ಮುಂಬೈನಲ್ಲಿ ವರುಣಾರ್ಭಟ... ಬಿರುಗಾಳಿ ಸಹಿತ ಮಳೆಯಿಂದ ವಿಮಾನ ಸಂಚಾರ ಸ್ಥಗಿತ ಮೆಟ್ರೊ, ಸ್ಥಳೀಯ ರೈಲು ಕೂಡ ಬಂದ್! : ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂಬೈ (ಮಹಾರಾಷ್ಟ್ರ):ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ಹವಾಮಾನ ಹಠಾತ್ ಬದಲಾಗಿದ್ದು, ಧೂಳಿನಿಂದ ಕೂಡಿದ ಬಿರಗಾಳಿ ಜೊತೆ ಮಳೆಯೂ ಪ್ರಾರಂಭವಾಯಿತು. ಬಲವಾದ ಬಿರುಗಾಳಿಯಿಂದಾಗಿ ಹಗಲಿನಲ್ಲಿಯೂ ಎಲ್ಲೆಲ್ಲೂ ಕತ್ತಲೆ ಆವರಿಸಿತ್ತು. ಜೋರಾದ ಗಾಳಿಯಿಂದಾಗಿ ಎಲ್ಲೆಂದರಲ್ಲಿ ಧೂಳು ಹಾರಾಡುತ್ತಿರುವುದು ಕಂಡುಬಂತು. ಬಲವಾದ ಚಂಡಮಾರುತ ಮತ್ತು ಮಳೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಸಹ ಪರಿಣಾಮ ಬೀರಿದೆ. ಮುಂದಿನ ಸೂಚನೆ ಬರುವವರೆಗೂ ವಿಮಾನದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. . — (@) ಮುಂದಿನ 3-4 ಗಂಟೆಗಳಲ್ಲಿ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಿಂಚು ಮತ್ತು ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಎಚ್ಚರಿಕೆ ನೀಡಿದೆ. ಹೊರಗೆ ಹೋಗುವಾಗ ಜಾಗರೂಕರಾಗಿರಿ ಎಂದು ಹೇಳಿದೆ. ಮೇ 10 ರಿಂದ ಮುಂಬೈನಲ್ಲಿ ಗುಡುಗು ಸಹಿತ ಸಾಧಾರಣ ಅಥವಾ ಭಾರೀ ಮಳೆಯಾಗಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು. ಇದನ್ನೂ ಓದಿ: ಮುಂಬೈ, ಪಾಲ್ಘರ್, ಥಾಣೆ, ನವಿ ಮುಂಬೈ ಮತ್ತು ಇತರ ಭಾಗಗಳಲ್ಲಿ ಗುಡುಗು ಸಿಡಿಲು ಗಾಳಿಯ ಜೊತೆ ಮಳೆಯಾಗಲಿದೆ. ವಿರುದ್ಧ ದಿಕ್ಕುಗಳಿಂದ (ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ) ಗಾಳಿ ಬೀಸುತ್ತಿದೆ. ಇದೇ ಬಿರುಗಾಳಿಗೆ ಕಾರಣವಾಗುತ್ತಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಚಂಡಮಾರುತ ಶಾಂತವಾಗಲಿದೆ. ಮೆಟ್ರೊ ಮತ್ತು ಸ್ಥಳೀಯ ರೈಲು ಸಂಚಾರವೂ ಸ್ಥಗಿತ ಮುಂಬೈನಲ್ಲಿ ಹದಗೆಟ್ಟ ಹವಾಮಾನದಿಂದಾಗಿ ಮೆಟ್ರೋ ಮತ್ತು ಸ್ಥಳೀಯ ರೈಲು ಸೇವೆಗಳು ಸಹ ಅಸ್ತವ್ಯಸ್ತಗೊಂಡಿವೆ. ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲು ವಕ್ತಾರರು ತಿಳಿಸಿದ್ದಾರೆ. . .. , " " ... 2020😂 — मुंबई ™ (@) ಕೇಂದ್ರ ರೈಲ್ವೇಯಲ್ಲಿ ಉಪನಗರ ಸೇವೆಗಳು ಸ್ಥಗಿತ ಬಲವಾದ ಗಾಳಿಯಿಂದಾಗಿ ಥಾಣೆ ಮತ್ತು ಮುಲುಂಡ್ ನಿಲ್ದಾಣಗಳ ನಡುವೆ ಓವರ್ಹೆಡ್ ಉಪಕರಣದ ಕಂಬವು ವಾಲಿದ ನಂತರ ಕೇಂದ್ರ ರೈಲ್ವೆಯ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಬ್ಯಾನರ್ ಕುಸಿದು ಬೀಳುವ ವಿಡಿಯೋ ವೈರಲ್‌ ಮುಂಬೈನಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಜೋರಾದ ಗಾಳಿಯಿಂದಾಗಿ ನಗರದ ಹಲವೆಡೆ ಮರಗಳು, ಬ್ಯಾನರ್‌ಗಳು ನೆಲಕ್ಕುರುಳಿವೆ. ಆ ಮೂಲಕ ಮುಂಬೈನ ಹಟ್ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಬಳಿಯಿದ್ದ ಬೃಹತ್ ಬ್ಯಾನರ್ ಗಾಳಿಯ ರಭಸಕ್ಕೆ ಹಾರಿಹೋಗಿದೆ. , , . . . . — (@) ಬ್ಯಾನರ್ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೆಟ್ರೋಲ್ ಬಂಕ್ ಮುಂಭಾಗದ ಬೃಹತ್ ಬ್ಯಾನರ್ ಪೆಟ್ರೋಲ್ ತುಂಬಿಸುವ ಜಾಗಕ್ಕೆ ಹಿಮ್ಮುಖವಾಗಿ ವಾಲಿರುವುದು ಕಂಡು ಬಂತು. ಬ್ಯಾನರ್‌ನ ಹಿಂದಿನ ಕಬ್ಬಿಣದ ಚೌಕಟ್ಟು ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಕೆಲವು ಕಾರುಗಳ ಮೇಲೆ ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದನ್ನೂ ಓದಿ: ವರದಿಗಳ ಪ್ರಕಾರ, ಸುಮಾರು 100 ಜನರು ಬೃಹತ್ ಬ್ಯಾನರ್ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಲ್ಲದೆ, ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 59 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳದಲ್ಲಿದ್ದು, ಬೃಹತ್ ಬ್ಯಾನರ್‌ಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...