ನವದೆಹಲಿ:1997 ರಲ್ಲಿ ಸುಪ್ರಸಿದ್ಧ ವಾಸ್ತು ತಜ್ಞ ಖುಷ್ದೀಪ್ ಬನ್ಸಾಲ್ ಅವರು ಸಂಸತ್ ಭವನದ ಗ್ರಂಥಾಲಯವು “ವಾಸ್ತು ದೋಷ” ಗಳನ್ನು ಹೊಂದಿದೆ, ಸರ್ಕಾರಗಳು ಬೀಳಲು ಕಾರಣ ಎಂದು ಹೇಳಿದ್ದರು. ಸುಮಾರು 30 ವರ್ಷಗಳ ನಂತರ, ಬನ್ಸಾಲ್ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ವಿಜಯ್ ಬಳಿಕ ಮತ್ತೊಬ್ಬ ಸ್ಟಾರ್​ ಹೀರೋ ರಾಜಕೀಯಕ್ಕೆ ಎಂಟ್ರಿ? ಶೀಘ್ರದಲ್ಲೇ ಹೊಸ ಪಕ್ಷ ಘೋಷಣೆ?
ಈ ಬಾರಿ 65 ಕೋಟಿ ರೂ. ಮೊತ್ತದ ಬೃಹತ್ ವಂಚನೆ ಪ್ರಕರಣದಲ್ಲಿ ಬನ್ಸಾಲ್ ಸುದ್ದಿಯಾಗಿದ್ದಾರೆ. ಖುಷ್ದೀಪ್ ಬನ್ಸಾಲ್ ಮತ್ತು ಅವರ ಸಹೋದರನನ್ನು ಅಸ್ಸಾಂ ಪೊಲೀಸರು ಮತ್ತು ದೆಹಲಿ ಪೊಲೀಸರ ಜಂಟಿ ತಂಡ ಸೋಮವಾರ ದೆಹಲಿಯಲ್ಲಿ ಬಂಧಿಸಿದೆ. ದೆಹಲಿ ಪೊಲೀಸ್ ವಿಶೇಷ ಕೋಶದ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಬರಾಖಂಬಾ ಪ್ರದೇಶದಲ್ಲಿ ಈ ಬಂಧನ ನಡೆಸಿದೆ.
ಇಬ್ಬರನ್ನೂ ಅಸ್ಸಾಂಗೆ ಕರೆದುಕೊಂಡು ಹೋಗಲಾಗಿದೆ. ಸುಮಾರು 65 ಕೋಟಿ ರೂ. ಮೊತ್ತದ ಸ್ವಾಯತ್ತ ಮಂಡಳಿಯ ಹಗರಣದಲ್ಲಿ ಇವರ ಹೆಸರು ಕೇಳಿ ಬರುತ್ತಿದೆ. ಈ ಹಗರಣದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಭಾಗಿಯಾಗಿನೆ.
ದೆಹಲಿ ಮೂಲದ ಸಬರ್ವಾಲ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ಮಾಲೀಕ ಕಮಲ್ ಸಬರ್ವಾಲ್ ಬನ್ಸಾಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಮಲ್ ಸಬರ್ವಾಲ್‌ಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಿರುವುದಾಗಿ ಬನ್ಸಾಲ್ ದೆಹಲಿ ಪೊಲೀಸರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಎಲ್ಲಾ ಆರೋಪಿಗಳು ಈಗ ಮುಂಚೂಣಿಗೆ ಬಂದಿರುವ ದೊಡ್ಡ ಹಗರಣವನ್ನು ಸಂಘಟಿಸುವಲ್ಲಿ ಸಹಕರಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಹೇಳುತ್ತಾರೆ.
ಬನ್ಸಾಲ್ ಅವರು ವಿವಿಧ ರಾಜ್ಯ ಸರ್ಕಾರದ ಯೋಜನೆಗಳ ಸಲಹೆಗಾರರಾಗಿದ್ದು ಪ್ರಖ್ಯಾತ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕಾರ್ಯತಂತ್ರದ ಸಲಹೆಗಾರರಾಗಿದ್ದಾರೆ.
1997 ರಲ್ಲಿ, ಪಾರ್ಲಿಮೆಂಟ್ ಹೌಸ್ ಲೈಬ್ರರಿಯ ವಾಸ್ತು ದೋಷಗಳು ಸರ್ಕಾರದ ಅಸ್ಥಿರತೆಗೆ ಕಾರಣವಾಗುತ್ತಿವೆ ಎಂಬ ಅವರ ಹೇಳಿಕೆ ಭಾರೀ ಸುದ್ದಿಯಾಗಿತ್ತು. ಅವರ ಪ್ರಕಾರ, ಸಂಸತ್ ಮತ್ತು ಗ್ರಂಥಾಲಯ ಕಟ್ಟಡದ ನಡುವೆ ತಾಮ್ರದ ತಂತಿಗಳನ್ನು ನೆಲದಡಿಯಲ್ಲಿ ಇರಿಸುವುದರ ಮೂಲಕ “ಸಮತೋಲನವನ್ನು ಮರುಸ್ಥಾಪಿಸುವುದಾದರೆ ಅಕಾಲಿಕ ಕುಸಿತವನ್ನು ಎದುರಿಸದೆ ಸರ್ಕಾರಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿವೆ ಎಂದು ಅವರು ಪರಿಹಾರ ಮಾರ್ಗ ಸೂಚಿಸಿದ್ದರು.
5 ಕೋಟಿ ಕೊಟ್ಟರೆ ಸಿನಿಮಾ ಮಾಡ್ತೀನಿ ಎಂದ ಕೊಡಗಿನ ಕುವರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
