ಬ್ರಿಟನ್ ಸೋಲಿಸಿ ಒಲಂಪಿಕ್ಸ್ ಸೆಮಿಫೈನಲ್ ಗೆ ಲಗ್ಗೆ ಇಟ್ಟ 'ಚೆಕ್ ದೇ ಇಂಡಿಯಾ' ಪೆನಾಲ್ಟಿ ಶೂಟೌಟ್ ನಲ್ಲಿ ಬ್ರಿಟನ್ ತಂಡವನ್ನು 4-2 ಅಂತರದಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ. ನಿಗದಿತ ಸಮಯದವರೆಗೆ ಪಂದ್ಯ 1-1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ ನಡೆಯಿತು. ಇದರಲ್ಲಿ ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್, ಸುಖಜಿತ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ರಾಜ್‌ಕುಮಾರ್ ಪಾಲ್ ಗೋಲು ಗಳಿಸಿದರೆ, ಇನ್ನೊಂದೆಡೆಗೆ 2 ಗೋಲುಗಳನ್ನು ಉಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಿ.ಆರ್.ಶ್ರೀಜೇಶ್ ಪೆನಾಲ್ಟಿ ಶೂಟೌಟ್ ನ ಹೀರೋ ಎನಿಸಿಕೊಂಡರು. ಪ್ಯಾರಿಸ್:ಭಾರತ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಸೆಮಿಫೈನಲ್ ತಲುಪಿದೆ. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಭಾರತವು ಪೆನಾಲ್ಟಿ ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ಅನ್ನು 4-2 ಗೋಲುಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸಿತು. ಪಂದ್ಯದ ವೇಳೆ ಎರಡೂ ತಂಡಗಳು 1-1 ಗೋಲು ಗಳಿಸಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಇದಾದ ಬಳಿಕ ಉಸಿರುಗಟ್ಟಿಸುವ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅದ್ಭುತ ಪ್ರದರ್ಶನ ನೀಡಿ ಬ್ರಿಟನ್‌ನ ಎರಡು ಗೋಲುಗಳನ್ನು ತಡೆದರು ಮತ್ತು ಮತ್ತೊಂದೆಡೆ ಹರ್ಮನ್‌ಪ್ರೀತ್ ಜೊತೆಯಲ್ಲಿ ಭಾರತದ ನಾಲ್ವರು ಆಟಗಾರರು ಸತತ ಗೋಲು ಗಳಿಸಿ ಗೆಲುವಿನ ಹಾದಿ ಹಿಡಿದರು. 𝙃𝙐𝙈 𝙅𝙀𝙀𝙏 𝙂𝘼𝙔𝙀 𝙃𝘼𝙄 𝙋𝙍𝘼𝘽𝙃𝙐𝙐𝙐 🥹🥹🥹 -, & 📲 — (@) ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಗೆದ್ದಿದ್ದು ಹೀಗೆ..! ಪೆನಾಲ್ಟಿ ಶೂಟೌಟ್ ನಲ್ಲಿ ಬ್ರಿಟನ್ ತಂಡವನ್ನು 4-2 ಅಂತರದಿಂದ ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ ಪ್ರವೇಶಿಸಿದೆ. ನಿಗದಿತ ಸಮಯದವರೆಗೆ ಪಂದ್ಯ 1-1 ರಲ್ಲಿ ಸಮಬಲಗೊಂಡ ನಂತರ ಪೆನಾಲ್ಟಿ ಶೂಟೌಟ್ ನಡೆಯಿತು. ಇದರಲ್ಲಿ ಭಾರತ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್, ಸುಖಜಿತ್ ಸಿಂಗ್, ಲಲಿತ್ ಉಪಾಧ್ಯಾಯ ಮತ್ತು ರಾಜ್‌ಕುಮಾರ್ ಪಾಲ್ ಗೋಲು ಗಳಿಸಿದರೆ, ಇನ್ನೊಂದೆಡೆಗೆ 2 ಗೋಲುಗಳನ್ನು ಉಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಿ.ಆರ್.ಶ್ರೀಜೇಶ್ ಪೆನಾಲ್ಟಿ ಶೂಟೌಟ್ ನ ಹೀರೋ ಎನಿಸಿಕೊಂಡರು. ! 💪 4-2 - 🤯 ’- . 🏑 1-1 … — (@Media_SAI) ಈ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 10 ಆಟಗಾರರೊಂದಿಗೆ 42 ನಿಮಿಷಗಳ ಕಾಲ ಆಡಿತು, ಏಕೆಂದರೆ ಅಮಿತ್ ರೋಹಿದಾಸ್‌ಗೆ ರೆಡ್ ಕಾರ್ಡ್ ನೀಡಲಾಯಿತು. ಬ್ರಿಟನ್‌ನ ಪ್ರತಿ ದಾಳಿಯನ್ನು ಸಮರ್ಥಿಸಿಕೊಂಡ ಮತ್ತು ಮುನ್ನಡೆ ಸಾಧಿಸಲು ಅವಕಾಶ ನೀಡದ ಭಾರತದ ರಕ್ಷಣಾ ಕ್ರಮವನ್ನು ನಾವು ಪ್ರಶಂಸಿಸಲೇಬೇಕು. ಬ್ರಿಟನ್ 28 ಬಾರಿ ಭಾರತದ ಗೋಲ್ ಪೋಸ್ಟ್ ಮೇಲೆ ದಾಳಿ ನಡೆಸಿ ಒಂದೇ ಒಂದು ಯಶಸ್ಸನ್ನು ಪಡೆಯಿತು. ಶೂಟೌಟ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಅಲ್ಬೆರಿ ಮತ್ತು ಜಾಕ್ವೆಸ್ ವ್ಯಾಲೆನ್ಸ್ ಮಾತ್ರ ಗೋಲು ಗಳಿಸಿದರು. ಕಾನರ್ ವಿಲಿಯಮ್ಸನ್ ಗುರಿ ತಪ್ಪಿದರು ಮತ್ತು ಫಿಲಿಪ್ ರೋಪರ್ ಅವರ ಹೊಡೆತವನ್ನು ಶ್ರೀಜೇಶ್ ಉಳಿಸಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬ್ರಿಟನ್‌ನನ್ನು ಸೋಲಿಸುವ ಮೂಲಕ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪಿತ್ತು. ಟೋಕಿಯೊದಲ್ಲಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಶ್ರೀಜೇಶ್ ಭಾರತದ ಗೋಡೆ ಎಂದು ಸಾಬೀತುಪಡಿಸಿದ್ದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ಕಠಿಣ ಪಂದ್ಯದಲ್ಲೂ ಅವರು ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಯಶಸ್ವಿಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...