ಮುಂಬೈ:ಈ ಹಿಂದೆ ಹಾಲಿವುಡ್​ನಲ್ಲಿ ಇರುತ್ತಿದ್ದ ಲಿಪ್​ಲಾಕ್​ ಸೀನ್​ಗಳು ಭಾರತದ ಬಾಲಿವುಡ್​ ಸೇರಿದಂತೆ ಸ್ಯಾಂಡಲ್​ ವುಡ್​ತನಕ ಎಲ್ಲವುಡ್​ಗಳಿಗೂ ಬಂದು ವರ್ಷಗಳೇ ಉರುಳಿವೆ. ಆದರೆ ಆತರಹದ ಕಿಸ್ಸಿಂಗ್ ಮಾಡುವಾಗ ಹೀರೋ- ಹೀರೋಯಿನ್​ ಮೈಮರೆತರೆ ಏನಾಗುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.
ಇದನ್ನೂ ಓದಿ:ತೆಲಂಗಾಣದಲ್ಲಿ ಚಾಲುಕ್ಯರ ಕಾಲದ ಪುರಾತನ ಶಿಲಾಮೂರ್ತಿ ಪತ್ತೆ
ಬಾಲಿವುಡ್​ನಲ್ಲಿ ಹಿಂದಿನಿಂದಲೂ ಕಿಸ್ಸಿಂಗ್, ರೊಮ್ಯಾನ್ಸಿಂಗ್ ದೃಶ್ಯಗಳ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಕೆಲವು ವರ್ಷಗಳ ಹಿಂದಿನ ಬಾಲಿವುಡ್ ಎ ಜಂಟಲ್‌ಮ್ಯಾನ್ ದಲ್ಲಿ ಲವ್ ಮೇಕಿಂಗ್ ದೃಶ್ಯವನ್ನು ಮಾಡಲಾಗುತ್ತಿತ್ತು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಜೋಡಿ ರೊಮ್ಯಾನ್ಸ್​ ಸೀನ್​ನಲ್ಲಿ ಕಿಸ್‌ ಮಾಡಲು ಶುರುವಿಟ್ಟುಕೊಂಡರು. ಆದರೆ ಅವರು ಅದರಲ್ಲಿ ಎಷ್ಟು ಮುಳುಗಿಹೋಗಿದ್ದರೆಂದರೆ ನಿರ್ದೇಶಕ ದೃಶ್ಯ ಮುಗಿದಾಗ ಕಟ್ ಕಟ್ ಎಂದು ಮೈಕಲ್ಲಿ ಕಿರುಚಿಕೊಂಡರೂ ನಟ, ನಟಿ ಚುಂಬಿಸುವುದನ್ನು ಮಾತ್ರ ನಿಲ್ಲಿಸಲೇ ಇಲ್ಲ. ಇದನ್ನು ಆ ಹೀರೋ, ಹೀರೋಯಿನ್​ ಸಹ ಒಪ್ಪಿಕೊಂಡಿದ್ದರು.
ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಡುವೆ ಇದೇ ರೀತಿಯ ಘಟನೆ ನಡೆದಿದ್ದು, 2017 ರಲ್ಲಿ ಆಕ್ಷನ್-ಕಾಮಿಡಿ ಚಲನಚಿತ್ರ ಎ ಜಂಟಲ್‌ಮ್ಯಾನ್ ಚಿತ್ರಿಸುತ್ತಿದ್ದಾಗ. ಈ ಚಿತ್ರವನ್ನು ಸುಂದರ್, ಸುಶೀಲ್, ರಿಸ್ಕಿ , ರಾಜ್ ಮತ್ತು ಡಿಕೆ ಬರೆದು ನಿರ್ದೇಶಿಸಿದ್ದರು. ಹೆಚ್ಚು ರೊಮ್ಯಾನ್ಸ್​ ಸೀನ್​ಗಳಿದ್ದರೂ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೀರಸವಾದ ರೆಸ್ಪಾನ್ಸ್ ಪಡೆದಿತ್ತು.
