ಕೊಚ್ಚಿ:ಬೈಕ್​ ಚಲಾಯಿಸುವಾಗ ವಿಷಕಾರಿ ಹಾವು ಕಡಿದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೇರಳದ ಕೊಯಿಕ್ಕೋಡ್​ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಡೆದಿದೆ.
ರಾಹುಲ್​ (30) ಬಚಾವಾದ ಯುವಕ. ಈತ ನಡುವತ್ತೂರಿನ ನಿವಾಸಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ. ಕಳೆದ ಶುಕ್ರವಾರ ಬೆಳಗ್ಗೆ ಕಚೇರಿಯಿಂದ ತುರ್ತು ಕರೆ ಬಂದಾಗ ರಾಹುಲ್ ಕೊಯಿಲಾಂಡಿಯ ಮನೆಯಲ್ಲಿದ್ದರು. ಈ ವೇಳೆ ಧಾವಂತದಲ್ಲಿ ಬೈಕ್​ನಲ್ಲಿ ಇಟ್ಟಿದ್ದ ಹೆಲ್ಮೆಟ್ ಅನ್ನು ಪರಿಶೀಲನೆಯೂ ಮಾಡದೇ ಹಾಕಿಕೊಂಡು ಆಫೀಸ್​ಗೆ ಹೊರಟರು. ಮನೆಯಿಂದ ಸುಮಾರು 5 ಕಿಮೀ ಸವಾರಿ ಮಾಡಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ರಾಹುಲ್ ಅವರ ತಲೆಯ ಬಲಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಅದನ್ನು ಸಹಿಸಲಾಗದ ರಾಹುಲ್, ಬೈಕ್ ನಿಲ್ಲಿಸಿ ಹೆಲ್ಮೆಟ್ ತೆಗೆದು ಕನ್ನಡಿಯಲ್ಲಿ ನೋಡುವಾಗ ಆತನಿಗೆ ಶಾಕ್​ ಕಾದಿತ್ತು. ಅವನ ತಲೆಯ ಸುತ್ತಲೂ ಉದ್ದವಾದ ಕ್ರೈಟ್ (ಕನ್ನಡದಲ್ಲಿ ಕಟ್ಟು ಹಾವು) ಸುತ್ತಿಕೊಂಡಿರುವುದನ್ನು ನೋಡಿದನು. ಈ ವೇಳೆಯೂ ಹಾವು ಆತನಿಗೆ ಕಚ್ಚಿತು.
ಇದನ್ನೂ ಓದಿ:ನಮ್ಮ ಮೇಲೆ ಕ್ಷಣದಲ್ಲೇ ಕೇಸ್​, ಸಚಿವರ ಮೇಲೇಕೆ ಕೇಸ್​ ತಗೊಳ್ಳಲ್ಲ ?; ಮಣಿಕಂಠ ರಾಠೋಡ್​
ಹಾವನ್ನು ಬಿಡಿಸಲು ನಾನು ಬಲವಾಗಿ ತಲೆ ಅಲ್ಲಾಡಿಸಿದೆ. ಅದು ನೆಲದ ಮೇಲೆ ಬಿದ್ದಿತು ಮತ್ತು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ವೇಗವಾಗಿ ಚಲಿಸಿತು ಎಂದು ರಾಹುಲ್ ಹೇಳಿದ್ದಾರೆ. ಹಾವು ಕಣ್ಮರೆಯಾದರೂ, ಭಯವನ್ನು ಹೋಗಲಾಡಿಸಲು ನನಗೆ ಸಾಧ್ಯವಾಗಲಿಲ್ಲ. ಅಲ್ಲಿಯೇ ಇದ್ದ ಸ್ಥಳಿಯರು ನನ್ನನ್ನ ಕೊಯಿಲಾಂಡಿ ತಾಲೂಕು ಆಸ್ಪತ್ರೆಯ ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದು ಮಾತ್ರ ನನಗೆ ನೆನಪಿದೆ ಎಂದು ರಾಹುಲ್​ ತಿಳಿಸಿದ್ದಾರೆ.
ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ರಾಹುಲ್​ರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರಿಗೆ ಆ್ಯಂಟಿ ಸ್ನೇಕ್​ ವೆನಮ್​(ಎಎಸ್​ವಿ) ಮದ್ದು ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (MCH) ಸ್ಥಳಾಂತರಿಸಲಾಯಿತು. ರಾಹುಲ್ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ವೈದ್ಯರು ಸುಮಾರು 24 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡರು.
