗಿಳಿದ್ರೆ ಸೀಝ್ ಮಾಡೋದು ಗ್ಯಾರೆಂಟಿ- ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + one =
Remember me
