ದೇವಸ್ಥಾನದಲ್ಲಿ ಏಕಾಏಕಿ ಬಟ್ಟೆ ಬಿಚ್ಚಿ ಬೆತ್ತಲಾದ ಯುವತಿ.. ಬೆಚ್ಚಿಬಿದ್ದ ಭಕ್ತರು! : ಬಾಲಿ ದೇವಸ್ಥಾನದಲ್ಲಿ ಜರ್ಮನಿಯ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸುತ್ತ ಇದ್ದಕ್ಕಿದ್ದಂತೆ ಬಟ್ಟೆ ಕಳಚಿದ್ದಾರೆ. ಈ ಬೆಳವಣಿಗೆಯಿಂದ ದೇವಸ್ಥಾನದ ಆವರಣದಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. :ಇಂಡೋನೇಷ್ಯಾದ ಬಾಲಿಯಲ್ಲಿ ಜರ್ಮನಿಯ ಮಹಿಳೆಯೊಬ್ಬರು ಏಕಾಏಕಿ ಬಟ್ಟೆ ಬಿಚ್ಚಿದಾಗ ಸಂಚಲನ ಉಂಟಾಯಿತು. ಈ ಘಟನೆಯ ವೇಳೆ ಸಾಕಷ್ಟು ಮಂದಿ ಅಲ್ಲಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಬಾಲಿಯ ಈ ದೇವಾಲಯದಲ್ಲಿ ಬೆತ್ತಲೆಯಾದ ನಂತರ, ಜರ್ಮನ್ ಹುಡುಗಿ ವಿಚಿತ್ರವಾಗಿ ವರ್ತಿಸಿ ಗಲಾಟೆಯನ್ನು ಸೃಷ್ಟಿಸಿದರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಟ್ಟೆ ಬಿಚ್ಚಿದ ಬಳಿಕ ಮಹಿಳೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ದೇವಸ್ಥಾನದಲ್ಲಿದ್ದ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾಳೆ. ದೇವಸ್ಥಾನದ ಆಡಳಿತ ಮಂಡಳಿ ತುರ್ತು ಸೇವೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳೆಯನ್ನು ನಿಭಾಯಿಸಿ ವೇಳೆ ಹೇಗೋ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಪವಿತ್ರ ಸ್ಥಳದಲ್ಲಿ ಗಲಾಟೆ : 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಪ್ರಕಾರ, 28 ವರ್ಷದ ಈ ಜರ್ಮನ್ ಯುವತಿಯ ಹೆಸರು ದರ್ಜಾ. ಅವರ ಹೋಟೆಲ್ ಬಿಲ್ ಅನ್ನು ಯಾರು ಪಾವತಿಸಲಿಲ್ಲ. ಅನುಚಿತವಾಗಿ ವರ್ತಿಸುವ ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಇಂಡೋನೇಷ್ಯಾ ಕಠಿಣ ಕ್ರಮ ಕೈಗೊಳ್ಳುತ್ತಿರುವಾಗ ಈ ವಿಷಯವು ಮುನ್ನೆಲೆಗೆ ಬಂದಿದೆ. ದೇವಸ್ಥಾನದಲ್ಲಿ ಏಕಾಏಕಿ ನಗ್ನಳಾದ ಮೇಲೆ ಅಲ್ಲಿದ್ದವರಿಗೆ ಆಕೆ ಯಾಕೆ ಹೀಗೆ ಮಾಡಿದಳು ಎಂದು ಅರ್ಥವಾಗಲಿಲ್ಲ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಲಿ ದೇವಸ್ಥಾನದಲ್ಲಿ ಬೆತ್ತಲೆಯಾಗಿ ಮತ್ತು ಪವಿತ್ರ ಸ್ಥಳದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಈ ಜರ್ಮನ್ ಪ್ರವಾಸಿಗರನ್ನು ಬಂಧಿಸಿದರು. ಇದನ್ನೂ ಓದಿ: ಮಾನಸಿಕ ಆಸ್ಪತ್ರೆಗೆ ದಾಖಲು : ಪೊಲೀಸರ ವಿಚಾರಣೆಯಲ್ಲಿ ಆಕೆ ಮಾನಸಿಕ ಸ್ಥಿತಿ ಸರಿಯಿಲ್ಲ. ಅದರ ನಂತರ ಇಂಡೋನೇಷ್ಯಾದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೋಟೋಕಾಲ್ ಅನ್ನು ಅನುಸರಿಸಿ, ಅವರನ್ನು ಚಿಕಿತ್ಸೆಗಾಗಿ ಮಾನಸಿಕ ಆಸ್ಪತ್ರೆಗೆ ಕಳುಹಿಸಿದರು. ಆಕೆ ತಂಗಿದ್ದ ಹೋಟೆಲ್‌ನಲ್ಲಿ ಬಟ್ಟೆ ಇಲ್ಲದೆ ತಿರುಗಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವಕ್ತಾರ ಸ್ಟೀಫನ್ ಪ್ರಕಾರ, ಜರ್ಮನ್ ಮಹಿಳೆ ಕೋಪಗೊಂಡಿದ್ದಳು ಮತ್ತು ದುಃಖದ ಸ್ಥಿತಿಯಲ್ಲಿದ್ದಳು. ಇನ್ನು ಕೆಲವು ದಿನ ಇಲ್ಲೇ ಇರಲು ಬಯಸುತ್ತಿರುವಾಗಲೇ ಮನೆಯಿಂದ ತಂದಿದ್ದ ಹಣವೆಲ್ಲ ಮುಗಿದಿದೆ ಎಂದು ಹೇಳಿದಳು. ನಗ್ನ ವಿಡಿಯೋ ವೈರಲ್ : ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜರ್ಮನ್ ಹುಡುಗಿಯೊಬ್ಬಳು ದೇವಾಲಯದಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾಳೆ. ಮೊದಲು ಆಕೆ ಅಂತಹ ಸ್ಥಿತಿಯಲ್ಲಿ ದೇವಸ್ಥಾನದ ಒಳಗೆ ಹೋಗಲು ಪ್ರಯತ್ನಿಸಿದಳು, ಸಿಬ್ಬಂದಿ ಅವಳನ್ನು ತಡೆದಾಗ, ಅವಳು ಜಗಳವಾಡಿದಳು ಮತ್ತು ಹೊರ ಭಾಗಕ್ಕೆ ಹೋಗಿ ಅಲ್ಲಿ ಗಲಾಟೆ ಮಾಡಲು ಪ್ರಾರಂಭಿಸಿದಳು. ಇದನ್ನೂ ಓದಿ: ದೇವಾಲಯದ ಶುದ್ಧೀಕರಣ : ಈ ಘಟನೆಯ ನಂತರ ಅರ್ಚಕರು ದೇವಾಲಯವನ್ನು ಶುದ್ಧೀಕರಿಸಿದರು. ಇಂಡೋನೇಷ್ಯಾದ ವಿದೇಶಾಂಗ ಇಲಾಖೆಯ ಪ್ರಕಾರ, ಬಾಲಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಪ್ರಕರಣಗಳು ಸ್ವಲ್ಪ ಸಮಯದದಿಂದ ಹೆಚ್ಚಾಗಿದೆ. ಕುಡಿದ ಮತ್ತಿನಲ್ಲಿ ಗಲಾಟೆ ಸೃಷ್ಟಿಸಿದ ಅಥವಾ ಧಾರ್ಮಿಕ ಸ್ಥಳಗಳ ಘನತೆಯೊಂದಿಗೆ ಆಟವಾಡಿದ ಅಥವಾ ಅಶ್ಲೀಲತೆಯನ್ನು ಹರಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರನ್ನು ದೇಶದಿಂದ ಹೊರಹಾಕಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...