ಲಖನೌ: ನಮ್ಮ ದೇಶದ 130 ಕೋಟಿಗೂ ಅಧಿಕ ಜನರು ಎಲ್ಲರೂ ಹಿಂದುಗಳು. ಈ ದೇಶ ಹಿಂದುಗಳದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಯಾಕೆ ಹೇಳುತ್ತಾರೆ? ಅವರ ಈ ಮಾತು ಒಂದು ಭಾಷೆಗೋ ಅಥವಾ ಒಂದು ಧರ್ಮಕ್ಕೋ ಸೇರಿದ್ದಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಡಾ.ಮೋಹನ ಭಾಗವತ್ ಹೇಳಿದ್ದಾರೆ.
ಅವರು ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾವು ಭಾವನಾತ್ಮಕವಾಗಿ ಒಗ್ಗಟ್ಟಿನಿಂದ ಇರಬೇಕು ಎಂಬುದನ್ನು ನಮ್ಮ ಸಂವಿಧಾನ ಹೇಳುತ್ತದೆ. ಹಾಗಾದರೆ ಭಾವನೆ ಯಾವುದು? ಈ ದೇಶ ನಮಗೆ ಸೇರಿದ್ದು, ನಮ್ಮ ಹಿರೀಕರ, ಪೂರ್ವಜರ ಬಳುವಳಿ ಇದು. ನಮ್ಮ ವಿಭಿನ್ನತೆಯ ಹೊರತಾಗಿಯೂ ನಾವು ಒಟ್ಟಾಗಿ ಬಾಳುತ್ತಿದ್ದೇವೆ. ಇದನ್ನೇ ನಾವು ಹಿಂದುತ್ವ ಎಂದು ಹೇಳುವುದು ಎಂದು ಭಾಗವತ್ ವಿವರಿಸಿದರು.
ದೇಶದ ಜನರೆಲ್ಲ ಹಿಂದೂಗಳು, ನಮ್ಮದು ಹಿಂದುತ್ವ ಎಂದು ಆರೆಸ್ಸೆಸ್ ಕಾರ್ಯಕರ್ತರು ಹೇಳುವುದು ಇದೇ ಅರ್ಥದಲ್ಲಿ ಹೊರತು, ಅದು ಯಾವುದೋ ಒಂದು ಭಾಷೆ, ಒಂದು ಧರ್ಮ ಅಥವಾ ಒಂದು ಜಾತಿಗೆ ಸೀಮಿತವಾದುದಲ್ಲ. ನಮಗೆ ಸಂವಿಧಾನದ ಹೊರತಾಗಿ ಯಾವುದೇ ಶಕ್ತಿ ಕೇಂದ್ರದ ಅಗತ್ಯವಿಲ್ಲ. ನಮಗೆ ಅದರಲ್ಲಿ ನಂಬಿಕೆಯೂ ಇಲ್ಲ ಎಂದು ಭಾಗವತ್ ಅವರು ವಿವರಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
