ಸಮುದ್ರದ ಮಧ್ಯೆ ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ : ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ತಮಿಳುನಾಡಿನ ನಾಗಪಟ್ಟಣಂನ ಮೀನುಗಾರರ ಗುಂಪೊಂದರ ಮೇಲೆ ಮಂಗಳವಾರ ಸಮುದ್ರದ ಮಧ್ಯದಲ್ಲಿ ಶ್ರೀಲಂಕಾ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ನಡೆಸಿದೆ. ದಾಳಿಯಲ್ಲಿ ತಮಿಳುನಾಡಿನ ನಾಗಪಟ್ಟಣಂನ ಗುಂಪಿನ ಮೀನುಗಾರ ಮುರುಗನ್ ಗಾಯಗೊಂಡಿದ್ದು, ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ : ನಾಗಪಟ್ಟಣಂ ಕರಾವಳಿಯಿಂದ 15 ನಾಟಿಕಲ್ ಮೈಲುಗಳ ಅಂತರದಲ್ಲಿ ಭಾರತೀಯ ಸಮುದ್ರದ ಗಡಿಯ ಸಮೀಪದಲ್ಲಿ ಈ ದಾಳಿ ನಡೆದಿದೆ. ಕಡಲ್ಗಳ್ಳರು ದೋಣಿಯಿಂದ ವಾಕಿ-ಟಾಕಿ ಮತ್ತು ಜಿಪಿಎಸ್ ಅನ್ನು ದರೋಡೆ ಮಾಡಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಕಡಲ್ಗಳ್ಳರು ಶ್ರೀಲಂಕಾದವರು ಎಂದು ನಾಗಪಟ್ಟಣಂ ಮೀನುಗಾರರ ಸಂಘದ ಮುಖಂಡ ಆರ್.ಆಂಟನಿ ಜಾನ್ಸನ್ ಹೇಳಿದ್ದು, "ನಮ್ಮನ್ನು ಸಮುದ್ರದ ಮಧ್ಯದಲ್ಲಿ ನಿಯಮಿತವಾಗಿ ಬೇಟೆಯಾಡಲಾಗುತ್ತಿದೆ ಮತ್ತು ದಾಳಿ ಮಾಡಲಾಗುತ್ತಿದೆ. ಕಡಲ್ಗಳ್ಳರ ದಾಳಿಯಾಗಲಿ ಅಥವಾ ಶ್ರೀಲಂಕಾ ನೌಕಾಪಡೆಯಿಂದ ಯಾಂತ್ರೀಕೃತ ದೋಣಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆಯಾಗಲಿ, ಮೀನುಗಾರರ ಮೇಲೆ ಯಾವಾಗಲೂ ದಾಳಿ ಮಾಡಲಾಗುತ್ತಿರುತ್ತದೆ. ಕೇಂದ್ರ ಸರ್ಕಾರವು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಗೆ ಪರಿಹಾರವನ್ನು ತರಬೇಕು ಎಂದು ಜಾನ್ಸನ್ ಹೇಲಿದ್ದಾರೆ. ಅನೇಕ ಮೀನುಗಾರರು ಸಮುದ್ರಕ್ಕೆ ಇಳಿಯಲು ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದು ಮತ್ತು ಕುಟುಂಬಗಳು ಸಹ ನಿಯಮಿತ ದಾಳಿಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಜಾನ್ಸನ್ ಹೇಳಿದರು. ಇದನ್ನು ಓದಿ : ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ನಾಗಪಟ್ಟಣಂನ ಮೀನುಗಾರರು ಇತ್ತೀಚಿನ ದಿನಗಳಲ್ಲಿ ಸಮುದ್ರಕ್ಕೆ ಇಳಿಯಲು ಹಿಂಜರಿಯುತ್ತಿದ್ದಾರೆ ತಿಳಿದು ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...