ಸೂಕ್ತ ಸಮಯದಲ್ಲಿ ಆ್ಯಂಟಿ ವೆನಮ್ ಚುಚ್ಚುಮದ್ದು ಮತ್ತು ಚಿಕಿತ್ಸೆ ದೊರೆತಿದ್ದಕ್ಕೆ ರಾಹುಲ್​ ಆರೋಗ್ಯ ಸ್ಥಿರವಾಗಿದೆ. ಒಂದು ವೇಳೆ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದಿದ್ದರೆ ರಾಹುಲ್​ ಸಾವು ಖಚಿತವಾಗಿತ್ತು. ಆದರೆ, ಅವರ ಬಾಳಲ್ಲಿ ಪವಾಡವೇ ನಡೆದಿದೆ. ಮಂಗಳವಾರ ಮನೆಗೆ ವಾಪಸ್​ ಬಂದಿದ್ದಾರೆ. 10 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ರಾಹುಲ್​ಗೆ ವೈದ್ಯರು ತಿಳಿಸಿದ್ದಾರೆ. ಇದೇ ರೀತಿ ಕಳೆದ 8 ತಿಂಗಳಲ್ಲಿ ಹೆಲ್ಮೆಟ್​ ಒಳಗೆ ಹಾವು ಕಚ್ಚಿದ 12 ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಸೂಕ್ತ ಚಿಕಿತ್ಸೆಯಿಂದಾಗಿ ಯಾರಿಗೂ ಪ್ರಾಣಹಾನಿ ಆಗಿಲ್ಲ.
ಇನ್ನು ಹಾವುಗಳಂತಹ ಸರೀಸೃಪಗಳು ಒಣ ಮತ್ತು ಬೆಚ್ಚಗಿನ ತಾಣಗಳನ್ನು ಹುಡುಕಿಕೊಂಡು ತಮ್ಮ ವಿಶ್ರಾಂತಿ ಸ್ಥಳಗಳಿಂದ ಹೊರಬರುತ್ತವೆ. ಹಾವುಗಳಿಗೆ ತೆರೆದ ಸ್ಥಳದಲ್ಲಿ ಇರಿಸಲಾಗಿರುವ ಹೆಲ್ಮೆಟ್‌ಗಳು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳವಾಗಿದೆ ಎಂದು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞ ಸುನಿಶಾ ಮೆನನ್ ಹೇಳಿದ್ದಾರೆ.
ಇದನ್ನೂ ಓದಿ:ಸೂರ್ಯ ಶಿಕಾರಿಗೂ ಸಜ್ಜು: ಸೆಪ್ಟೆಂಬರ್​ನಲ್ಲಿ ಆದಿತ್ಯ ಉಡಾವಣೆ; ಇಸ್ರೋ ಸಿದ್ಧತೆ
ಹಾವು ಕಡಿತದಿಂದ ಬಳಲುತ್ತಿರುವ ಯಾರಾದರೂ ತಕ್ಷಣ ವೃತ್ತಿಪರ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ನಮ್ಮ ದೇಶವು ವಿವಿಧ ಹಾವುಗಳಿಗೆ ನೆಲೆಯಾಗಿದೆ. ಇಲ್ಲಿ ವಿಷಕಾರಿ ಮತ್ತು ವಿಷಕಾರಿಯಲ್ಲದ ಜಾತಿಗಳ ನಡುವೆ ವ್ಯತ್ಯಾಸ ಗುರುತಿಸುವುದು ಸವಾಲಿನ ಸಂಗತಿಯಾಗಿದೆ. ಅದಕ್ಕಾಗಿಯೇ ನಾವು ಹಾವುಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸುನಿಶಾ ಮೆನನ್ ಸಲಹೆ ನೀಡಿದ್ದಾರೆ.(ಏಜೆನ್ಸೀಸ್​)
ಕಿಡ್ನಿಗೆ ಯಾವುದೇ ಸಮಸ್ಯೆ ಬರಬಾರದು ಅಂದ್ರೆ ನಿಮ್ಮ ಅಡುಗೆಯಲ್ಲಿ ಈ ಎಣ್ಣೆಯನ್ನು ತಪ್ಪದೇ ಬಳಸಿ…

ಆಸ್ಟ್ರೇಲಿಯಾ ಕಠಿಣ ಕಾನೂನಿಗೆ ಬೇಸತ್ತು ಸಾವಿಗೆ ಶರಣು: ಕೊರಿಯರ್ ಮೂಲಕ ಮನೆಗೆ ಬಂದ ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ

ಚೆಸ್​ ವಿಶ್ವಕಪ್​ ರನ್ನರ್​ಅಪ್​ ಪ್ರಜ್ಞಾನಂದ ಗಳಿಸಿದ ಬಹುಮಾನ ಮೊತ್ತವೆಷ್ಟು ಗೊತ್ತೇ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + 4 =
Remember me
