ಭೋಪಾಲ್​:ಆಸ್ತಿ ವಿವಾದದ ವಿಚಾರವಾಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ಅಂಗಕ್ಕೆ ಖಾರದಪುಡಿ ಹಾಕಿ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರವು ಆರೋಪಿ ಅಯಾನ್​ ಪಠಾಣ್​ ಮನೆಯನ್ನು ಬುಲ್ಡೋಜರ್​ನಿಂದ ನೆಲಸಮಗೊಳಿಸಿದೆ.
ಆರೋಪಿ ಅಯಾನ್​ ಪಠಾಣ್​ ಮನೆಯು ನಕಲಿ ದಾಖಲೆಗಳನ್ನು ಸೃಜಿಸಿ ರಸ್ತೆಯ ಮೇಲೆ ನಿರ್ಮಿಸಲಾಗಿತ್ತು ಎಂದು ಆರೋಪಿಸಿದ ಅಧಿಕಾರಿಗಳು ಆತ ವಾಸವಿದ್ದ ಮನೆಯನ್ನು ನೆಲಸಮಗೊಳಿಸಿದ್ದಾರೆ. ಬುಲ್ಡೋಜರ್​ನಿಂದ ಮನೆ ನೆಲಸಮಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕರ್ನಾಟಕದಲ್ಲಿ ಈ ಕ್ರಮ ಯಾವಾಗ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಆರೋಪಿ ಅಯಾನ್​ ಪಠಾಣ್​ ಹಾಗು ಯುವತಿ ನೆರೆಹೊರೆಯವರಾಗಿದ್ದು, ಹಲವು ವರ್ಷಗಳಿಂದ ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿದೆ. ಇದನ್ನು ಅರಿತ ಆರೋಪಿ ಅಯಾನ್​ ಯುವತಿಯನ್ನು ತನ್ನ ಪ್ರೇಮದ ಜಾಲಕ್ಕೆ ಬೀಳಿಸಿ ಆಕೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯನ್ನು ಲಪಟಾಯಿಸಲು ಮುಂದಾಗಿದ್ದ.
In Guna (MP) Ayan Pathan sealed his Hindu gf's lips with feviquick, inserted chilly powder in her private parts & eyes. He used to torture her for her property.MP police demolished his illegal properties…Well done@DrMohanYadav51ji.pic.twitter.com/fmoXkpcJrl
ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಆಸ್ತಿ ಮರುಹಂಚಿಕೆ ಜಾರಿ; ನಾನು ಹಾಗೆ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆದ ರಾಹುಲ್​ ಗಾಂಧಿ
ಆರೋಪಿಯ ಸಂಚು ಅರಿತ ಯುವತಿ  ಆತನಿಗೆ ವಿರೋಧ ವ್ಯಕ್ತಪಡಿಸಿದಳು. ಆಗ ಆತ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟು ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಒಂದು ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಆಕೆಯ ಕೂಗಾಟ ಹೆಚ್ಚಾದಾಗ ಈ ಸದ್ದು ನೆರೆ ಹೊರೆಯವರಿಗೆ ಕೇಳಿಸಬಾರದೆಂದು ಯುವತಿಯ ಬಾಯಿಗೆ ಮೆಣಸಿನ ಪುಡಿ ಸುರಿದು ಆಕೆಯ ತುಟಿಗೆ ಫೆವಿಕ್ವಿಕ್ ಹಚ್ಚಿ ಬಾಯಿ ಮುಚ್ಚಿದ್ದಾನೆ.
ಯುವತಿಯನ್ನು ಕೂಡಿ ಹಾಕಲಾಗಿದೆ ಎಂದು ವಿಚಾರ ತಿಳಿದ ಪೊಲೀಸರು ಆರೋಪಿ ಮನೆ ಮೇಲೆ ದಾಳಿ ನಡೆಸಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡಿದ್ದು, ತೀವ್ರತೆಯನ್ನು ಅರಿತ ಗುನಾ ಜಿಲ್ಲಾಡಳಿತ ನೋಟಿಸ್​ ನೀಡಿ ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಿದೆ.
ಇತ್ತ ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಹಲವರು ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಆರೋಪಿ ಫಯಾಜ್​ ಮನೆಯನ್ನು ಬುಲ್ಡೋಜರ್​ ಮೂಲಕ ಧ್ವಂಸ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ನ್ಯಾಯ ಎಲ್ಲರಿಗೂ ಒಂದೇ ಆಗಿದ್ದು, ಕರ್ನಾಟಕ ಸರ್ಕಾರ ಕೂಡಲೇ ಈ ಕ್ರಮವನ್ನು ಜಾರಿಗೆ ತರುವಂತೆ ನೆಟ್ಟಿಗರು, ಸಂಘ-ಸಂಸ್ಥೆಗಳು ಆಗ್ರಹಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + thirteen =
Remember me
