ಬೆಂಗಳೂರು:ಇಂದಿನಿಂದ ರಾಮಲಲ್ಲಾ ಪ್ರಾಣಪ್ರತಿಷ್ಠಾ ವಿಧಿವಿಧಾನಗಳು ಆರಂಭವಾಗಿದ್ದು, ಜನವರಿ 22ರವರೆಗೆ ನಡೆಯಲಿದೆ. ಏತನ್ಮಧ್ಯೆ ಪ್ರತಿದಿನದಂತೆ ಪ್ರಧಾನಿ ಮೋದಿ ಅವರು ಭಗವಾನ್ ರಾಮನ ಸ್ತೋತ್ರವನ್ನು ಟ್ವೀಟ್ ಮಾಡಿದ್ದು, ದಕ್ಷಿಣದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಹಾಡನ್ನು ಹಾಡಿ ಹೊಗಳಿದ್ದಾರೆ. ಗಾಯಕಿಯ ಹಾಡನ್ನು ಟ್ವೀಟ್ ಮಾಡುವಾಗ “ಕನ್ನಡದಲ್ಲಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಈ ನಿರೂಪಣೆಯು ಶ್ರೀರಾಮನ ಬಗ್ಗೆಯಿರುವ ಭಕ್ತಿಯ ಸುಂದರ ಭಾವನೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ಸಹಾಯಕವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ತಿಳಿಸಿದ್ದಾರೆ.
ಶಿವಶ್ರೀ ಸ್ಕಂದ ಪ್ರಸಾದ್ ಯಾರು?ಬಿ.ಟೆಕ್ ಪದವೀಧರೆಯಾಗಿರುವ ಶಿವಶ್ರೀ ಸ್ಕಂದ ಪ್ರಸಾದ್ ತಮಿಳು ಕುಟುಂಬದಿಂದ ಬಂದಿದ್ದು, ಸಂಗೀತ ಅವರ ರಕ್ತದಲ್ಲಿದೆ. ಏಕೆಂದರೆ ಆಕೆ ತಮಿಳುನಾಡಿನ ಸಂಗೀತ ಕುಟುಂಬದಿಂದ ಬಂದವರು. ಶಿವಶ್ರೀ ಅವರಿಗೆ ಸಂಗೀತವಲ್ಲದೆ ಭರತನಾಟ್ಯದಲ್ಲೂ ಆಸಕ್ತಿ ಇದೆ. ಶಿವಶ್ರೀ ಮೂರನೆ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದರು. ಸಂಗೀತವನ್ನು ಆನುವಂಶಿಕವಾಗಿ ಪಡೆದಿರುವ ಬಗ್ಗೆ ಸ್ವತಃ ಶಿವಶ್ರೀ ಅನೇಕ ಬಾರಿ ಹೇಳಿದ್ದಾರೆ. ಗಾಯಕಿಯ ತಂದೆ ಜೆ ಸ್ಕಂದ ಪ್ರಸಾದ್ ಮೃದಂಗ ವಿದ್ವಾಂಸರಾಗಿದ್ದರೆ, ಅವರ ಅಜ್ಜ ಕೂಡ ಸಂಗೀತಗಾರರಾಗಿದ್ದಾರೆ.
This rendition by Sivasri Skandaprasad in Kannada beautifully highlights the spirit of devotion to Prabhu Shri Ram. Such efforts go a long way in preserving our rich cultural heritage.#ShriRamBhajanhttps://t.co/9wYmjhC4p5
— Narendra Modi (@narendramodi)January 16, 2024

ಹಲವು ಜಾಹೀರಾತುಗಳಿಗೂ ಹಾಡಿದ್ದಾರೆ ಶಿವಶ್ರೀಶಿವಶ್ರೀ ಸ್ಕಂದ ಪ್ರಸಾದ್ ಅವರು ನಾರದ ಗಾನ ಸಭಾ, ಶ್ರೀ ಕೃಷ್ಣ ಗಾನ ಸಭಾ ಮತ್ತು ಬ್ರಹ್ಮ ಗಾನ ಸಭಾಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಅವರು ಎ.ಎಸ್.ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಿಂದ ಭರತನಾಟ್ಯ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ಗಾಯಕಿ ಪ್ರಸ್ತುತ ಇ-ಸ್ಕೂಲ್ ಆಹುತಿಯನ್ನು ನಡೆಸುತ್ತಿದ್ದಾರೆ. ಅದರ ಮೂಲಕ ಅವರು ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಕಲಿಸುತ್ತಾರೆ.
ಗಾಯಕ ಭಜನೆಗಳನ್ನು ಮಾತ್ರ ಹಾಡಿಲ್ಲ, ಅವರು ಅನೇಕ ಮಸಾಲಾ ಬ್ರಾಂಡ್‌ಗಳಿಗೆ ಜಿಂಗಲ್‌ಗಳನ್ನು ಸಹ ಹಾಡಿದ್ದಾರೆ. ಇದರಲ್ಲಿ ಗೋಲ್ಡ್ ವಿನ್ನರ್, ಸರವಣ ಸ್ಟೋರ್ಸ್ ಮತ್ತು ಶಕ್ತಿ ಮಸಾಲಾ ಸೇರಿವೆ. ಶಿವಶ್ರೀ ಸ್ಕಂದ ಪ್ರಸಾದ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ. ಅವರನ್ನು 80 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.
ಅಯೋಧ್ಯೆ ಭೂಮಿಯ ಬೆಲೆ ನಾಲ್ಕು ಪಟ್ಟು ಹೆಚ್ಚಳ… ರಾಮ ಮಂದಿರದಿಂದ ದೂರಕ್ಕೆ ಅನುಗುಣವಾಗಿ ಮೌಲ್ಯ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
