ಪಾಟ್ನಾ:ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಮನವಿ ಮಾಡಿದರು. ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಪಾದ ಮುಟ್ಟಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ:ದೇಹದಲ್ಲಿನ ವಿಷ ಫಿಲ್ಟರ್​ ಮಾಡುವ ಲಿವರ್​ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?: ಇಲ್ಲಿದೆ ಸುಲಭ ಮಾರ್ಗ
ಪಾಟ್ನಾದಲ್ಲಿ ನಡೆದ ಗೈಘಾಟ್‌ನಿಂದ ಕಂಗನ್ ಘಾಟ್‌ವರೆಗಿನ ಗಂಗಾ ಪಥದ ಭಾಗದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಘೋಪುರ ಸೇತುವೆಯ ನಿರ್ಮಾಣ ಕಾಮಗಾರಿಯ ಪ್ರಗತಿಯ ಕುರಿತು ಅಧಿಕಾರಿಗಳನ್ನು ಕೇಳಿದರು. ಅಕ್ಟೋಬರ್ ವೇಳೆಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರಸ್ತೆ ನಿರ್ಮಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ತಿಳಿಸಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಸೇತುವೆ ನಿರ್ಮಾಣ ಕಾಮಗಾರಿ ನಿಗದಿತ ಸಮಯಕ್ಕೆ ಮುಗಿಯುತ್ತದೆಯೇ? ಎಂದು ಕೇಳಿದರು.
ಅಕ್ಟೋಬರ್ ವೇಳೆಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಭರವಸೆ ನೀಡಿದರು. ಆದರೆ 2025ರ ಜೂನ್ ವೇಳೆಗೆ ರಾಘೋಪುರ ಕಡೆಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಅದಕ್ಕೆ ಸಿಎಂ ನಿತೀಶ್​​​​ ಕುಮಾರ್​​ ಅಸಮಾಧಾನಗೊಂಡು ಕಾಮಗಾರಿ ಪೂರ್ಣಗೊಳಿಸದಿದ್ದರೆ ಕೇವಲ ಸೇತುವೆ ಸಿದ್ಧಪಡಿಸಿ ಏನು ಪ್ರಯೋಜನ, ಆದಷ್ಟು ಬೇಗ ಕೆಲಸ ಮಾಡಿ. ಯಾವ ಸಮಸ್ಯೆ ಇದೆ ಹೇಳಿ, ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದರು.
ಸಿಎಂ ಕೋಪಗೊಂಡಿದ್ದನ್ನು ನೋಡಿ ಅಧಿಕಾರಿಗಳು ಆತಂಕಗೊಂಡರು. ಇದಾದ ನಂತರ ಮುಖ್ಯಮಂತ್ರಿಗಳು ಕೈಮುಗಿದು, ನೀವು ಕೇಳಿದರೆ ಕಹಿಯೇ ತೋ ಹಮ್ ಆಪ್ಕಾ ಪೇರ್ ಚು ಲೇತೆ ಹೈಂ (ನಿಮಗೆ ಬೇಕಾದರೆ ನಾನು ನಿಮ್ಮ ಪಾದಗಳನ್ನು ಮುಟ್ಟುತ್ತೇನೆ)ಎಂದು ಪಾದ ಮುಟ್ಟಲು ಮುಂದಾಗಿದ್ದಾರೆ. ಸರ್​​ ದಯವಿಟ್ಟು ಹೀಗೆ ಮಾಡಬೇಡಿ ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​​)
ಕೇಂದ್ರ ಬಜೆಟ್​ ಮಂಡನೆ ಸಮಯ ಸಂಜೆ 5ರಿಂದ ಬೆಳಗ್ಗೆ 11ಕ್ಕೆ ಬದಲಾಗಿದ್ದು ಏಕೆ ಗೊತ್ತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × one =
Remember me