ಆದರೆ ಇದರಲ್ಲಿ ನಟ-ನಟಿ ನಡುವಿನ ರೊಮ್ಯಾನ್ಸ್ ಮಸ್ತ್ ಫೇಮಸ್ ಆಯಿತು. ಅವರಿಬ್ಬರ ನಡುವಿನ ರೊಮ್ಯಾನ್ಸ್​ಗಾಗಿಯೇ ಬಹಳಷ್ಟು ಜನರು ಸಿನಿಮಾ ನೋಡಿದರು. ಚಿತ್ರದ ಲಾಗಿ ನಾ ಚೂಟೆ ಹಾಡಿನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಕ್ಲಿನ್ ಫರ್ನಾಂಡೀಸ್ ಅವರು ತೀವ್ರ ಭಾವೋದ್ರಿಕ್ತವಾಗಿ ಕಿಸ್ಸಿಂಗ್ ಸೀನ್​ನಲ್ಲಿ ತೊಡಗಿಸಿಕೊಂಡಿದ್ದರು.
ಸೀನ್ ಶೂಟ್ ಮಾಡುವಾಗ ನಿರ್ದೇಶಕರು ಕಟ್‌ ಎಂದರು. ಆದರೆ ನಟ ನಟಿ ಇಬ್ಬರೂ ಕಿಸ್ಸಿಂಗ್ ನಿಲ್ಲಿಸಲಿಲ್ಲ. ಕಟ್ ಹೇಳದ ಮೇಲೆಯೂ ಇಬ್ಬರೂ ಕಿಸ್‌ನಲ್ಲಿ ಮುಳುಗಿದ್ದರಿಂದ ದೃಶ್ಯ ಅನಿರೀಕ್ಷಿತ ತಿರುವು ಪಡೆಯಿತು. ಈ ಭಾವೋದ್ರಿಕ್ತ ಕ್ಷಣವು ಅಂತಿಮವಾಗಿ ಬಾಲಿವುಡ್‌ನಲ್ಲಿ “ಸುದೀರ್ಘ ಮುತ್ತು” ಎಂಬ ಬಿರುದನ್ನು ಗಳಿಸಿತು. ಇದನ್ನು ಸ್ವತಃ ರಾಜ್ ಮತ್ತು ಡಿಕೆ ಬಹಿರಂಗಪಡಿಸಿದ್ದಾರೆ.
ಈ ಸೀನ್ ಬಗ್ಗೆ ಮಾತನಾಡಿದ್ದ ನಿರ್ದೇಶಕರು ನಾವು ಅವರಿಗೆ ಇದು ಕಟ್ ಎಂದು ಹೇಳುತ್ತಿದ್ದೆವು. ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇಬ್ಬರೂ ಭಾವೋದ್ರೇಕಕ್ಕೆ ಒಳಗಾಗಿದ್ದರು. ಅದು ಬಾಲಿವುಡ್‌ನ ಸುದೀರ್ಘ ಮುತ್ತು ಆಯಿತು ಎಂದು ಅವರು ವಿವರಿಸಿದ್ದರು.
ಈ ಘಟನೆಯು ಸಿನಿಮಾ ಸೆಟ್‌ನಲ್ಲಿ ಉದ್ಭವಿಸಬಹುದಾದ ಅನಿರೀಕ್ಷಿತ ಕೆಮೆಸ್ಟ್ರಿಗೆ ಉದಾಹರಣೆಯಾಗಿ ಉಳಿದು ಬಿಟ್ಟಿದೆ. ಅಲ್ಲಿ ಉತ್ಸಾಹದ ಕ್ಷಣಗಳು ಸ್ಕ್ರಿಪ್ಟ್ ಮಾಡಿದ ದೃಶ್ಯಗಳನ್ನೂ ದಾಟಿ ಕೆಲವೊಮ್ಮೆ ಸೀನ್ ಸಾಗುತ್ತದೆ ಎನ್ನುವುದು ಸಾಬೀತಾಗಿತ್ತು.
ಸಚಿವ ಸ್ಥಾನದ ಬಗ್ಗೆ ಆಸಕ್ತಿ ಇಲ್ಲ ಎಂದ ಬಿಜೆಪಿ ಎಂಪಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
