ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದೆ. ಅನೇಕ ರೈತರು ಪ್ರಾಣವನ್ನು ಪಣಕ್ಕಿಟ್ಟು ಹೋರಾಟಕ್ಕೆ ನಿಂತಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಿಳೆ ಮಾತ್ರ ಪೊಲೀಸರ ಮೇಲೆ ವಿಚಿತ್ರ ಆರೋಪ ಮಾಡಿದ್ದ ನಗೆಪಾಟಲೆಗೆ ಈಡಾಗಿದ್ದಾರೆ.
ಇದನ್ನೂ ಓದಿ:ಕರೊನಾ ನಂತರ ಭಾರತಕ್ಕೆ ಬಂತು ನಿಗೂಢ ಕಾಯಿಲೆ! ಮೊದಲ ಸಾವು ವರದಿಯಾಯ್ತು
ನಾನು ಗೀತಾ ಪಾಟೀಲ್​. ಕಿಸಾನ್​ ಏಕ್ತಾ ಸಂಘದ ಮಹಿಳಾ ಮೋರ್ಚಾದ ರಾಷ್ಟ್ರೀ ಅಧ್ಯಕ್ಷೆ. ಪೊಲೀಸರು ಮತ್ತು ಸರ್ಕಾರ ಸೇರಿಕೊಂಡು ನನ್ನ ಚಪ್ಪಲಿ ಕದ್ದಿದೆ. ನಾನು ಹೋರಾಟವನ್ನು ಮುಂದುವರಿಸಬಾರದೆಂದು ಹೀಗೆ ಮಾಡಿದ್ದಾರೆ. ಆದರೆ ನಾನು ಇದಕ್ಕೆಲ್ಲ ಬಗ್ಗುವುದಿಲ್ಲ. ನಾನು ನನ್ನ ಹೋರಾಟವನ್ನು ಬರಿಗಾಲಿನಲ್ಲೇ ಮುಂದುವರಿಸುತ್ತೇನೆ ಎಂದು ಗೀತಾ ಹೆಸರಿನ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. ಈಕೆ ಈ ರೀತಿ ಹೇಳುವಾಗ ಪಕ್ಕದಲ್ಲೇ ಕುಳಿತಿದ್ದ ವೃದ್ಧ ರೈತ ಜೋರಾಗಿ ನಕ್ಕಿದ್ದಾರೆ. ಅದರೆ ಅಲ್ಲೇ ಇದ್ದ ಮತ್ತೊಬ್ಬರು ನಗಬೇಡಿ ಎಂದು ಸಮ್ಮನಾಗಿಸಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:
ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ
ಇದನ್ನೂ ಓದಿ:ಇವನ ಪ್ರೀತಿ ಅವಳು; ಅವಳ ಪ್ರೀತಿ ಇವನ ಮಲತಂದೆ! ಮುಂದೇನಾಯ್ತು ಗೊತ್ತಾ?
ಗೀತಾ ಅವರ ಈ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಗೀತಾ ಸ್ಯಾಂಡಲ್​ ಸ್ಕ್ಯಾಮ್​, ಚಪ್ಪಲಿ ಕಳುವಿನ ಪ್ರಕರಣ ಸಿಐಡಿ ತನಿಖೆ ಆಗಬೇಕು, ಇದಕ್ಕೆಲ್ಲ ಸರ್ಕಾರವೇ ಕಾರಣ, ಮೋದಿ ಮತ್ತು ಅಮಿತ್​ ಷಾ ರಾಜೀನಾಮೆ ನೀಡಬೇಕು ಎಂದು ಟ್ರೋಲ್​ ಮಾಡಲಾಗುತ್ತಿದೆ. (ಏಜೆನ್ಸೀಸ್​)
ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
