ದೆಹಲಿ:ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಪತಿಯ ಇತರ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿ ವಾಸಿಸಲು ಹೆಂಡತಿಯ ಒತ್ತಾಯವನ್ನು ‘ಕ್ರೌರ್ಯ’ ಎಂದು ಕರೆಯಬಹುದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಇದನ್ನೂ ಓದಿ:ತಂದೆಯನ್ನು ಇಟ್ಟಿಗೆಯಿಂದ ಹತ್ಯೆಗೈದು, ಕಿವಿ-ಬೆರಳನ್ನು ತಿಂದ ಮಗ..ಸುಳ್ಳು ಆರೋಪ ಹೊರಿಸಿ ಠಾಣೆಗೆ ಕರೆಸಿಕೊಳ್ಳುವ ಸಾಧ್ಯತೆಯಲ್ಲದೆ, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸಬಹುದು ಎಂಬ ಸ್ಥಿತಿಯಲ್ಲಿ ಆತನನ್ನು ಕೂರಿಸುವುದು ಕೂಡ ಮಾನಸಿಕ ಹಿಂಸೆಯಾಗಿದೆ ಎಂದರು. ಜತೆಗೆ ಕಳೆದ 17 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗೆ ನ್ಯಾಯಾಲಯ ವಿಚ್ಛೇದನ ನೀಡಿದೆ.ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ದ್ವಿಸದಸ್ಯ ಪೀಠ, ಪೊಲೀಸ್ ಠಾಣೆಯು ಯಾರೊಬ್ಬರಿಗೂ ಭೇಟಿ ನೀಡುವ ಸ್ಥಳವಲ್ಲ. ತನ್ನ ಪತಿ ಮತ್ತು ಆತನ ಕುಟುಂಬವನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲು ಪತ್ನಿ ಎಲ್ಲವನ್ನೂ ಮಾಡಿದ್ದಾಳೆ. ‘ಈ ನಿರ್ದಿಷ್ಟ ಪ್ರಕರಣದಲ್ಲಿ ಪ್ರತ್ಯೇಕತೆಗೆ ಒತ್ತಾಯಿಸಲು ಯಾವುದೇ ಸಮರ್ಥನೀಯ ಕಾರಣವನ್ನು ತೋರಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಪ್ರತ್ಯೇಕಗೊಳ್ಳಲು ನಿರ್ಧರಿಸಿದ್ದರಿಂದ ಇದು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿ ಆಕೆ ತನ್ನ ಸ್ವಂತ ಸ್ಥಳಕ್ಕೆ ಹೋಗಿದ್ದಳು.
ಇದನ್ನೂ ಓದಿ:ಮಹಿಳೆಯ ಗಂಟಲು ಕೊಯ್ದು, ದೇಹದಿಂದ ಕಾಲು ಬೇರ್ಪಡಿಸಿದ ದುರುಳರು..ಆದರೆ ತದನಂತರ ಆಕೆ ತನ್ನ ಪತಿಯನ್ನು ತಂದೆ-ತಾಯಿಯಿಂದ ಬೇರ್ಪಡಿಸಬೇಕು ಎಂದು ಹಠ ಹಿಡಿದಿರುವುದು ವಿಚಿತ್ರವಾಗಿದೆ. ಬೇರ್ಪಡಲು ಯಾವುದೇ ಸಮರ್ಥನೀಯ ಕಾರಣವಿಲ್ಲದಿರುವುದರಿಂದ ಇಂತಹ ಕ್ರಮಗಳನ್ನು ಕ್ರೌರ್ಯವೆಂದು ಪರಿಗಣಿಸಬೇಕಾಗುತ್ತದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಈ ವೇಳೆ ಪತ್ನಿ ತನ್ನ ಪತಿ ಹಾಗೂ ಆತನ ಮನೆಯವರ ಮೇಲೆ ಕ್ರೂರವಾಗಿ ನಡೆದುಕೊಂಡಿದ್ದು, ಚಿಕ್ಕಪ್ಪನ ಎದುರೇ ತನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ ಎಂದು ಒಂದು ಬಾರಿ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚ್ಛೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಆತನಿಗೆ ವಿಚ್ಛೇದನ ನೀಡದ ಕಾರಣ ಸಂತ್ರಸ್ತೆ ದೆಹಲಿ ಹೈಕೋರ್ಟ್‌ನಲ್ಲಿ ಸವಾಲು ಹಾಕಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಅವರ ಪೀಠವು, ವಿಚಾರಣಾ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.ಇದನ್ನೂ ಓದಿ:ಪತಿಯನ್ನು ಫಂಕ್ಷನ್​ಗೆ ಕಳುಹಿಸಿ, ಆತನ ಗೆಳೆಯನ ಜೊತೆ ಪರಾರಿಯಾದ ಪತ್ನಿ..!ಈ ಪ್ರಕರಣದಲ್ಲಿ ದಂಪತಿಗಳಿಬ್ಬರು ಸುಮಾರು 17 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರಿಂದ ದೀರ್ಘಾವಧಿಯ ಪ್ರತ್ಯೇಕತೆಯನ್ನು ವಿಚ್ಛೇದನ ನೀಡಲು ಕಾರಣವೆಂದು ಪರಿಗಣಿಸಬಹುದು ಎಂದು 201 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನೆನಪಿಸಿಕೊಳ್ಳುತ್ತಾ, ವಿಚ್ಛೇದನವನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಜನರು ಸಾಮಾನ್ಯವಾಗಿ ಮದುವೆಯ ನಂತರ ಅಥವಾ ಪಾಶ್ಚಾತ್ಯರಂತೆ 18 ವಯಸ್ಸಿನ ಬಳಿಕ ಕುಟುಂಬದಿಂದ ಬೇರ್ಪಡುವುದಿಲ್ಲ. ಮದುವೆಯ ನಂತರ ಹೆಂಡತಿಯನ್ನು ಗಂಡನ ಕುಟುಂಬದ ಭಾಗವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 12 =
Remember me
