: ' ಪ್ರಧಾನಿ ಮೋದಿ ಅವರ ಚಾಯ್ ಪ್ರಭಾವ ಒಬಾಮಾ ಮೇಲಾಗಿಲ್ಲ' : ಈ ಕುರಿತು ಮಾತನಾಡಿರುವ ಒವೈಸಿ, ಯುಎಇ, ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ನಂತಹ ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಗೌರವಿಸಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ, ಸೌದಿ ಅರೇಬಿಯಾದ ರಾಷ್ಟ್ರಪತಿಗಳ ಜೊತೆಗೆ ಭಾರತ ಅಥವಾ ಅಮರಾವತಿಯ ಮುಸ್ಲಿಮರ ಯಾವುದೇ ಸಂಬಂಧವಿಲ್ಲ. ಯುಎಇ ರಾಷ್ಟ್ರಪತಿಗಳ ಜೊತೆಗೂ ಕೂಡ ಅವರು ಯಾವುದೇ ಸಂಬಂಧ ಹೊಂದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ. :ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರಿಯಾಗಿಸಿದ್ದಾರೆ. ಒಬಾಮಾ ಅವರ ಆಡಳಿತದಲ್ಲಿ 7 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದ ವಿತ್ತ ಸಚಿವರು, ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾಧನೀಯ ಎಂದಿದ್ದರು. ಆದರೆ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರ ಕುರಿತೂ ಕೂಡ ಲೇವಡಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಒವೈಸಿ, ಪ್ರ, ನಿಮ್ಮ ಚಹಾ ಬರಾಕ್ ಒಬಾಮಾ ಮೇಲೆ ಪ್ರಭಾವ ಬೀರಲಿಲ್ಲ ಎಂಬಂತೆ ತೋರುತ್ತಿದೆ ಎಂದಿದ್ದಾರೆ. ಮಹಾರಾಷ್ಟ್ರದ ಅಮರಾವತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ನಮ್ಮ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯಿಂದ ತೊಂದರೆಗೀಡಾಗಿದ್ದಾರೆ. ಒಬಾಮಾ ಆಳ್ವಿಕೆಯಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳು ಬಾಂಬ್ ದಾಳಿಗೆ ಒಳಗಾಗಿದ್ದವು ಎಂದು ಅವರು ಹೇಳುತ್ತಾರೆ. 13 ದೇಶಗಳು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ರಾಜ್ಯ ಗೌರವವನ್ನು ನೀಡಿದರೆ, ಅವುಗಳಲ್ಲಿ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾಗಿವೆ. ಇದನ್ನೂ ಓದಿ- ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಂತಹ ದೇಶಗಳು ಪ್ರಧಾನಿ ಮೋದಿ ಅವರನ್ನು ಗೌರವಿಸಿವೆ ಎಂದು ಹಣಕಾಸು ಸಚಿವರು ಹೇಳುತ್ತಾರೆ ಎಂದು ಓವೈಸಿ ಹೇಳಿದ್ದಾರೆ. ಆದರೆ ಭಾರತದ ಮುಸ್ಲಿಮರಿಗೆ ಹಾಗೂ ಅಮರಾವತಿಗೆ ಸೌದಿ ಅರೇಬಿಯಾದ ಅಧ್ಯಕ್ಷರಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಅಷ್ಟೇ ಅಲ್ಲ ಯುಎಇ ಅಧ್ಯಕ್ಷರಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಈಜಿಪ್ಟ್ ಅಧ್ಯಕ್ಷ ಸಿಸಿ ಅವರೊಂದಿಗೂ ಕೂಡ ಯಾವುದೇ ಸಂಬಂಧವಿಲ್ಲ. ನೀವು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವಿರಿ. ಯುಎಇ, ಈಜಿಪ್ಟ್, ಇರಾಕ್ ಅಥವಾ ಇರಾನ್‌ನ ನಾಯಕರು ಮತ್ತು ಮುಸ್ಲಿಮರು ಭಾರತದ 200 ಮಿಲಿಯನ್ ಮುಸ್ಲಿಮರಿಗೆ ಯಾವುದೇ ಸಂಬಂಧವಿಲ್ಲ ಎಂದು ಒವೈಸಿ ಹೇಳಿದ್ದಾರೆ. ಇದನ್ನೂ ಓದಿ- 'ಬೇರೆ ದೇಶಗಳಲ್ಲಿ ರಾಜಪ್ರಭುತ್ವವಿದೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನವಿದೆ. ನೀವು ಭಾರತದ ಮುಸ್ಲಿಮರನ್ನು ಈ ದೇಶಗಳೊಂದಿಗೆ ಜೋಡಿಸುತ್ತಿರುವಿರಿ. ನಮ್ಮ ಪೂರ್ವಜರಿಗೆ ಗಲ್ಲಿಗೆರಿಸಲಾಗಿದೆ. ಆವರಿ ಕಾಲಾ ಪಾನಿ ಶಿಕ್ಷೆಯನ್ನು ಅನುಭವಿಸಿದರು, ಬ್ರಿಟಿಷರೊಂದಿಗೆ ಹೋರಾಡಿದರು. ಓವೈಸಿ ನೀವು ಬೇರೆ ದೇಶಕ್ಕೆ ಹೋಗಬೇಕು ಎಂದು ಆರ್‌ಎಸ್‌ಎಸ್‌ನವರು ಹೇಳಿದಾಗ, 1947 ರಲ್ಲಿ ಭಾರತದ ಮುಸ್ಲಿಂ ಸಮುದಾಯವು ಇದು ನಮ್ಮ ಭೂಮಿ ಎಂದು ನಿರ್ಧರಿಸಿತ್ತು ಎಂದು ಅವರಿಗೆ ಯಾರು ವಿವರಿಸಲಿದ್ದಾರೆ. ನಾವು ಇಲ್ಲೇ ಇರುತ್ತೇವೆ. ಭಾರತದ ಸ್ಮಶಾನಗಳಲ್ಲಿ ನಿಮಗೆ ನಮ್ಮ ನಿಷ್ಠ ಕಾಣಲಿದೆ ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...