ಭಾರತದ ಈ ಗ್ರಾಮದಲ್ಲಿ ಯಾವ ಮಹಿಳೆಯೂ ಬಟ್ಟೆ ಧರಿಸುವುದಿಲ್ಲ! ಇದರ ಹಿಂದಿನ ಕಾರಣ ತಿಳಿದರೆ ಶಾಕ್ ಆಗುತ್ತೀರಿ! : ಭಾರತದ ಈ ಹಳ್ಳಿಯಲ್ಲಿ ಮಹಿಳೆಯರು ಸದಾ ಬೆತ್ತಲೆಯಾಗಿಯೇ ಇರುತ್ತಾರೆ. ಈ ಗ್ರಾಮದ ಹೆಸರು ನಿಮಗೆ ತಿಳಿದಿದೆಯೇ? ಇದರ ಹಿಂದಿನ ರಹಸ್ಯವೇನು ಎಂದು ಈಗ ತಿಳಿಯೋಣ. : ಜಗತ್ತಿನಲ್ಲಿ ಅನೇಕ ಸಂಪ್ರದಾಯಗಳಿವೆ.. ಅವುಗಳ ಬಗ್ಗೆ ಅನೇಕ ಚರ್ಚೆಗಳು ಮತ್ತು ಟೀಕೆಗಳಿವೆ. ಕೆಲವು ಸ್ಥಳಗಳಲ್ಲಿ ಸಾಮಾನ್ಯ ಜೀವನದಲ್ಲಿ ಮಹಿಳೆಯರು ಅಥವಾ ಪುರುಷರಿಗಾಗಿ ರಚಿಸಲಾದ ಅನೇಕ ಸಂಪ್ರದಾಯಗಳು ಇಂದಿಗೂ ಪ್ರಚಲಿತದಲ್ಲಿವೆ. ಅದೇ ರೀತಿ ಭಾರತದಲ್ಲಿ ಒಂದು ಹಳ್ಳಿಯಿದೆ, ಅಲ್ಲಿ ಮಹಿಳೆ ಮತ್ತು ಪುರುಷರಿಗೆ ಒಂದು ವಿಚಿತ್ರ ಸಂಪ್ರದಾಯವಿದೆ. ಹಿಮಾಚಲ ಪ್ರದೇಶದ ಮಣಿಕರ್ಣ ಕಣಿವೆಯ ಪಿನಿ ಗ್ರಾಮದಲ್ಲಿ ಮಹಿಳೆಯರು ಇಂದಿಗೂ ಬಟ್ಟೆ ಧರಿಸದಿರುವ ಅನಾದಿ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ, ಈ ಗ್ರಾಮವು ಪುರುಷರಿಗಾಗಿ ಕಟ್ಟುನಿಟ್ಟಾದ ಸಂಪ್ರದಾಯವನ್ನು ಹೊಂದಿದೆ. ಅವರು ಅದನ್ನು ಅನುಸರಿಸಬೇಕು. ಸಂಪ್ರದಾಯದ ಪ್ರಕಾರ, ಮಹಿಳೆಯರು ವರ್ಷದಲ್ಲಿ 5 ದಿನ ಯಾವುದೇ ಬಟ್ಟೆಯನ್ನು ಧರಿಸುವುದಿಲ್ಲ. ಅಲ್ಲದೆ ಪುರುಷರು ಮದ್ಯಪಾನ ಮಾಡುವಂತಿಲ್ಲ. ಇದನ್ನೂ ಓದಿ- ಪಿಣಿ ಗ್ರಾಮದಲ್ಲಿ ಈ ಸಂಪ್ರದಾಯವು ಆಸಕ್ತಿದಾಯಕ ಇತಿಹಾಸವನ್ನು ಹೊಂದಿದೆ. ಆದರೆ, ಈಗ ಈ 5 ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಅಲ್ಲದೇ ಕೆಲವು ಮಹಿಳೆಯರು ಇನ್ನೂ ಈ ಸಂಪ್ರದಾಯವನ್ನು ಸ್ವತಃ ಅನುಸರಿಸುತ್ತಾರೆ. ಪ್ರತಿ ವರ್ಷ ಪಿಣಿ ಗ್ರಾಮದ ಮಹಿಳೆಯರು ಶ್ರಾವಣ ಮಾಸದಲ್ಲಿ 5 ದಿನ ಬಟ್ಟೆ ಧರಿಸುವುದಿಲ್ಲ. ಒಂದು ವೇಳೆ ಮಹಿಳೆಯರು ಈ ಸಂಪ್ರದಾಯವನ್ನು ಅನುಸರಿಸಿಲ್ಲವಾದರೇ ಕೆಲವು ದಿನಗಳಲ್ಲಿ ಕೆಟ್ಟ ಸುದ್ದಿಗಳು ಕೇಳಿಬರುತ್ತವೆ ಎಂಬ ನಂಬಿಕೆ.. ಅಲ್ಲದೇ ಆ ದಿನಗಳಲ್ಲಿ ಇಡೀ ಹಳ್ಳಿಯ ಗಂಡ-ಹೆಂಡತಿ ಪರಸ್ಪರ ಮಾತನಾಡುವಂತಿಲ್ಲ.. ಪುರುಷರ ಸಂಪ್ರದಾಯ: ಪುರುಷರು ಈ ಸಂಪ್ರದಾಯವನ್ನು ಅನುಸರಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸಂಪ್ರದಾಯದ ನಿಯಮಗಳು ಪುರುಷರಿಗೆ ಸ್ವಲ್ಪ ವಿಭಿನ್ನವಾಗಿವೆ. ಶ್ರಾವಣದ ಐದು ದಿನಗಳಲ್ಲಿ ಪುರುಷರು ಮದ್ಯ ಮತ್ತು ಮಾಂಸ ತಿನ್ನುವಂತಿಲ್ಲ. ಇದನ್ನು ಪಾಲಿಸದಿದ್ದರೆ ದೇವರು ಕೋಪಗೊಂಡು ಸ್ವಲ್ಪ ತೊಂದರೆ ಕೊಡುತ್ತಾನೆ ಎಂಬ ನಂಬಿಕೆ ಇದೆ. ಸಂಪ್ರದಾಯದ ಹಿಂದಿನ ರಹಸ್ಯ: ಈ ಸಂಪ್ರದಾಯವನ್ನು ಅನುಸರಿಸುವುದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಕೆಲ ಸಮಯದ ಹಿಂದೆ ಪಿನಿ ಗ್ರಾಮದಲ್ಲಿ ದೆವ್ವಗಳು ಓಡಾಡುತ್ತಿದ್ದವು. ಆ ರಾಕ್ಷಸ ಹಳ್ಳಿಯ ಹೆಂಗಸರ ಬಟ್ಟೆಗಳನ್ನು ಹರಿದು ಹಾಕುತ್ತಿತ್ತು. ಗ್ರಾಮಸ್ಥರನ್ನು ಕಾಪಾಡಲು 'ಲಹುವಾ ಘೋಂಡ್' ದೇವಿಯು ಗ್ರಾಮಕ್ಕೆ ಬಂದಳು. ಈ ದೇವಿಯು ರಾಕ್ಷಸರನ್ನು ಕೊಂದು ಜನರನ್ನು ರಕ್ಷಿಸಿದಳು. ಈ ಘಟನೆ ಚೈತ್ರ ಮಾಸದ ಮೊದಲ ದಿನ ನಡೆದಿರುವುದಾಗಿದೆ.. ಇದನ್ನೂ ಓದಿ- ಅಂದಿನಿಂದ ಶ್ರಾವಣ ಮಾಸದಲ್ಲಿ 5 ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸಬಾರದು ಎಂಬ ಸಂಪ್ರದಾಯ ನಡೆದುಕೊಂಡು ಬಂದಿದೆ. ಬಟ್ಟೆಯಲ್ಲಿ ಸುಂದರವಾಗಿ ಕಂಡರೆ ಅವರನ್ನು ರಾಕ್ಷಸ ಕರೆದುಕೊಂಡು ಹೋಗುತ್ತಾರೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಸಂಪ್ರದಾಯವನ್ನು ರಚಿಸಲಾಗಿದೆ. ಶ್ರವಣ ಮಾಸದ ಈ ಐದು ದಿನಗಳಲ್ಲಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ನೋಡಿ ನಗುವಂತಿಲ್ಲ. ಈ ಸಮಯದಲ್ಲಿ ಮಹಿಳೆಯರಿಗೆ ಒಂದೇ ಉಡುಪನ್ನು ಧರಿಸಲು ಅವಕಾಶವಿದೆ. ಈ ಸಂಪ್ರದಾಯವನ್ನು ಅನುಸರಿಸುವ ಪಿಣಿ ಗ್ರಾಮದ ಮಹಿಳೆಯರು ಉಣ್ಣೆಯಿಂದ ಮಾಡಿದ ಬಟ್ಟೆಗಳನ್ನು ಬಳಸಬಹುದು. ಇದೇ ವೇಳೆ ಪಿಣಿ ಗ್ರಾಮದ ಜನರು ಹೊರಗಿನವರನ್ನು ಗ್ರಾಮಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೆ ಹೊರಗಿನವರು ಅವರ ವಿಶೇಷ ಹಬ್ಬದ ಭಾಗವಾಗಿರುವಂತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...