ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರ ತಾಯಿ ಸ್ನೇಹಲತಾ ಗೋಯೆಲ್ ಭಾನುವಾರ ನಿಧನರಾಗಿದ್ದಾರೆ. ತಾಯಿಯ ಇಚ್ಛೆಯನುಸಾರ ನೇತ್ರದಾನ ಮತ್ತು ದೇಹದಾನವನ್ನೂ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ ಸಚಿವರು.
ಮನೆಯಲ್ಲಿ ತಾಯಿ ದಿಢೀರನೆ ಕುಸಿದ ಕೂಡಲೇ ಅವರನ್ನು ದೆಹಲಿಯ ಆಲ್​ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​(ಏಮ್ಸ್​)ಗೆ ದಾಖಲಿಸಲಾಗಿದೆ. ಆದರೆ, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ನಿನ್ನೆ ಬೆಳಗ್ಗೆ 8.50ಕ್ಕೆ ನಿಧನರಾದರು. ಅವರ ಇಚ್ಛೆಯನುಸಾರ ಏಮ್ಸ್​ನಲ್ಲೇ ನೇತ್ರದಾನ ಮಾಡಲಾಗಿದೆ. ಅವರ ಶರೀರವನ್ನು ನಿನ್ನೆ ಅಪರಾಹ್ನ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಟ್ವೀಟ್​ನಲ್ಲಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪತ್ನಿ ಸಂಸಾರ ಮಾಡದೇ ತವರಿಗೆ ಹೋಗಿ ಕೂತಿದ್ದಾಳೆ, ವಾಪಸ್‌ ಬರಲು ಏನು ಮಾಡಲಿ?
ಸ್ನೇಹಲತಾ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾರಣಗಳಿಂದಾಗಿ ಉಳಿದ ಅಂಗಾಂಗ ದಾನ ಮಾಡಲಾಗಿಲ್ಲ. ಸ್ನೇಹಲತಾ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)
ಪ್ರೀತಿಯ ಅಮ್ಮನ ಕಣ್ಣುಗಳನ್ನು ದಾನ ಮಾಡಿದ ಸಚಿವ ಡಾ. ಹರ್ಷವರ್ಧನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
