ಪ್ರಯಾಗರಾಜ್:ತನ್ನ ಆಸೆ ಈಡೇರದ ಹಿನ್ನೆಲೆಯಲ್ಲಿ ಯುವಕನೊಬ್ಬ ಶಿವಲಿಂಗವನ್ನೇ ಕದ್ದಿರುವ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್​ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ:ಬೆಳಿಗ್ಗೆ ಕಸ ಗುಡಿಸುವ ವೇಳೆ ದುರಂತ: ಮಹಿಳೆಯ ಪ್ರಾಣ ತೆಗೆದ ಮಂಗಗಳ ಗುಂಪು..?ಯುವಕನನ್ನು ಚೋಟು(27) ಎಂದು ಗುರುತಿಸಲಾಗಿದ್ದು, ಆತ ಪ್ರಯಾಗ್‌ರಾಜ್‌ನಿಂದ 75 ಕಿ.ಮೀ. ದೂರದಲ್ಲಿರುವ ಕೌಶಂಬಿ ಜಿಲ್ಲೆಯ ಪ್ರಸಿದ್ಧ ಭೈರೋ ಬಾಬಾ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದ ಆರೋಪ ಹೊತ್ತಿದ್ದಾನೆ. ಶುಕ್ರವಾರ ಬೆಳಗ್ಗೆ ಕೆಲವು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಶಿವಲಿಂಗ ಕಾಣೆಯಾಗಿರುವುದು ಗಮನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.ಕೂಡಲೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದು, ಈ ಕುರಿತು ಕುಮ್ಹಿಯಾವಾಹ ಗ್ರಾಮದ ಮುಖ್ಯಸ್ಥ ಓಂ ಪ್ರಕಾಶ್ ಪೊಲೀಸ್ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಭಾನುವಾರದಂದು ಕುಮ್ಹಿಯಾವಾಹದಿಂದ ಚೋಟುನನ್ನು ಬಂಧಿಸಿ. ಗದ್ದೆಯಲ್ಲಿ ಎಲೆಗಳು ಮತ್ತು ಬಿದಿರುಗಳ ರಾಶಿಯ ಅಡಿಯಲ್ಲಿ ಮರೆಮಾಡಲಾಗಿದ್ದ ಕಳುವಾದ ಶಿವಲಿಂಗವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ನನ್ನ ಮಗನಿಗೆ ಗಲ್ಲು ಶಿಕ್ಷೆ ನೀಡಿ: ಮಗನ ವಿರುದ್ಧವೇ ಸಾಕ್ಷಿ ಹೇಳಿದ ತಾಯಿ..
ಮಹೇವ ಘಾಟ್ ಪೊಲೀಸ್ ಠಾಣಾಧಿಕಾರಿ ರಜನಿಕಾಂತ್ ಪ್ರಕಾರ, ವ್ಯಕ್ತಿಯನ್ನು ಐಪಿಸಿಯ ಸೆಕ್ಷನ್ 379ರ ಅಡಿಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಶ್ರಾವಣ ಮಾಸದಲ್ಲಿ ದೇವಸ್ಥಾನದಲ್ಲಿ ನಿತ್ಯ ವಿಶೇಷ ಪೂಜೆ ಸಲ್ಲಿಸಿ, ತನ್ನ ಮದುವೆ ನೆರವೇರಲಿ ಎಂದ ದೇವರಿಗೆ ಕೇಳಿಕೊಂಡಿದ್ದ. ಆದರೆ ಆ ಆಸೆ ಈಡೇರದ ಕಾರಣ ಆತ ಈ ಹೆಜ್ಜೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ.(ಏಜೆನ್ಸೀಸ್)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:17 + 13 =
Remember me
