ಮುಂಬೈ:ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಿಳೆಯರೆಲ್ಲ ತಮ್ಮ ಮನೆ ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಮಹಾರಾಷ್ಟ್ರದ ಮಹಿಳೆಯೊಬ್ಬಳು ಈ ಹಬ್ಬದ ಸಮಯದಲ್ಲಿ ಬಂಗಾರವನ್ನೇ ಕಸವೆಂದು ಎಸೆದಿದ್ದಾಳೆ. ಅದೃಷ್ಟವಶಾತ್​ ಆಕೆ ಎಸೆದ ಬಂಗಾರ ಆಕೆಯನ್ನು ಮತ್ತೆ ಹುಡುಕಿಕೊಂಡು ಬಂದಿದೆ.
ಇದನ್ನೂ ಓದಿ:ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಮತ್ತಿಬ್ಬರ ಬಂಧನ
45 ವರ್ಷದ ಮಹಿಳೆ ಮನೆ ಸ್ವಚ್ಛ ಮಾಡುವಾಗ ಮನೆಯಲ್ಲಿದ್ದ ಹಳೆಯ ಪರ್ಸ್​ ಒಂದನ್ನು ಕಸದ ಜತೆ ಸೇರಿಸಿ ಎಸೆದಿದ್ದಾರೆ. ಅದನ್ನು ನಗರ ಪಾಲಿಕೆಯ ಪೌರ ಕಾರ್ಮಿಕರು ತೆಗೆದುಕೊಂಡು ಹೋಗಿ ಕಸದ ರಾಶಿಗೆ ಸುರಿದಿದ್ದಾರೆ. ಕಸ ಎಸೆದು ಗಂಟೆಗಳು ಉರುಳಿದ ನಂತರ ಮಹಿಳೆಗೆ ವಿಚಾರವೊಂದು ಹೊಳೆದಿದೆ. ಮನೆಗೆ ಬರುವ ಸೊಸೆಗೆಂದು ಮಾಡಿಸಿಟ್ಟಿದ್ದ ಮೂರು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣವನ್ನು ತಾನು ಆ ಪರ್ಸ್​ನಲ್ಲಿ ಇಟ್ಟಿದ್ದು ತಡವಾಗಿ ಅರಿವಿಗೆ ಬಂದಿದೆ. ಕೂಡಲೇ ಆಕೆ ತನ್ನ ಮಗನಿಗೆ ವಿಷಯ ಮುಟ್ಟಿಸಿದ್ದಾಳೆ.
ಇದನ್ನೂ ಓದಿ:ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್​ನಲ್ಲಿ ದೀದಿ!
ನಡೆದ ವಿಚಾರವನ್ನು ನಗರ ಪಾಲಿಕೆಯ ಅಧಿಕಾರಿಗಳಿಗೆ ಮಗ ತಿಳಿಸಿದ್ದಾನೆ. ಪೌರ ಕಾರ್ಮಿಕ ಹೇಮಂತ್​ನೊಂದಿಗೆ ಬಂಗಾರ ಹುಡುಕಲು ಕಸ ಹಾಕಿದ್ದ ಸ್ಥಳಕ್ಕೆ ಅಮ್ಮ ಮಗ ತೆರಳಿದ್ದಾರೆ. ಅಲ್ಲಿ ಸುಮಾರು 18 ಟನ್​ ತ್ಯಾಜ್ಯ ಒಟ್ಟಾಗಿತ್ತು. ಆದರೆ ಹೇಮಂತ್​ ಅವರ ಚಾಣಾಕ್ಷತನದಿಂದ ಪರ್ಸ್​ ಅನ್ನು ಹುಡುಕಲಾಗಿದೆ.
ಈ ಹಿಂದೆ 2013ರಲ್ಲಿಯೂ ಇಂತದ್ದೇ ಒಂದು ಘಟನೆ ನಡೆದಿತ್ತು. ಆಗಲೂ ಕೂಡ ಹೇಮಂತ್​ ಅವರೇ ಬಂಗಾರವನ್ನು ಹುಡುಕಿಕೊಟ್ಟಿದ್ದರಂತೆ. (ಏಜೆನ್ಸೀಸ್​)
‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್​ ಕುಮಾರ್​

ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಮಗ ಅರೆಸ್ಟ್​; ಅಪ್ಪನಿಗೆ ರಜೆ ಕೊಟ್ಟು ಆರೈಕೆ ಮಾಡುತ್ತಿರುವ ಕೇರಳ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
