ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆ ಇತ್ತೀಚೆಗೆಯಷ್ಟೇ ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. :ಇತ್ತೀಚೆಗೆಯಷ್ಟೇ ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾವು ಕೆಲವು ಬಾರಿ ದೊಡ್ಡ ಟ್ರೋಫಿಯ ಸಮೀಪಕ್ಕೆ ಬರುತ್ತಿದ್ದೆವು. T20 ವಿಶ್ವಕಪ್‌ ಸೆಮಿಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌, ವಿಶ್ವಕಪ್‌ ಫೈನಲ್‌... ಆದರೆ ನಮ್ಮಿಂದ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು. ಇದನ್ನೂ ಓದಿ: ಮಾತು ಮುಂದುವರೆಸಿದ ಅವರು, "ಆದರೆ, ಟಿ20 ವಿಶ್ವಕಪ್ ಗೆದ್ದ ನಂತರ ನನ್ನ ತಂಡ ಮತ್ತು ಕಳೆದ ಎರಡೂವರೆ ವರ್ಷಗಳಿಂದ ಶ್ರಮಿಸಿದ ಪ್ರತಿಯೊಬ್ಬರಿಗೂ ತುಂಬಾ ಸಂತಸವಾಗಿತ್ತು. ಅದಕ್ಕೇ ನಾನು ಹಾಗೆ ಸಂಭ್ರಮಿಸುತ್ತಿದ್ದೆ. ಒಟ್ಟಿನಲ್ಲಿ ಸಮಾಧಾನ ಮತ್ತು ಸಂತಸ ಹೊರಬರುತ್ತಿತ್ತು"ಎಂದು ಹೇಳಿದ್ದಾರೆ. ರಾಹುಲ್ ದ್ರಾವಿಡ್ ನವೆಂಬರ್ 2021 ರಲ್ಲಿ ಟೀಂ ಇಂಡಿಯಾದ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದರು. ಇನ್ನು ಈ ಸಂದರ್ಶನದಲ್ಲಿ, ಭಾರತ ತಂಡದ ಕೋಚ್ ಆಗಿದ್ದಾಗ ದ್ರಾವಿಡ್ ಅವರಿಗೆ ಅತ್ಯಂತ ಕಷ್ಟಕರವಾದ ಸಮಯ ಯಾವುದು ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, 'ದಕ್ಷಿಣ ಆಫ್ರಿಕಾ ಪ್ರವಾಸವು ನಮಗೆ ತುಂಬಾ ಕಷ್ಟಕರ ಪ್ರವಾಸವಾಗಿತ್ತು. ಸೆಂಚುರಿಯನ್ ಪ್ರವಾಸದಲ್ಲಿ ನಾವು ಮೊದಲ ಟೆಸ್ಟ್ ಗೆದ್ದಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿತ್ತು. ಇದು ನಮಗೆ ದೊಡ್ಡ ಅವಕಾಶವಾಗಿತ್ತು. ಆದರೆ, ಒಂದು ವಿಷಯವೆಂದರೆ ಆಗ ನಮ್ಮ ತಂಡದಲ್ಲಿ ಅನೇಕ ಹಿರಿಯ ಆಟಗಾರರು ಇರಲಿಲ್ಲ. ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಇನ್ನು ಕೆಲವು ಹಿರಿಯ ಆಟಗಾರರೂ ತಂಡದಲ್ಲಿ ಇರಲಿಲ್ಲ" ಎಂದು ಹೇಳಿದ್ದಾರೆ. ಇದನ್ನೂ ಓದಿ: "ಉಳಿದ ಎರಡು ಟೆಸ್ಟ್ ಪಂದ್ಯಗಳು ತುಂಬಾ ಹತ್ತಿರದಲ್ಲಿವೆ. ಎರಡೂ ಟೆಸ್ಟ್ ಪಂದ್ಯಗಳ ಮೂರನೇ ಇನ್ನಿಂಗ್ಸ್‌ʼನಲ್ಲಿ ನಮಗೆ ದೊಡ್ಡ ಅವಕಾಶ ಸಿಕ್ಕಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡವು ಆಗ ಉತ್ತಮ ಆಟವನ್ನು ಪ್ರದರ್ಶಿಸಿತು. ನಾಲ್ಕನೇ ಇನ್ನಿಂಗ್ಸ್‌ʼನಲ್ಲಿ ಉತ್ತಮವಾಗಿ ಚೇಸ್ ಮಾಡಿದರು. ಭಾರತ ತಂಡದ ಕೋಚ್‌ ಆಗಿದ್ದಾಗ ಇದು ನನಗೆ ಅತ್ಯಂತ ಕಷ್ಟಕರವಾದ ದಿನಗಳು ಎಂದು ಹೇಳುತ್ತೇನೆ" ಎಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...