ಬೆಂಗಳೂರು:ರಾಷ್ಟ್ರಪತಿ ಆಯ್ಕೆ ಸಲುವಾಗಿ ನಡೆದ ಚುನಾವಣೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕರು ಹಾಗೂ ಸಂಸದರಿಂದ ಮತ ಚಲಾವಣೆ ನಡೆಯಿತು.
ರಾಜ್ಯದ 224 ಶಾಸಕರು ಹಾಗೂ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯರೂ ಆಗಿರುವ ಎಚ್​.ಡಿ. ದೇವೇಗೌಡ ಮತ್ತು ಲೋಕಸಭಾ ಸದಸ್ಯ ಶ್ರೀನಿವಾಸಪ್ರಸಾದ್ ಅವರು ಮತ ಚಲಾಯಿಸಿದರು. ಸಂಸದರು ಮತ ಚಲಾವಣೆ.
ಸಂಜೆ ಐದರ ವರೆಗೂ ಮತ ಚಲಾಯಿಸಲು ಕಾಲಾವಕಾಶ ಇದ್ದಿದ್ದರೂ ಸಂಜೆ 4ರ‌ ವೇಳೆಗೆ ಎಲ್ಲ ಶಾಸಕರು ಹಾಗೂ ಇಬ್ಬರು ಸಂಸದರು ತಮ್ಮ ಹಕ್ಕು ಚಲಾಯಿಸಿದರು. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲು ಮತ ಚಲಾಯಿಸಿದರೆ, ಕೊನೆಯದಾಗಿ ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ ಮತದಾನ‌ ಮಾಡಿದರು.
ಸೀಲ್​ ಮಾಡಿ, ಪ್ಯಾಕ್​ ಮಾಡಿದ ಮತಪೆಟ್ಟಿಗೆಯನ್ನು‌ ಬಿಗಿ ಪೊಲೀಸ್ ಭದ್ರತೆಯಲ್ಲಿ ರಾತ್ರಿ 7ಕ್ಕೆ ವಿಮಾನನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತದೆ. ರಾತ್ರಿ‌ 9.20ರ ವಿಮಾನದಲ್ಲಿ ಮತಪೆಟ್ಟಿಗೆಗೆಂದೇ ಪ್ರತ್ಯೇಕ ಟಿಕೆಟ್ ಪಡೆಯಲಾಗಿದೆ. ಇಬ್ಬರು ಅಧಿಕಾರಿಗಳು ಈ ಮತಪೆಟ್ಟಿಗೆ ಜತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
