ನಮಾಜ್ ಮಾಡುವಾಗ ಸಿಗುವ ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಅಂದು 8.4 ಕೋಟಿ ಬೆಲೆಗೆ ಖರೀದಿಸಿದ್ದ ಆ ಸ್ಟಾರ್‌ ಆಟಗಾರನ ಹೇಳಿಕೆ ವೈರಲ್‌ ಸದ್ಯ ಯುಪಿ ಟಿ20 ಲೀಗ್ ನಲ್ಲಿ ಆಡುತ್ತಿರುವ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪ್ರತಿನಿತ್ಯ ನಮಾಜ್ ಮಾಡುವ ಧಾರ್ಮಿಕ ವ್ಯಕ್ತಿ ನಾನು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ" ಎಂದು ಹೇಳಿದರು. :ಕಳೆದ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಬಲಗೈ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ₹8.4 ಕೋಟಿಗೆ ಭಾರಿ ಬೆಲೆಗೆ ಖರೀದಿಸಿತ್ತು. ಆಗ ಸಾಕಷ್ಟು ಸುದ್ದಿ ಮಾಡಿದ್ದ ರಿಜ್ವಿ ಮತ್ತೊಮ್ಮೆ ತಮ್ಮ ಮಾತಿನ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಸದ್ಯ ಯುಪಿ ಟಿ20 ಲೀಗ್ ನಲ್ಲಿ ಆಡುತ್ತಿರುವ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪ್ರತಿನಿತ್ಯ ನಮಾಜ್ ಮಾಡುವ ಧಾರ್ಮಿಕ ವ್ಯಕ್ತಿ ನಾನು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ" ಎಂದು ಹೇಳಿದರು. ಇದೇ ಸಮಯದಲ್ಲಿ ಅವರು ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರನ್ನು ಬಹಿರಂಗಪಡಿಸಿದ್ದು, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಒತ್ತಡದ ಸಂದರ್ಭದಲ್ಲೂ ಶಾಂತವಾಗಿರುವುದನ್ನು ಧೋನಿ ಕಲಿಸಿದ್ದಾರೆ ಎಂದು ಸಮೀರ್ ರಿಜ್ವಿ ಹೇಳಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ರಿಜ್ವಿ ಮಾತನಾಡಿದ್ದು, "ಹಿರಿಯ ಕ್ರಿಕೆಟಿಗರಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಎಲ್ಲರೊಂದಿಗೆ ಬೆರೆಯುತ್ತಾರೆ, ಅದು ನನಗೆ ತುಂಬಾ ಇಷ್ಟ. ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಮ್ಮನ್ನು ಸ್ವಾಗತಿಸಿದ ರೀತಿ ಅದ್ಭುತ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...