ಬಿಪಿ ಮತ್ತು ಮಧುಮೇಹ ರೋಗಿಗಳು ಶಾಶ್ವತವಾಗಿ ದೂರವಿರಬೇಕು ಈ ಆಹಾರಗಳಿಂದ ! ತಪ್ಪಿದರೆ ಎಲ್ಲಾ ಪ್ರಯತ್ನಗಳೂ ವ್ಯರ್ಥ ಆಹಾರ ಪದ್ಧತಿಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸುವ ಕೆಲವು ನೀತಿ ನಿಯಮಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಬೆಂಗಳೂರು :ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳು ಯಾವುದೇ ಆಹಾರ ಸೇವಿಸುವುದಕ್ಕೂ ಮೊದಲು ಬಹಳ ಯೋಚಿಸಬೇಕಾಗುತ್ತದೆ. ಯಾಕೆಂದರೆ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಅವರ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ.ಆಹಾರ ಪದ್ಧತಿಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸುವ ಕೆಲವು ನೀತಿ ನಿಯಮಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಬಿಳಿ ಬ್ರೆಡ್ :ಅನ್ನು ಮೈದಾದಿಂದ ತಯಾರಿಸಲಾಗುತ್ತದೆ.ಬಿಳಿ ಬ್ರೆಡ್ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಅಂದರೆ,ಇದು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.ಈ ಕಾರಣದಿಂದಾಗಿ,ಇದು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.ಫೈಬರ್ ಕೊರತೆಯಿರುವ ಆಹಾರಗಳ ಅತಿಯಾದ ಸೇವನೆಯು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ: ಬಿಳಿ ಅಕ್ಕಿ :ಬಿಳಿ ಅಕ್ಕಿ ಕೂಡಾ ಸಂಸ್ಕರಣಾ ಪ್ರಕ್ರಿಯೆಯ ಮೂಲಕ ಹೋಗುತ್ತದೆ.ಇದು ಪಿಷ್ಟ ಹೊಂದಿರುವ ಆಹಾರ ಪದಾರ್ಥವಾಗಿದೆ. ಹಾಗಾಗಿ ಬಿಳಿ ಅಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.ಬಿಳಿ ಅಕ್ಕಿಯ ನಿಯಮಿತ ಸೇವನೆಯು ಮಧುಮೇಹ ಟೈಪ್-2 ಅಪಾಯವನ್ನು ಹೆಚ್ಚಿಸುತ್ತದೆ.ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ.ಈ ಕಾರಣದಿಂದಾಗಿ,ತೂಕ ಕೂಡಾ ವೇಗವಾಗಿ ಹೆಚ್ಚಾಗುತ್ತದೆ.ಆದ್ದರಿಂದ,ಅಧಿಕ ರಕ್ತದೊತ್ತಡ ರೋಗಿಗಳು ಇದರ ಸೇವನೆಯಿಂದ ದೂರವಿರಬೇಕು. ಪಾಸ್ಟಾ :ಕಡಿಮೆ ಫೈಬರ್ ಅಂಶವನ್ನು ಹೊಂದಿದೆ.ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ.ಬ್ಲಡ್ ಶುಗರ್ ರೋಗಿಗಳು ಇದರ ಸೇವನೆಯನ್ನು ತಪ್ಪಿಸಬೇಕು.ಬಿಳಿ ಪಾಸ್ಟಾ ವೇಗವಾಗಿ ಜೀರ್ಣವಾಗುತ್ತದೆ.ಇದರಿಂದಾಗಿ ಇನ್ಸುಲಿನ್ ಹೆಚ್ಚಾಗುತ್ತದೆ. ಇದು ರಕ್ತದೊತ್ತಡ ರೋಗಿಗಳಿಗೆ ಮಾರಕವಾಗಬಹುದು. ಆಲೂಗಡ್ಡೆ :ಮಧುಮೇಹಿಗಳು ಆಲೂಗಡ್ಡೆಯನ್ನು ಸೇವಿಸುವಂತಿಲ್ಲ. ಆಲೂಗಡ್ಡೆ ಕೂಡಾ ಅತಿಯಾದ ಪಿಷ್ಟವನ್ನು ಹಿಂದಿರುವ ತರಕಾರಿ. ಅಧಿಕ ರಕ್ತದೊತ್ತಡ ರೋಗಿಗಳು ಆಲೂಗಡ್ಡೆ ತಿನ್ನುವುದನ್ನು ತಪ್ಪಿಸಬೇಕು.ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಸೋಡಿಯಂ ಅನ್ನು ಕೂಡಾ ಹೊಂದಿರುತ್ತದೆ.ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ : ಬಿಳಿ ಸಕ್ಕರೆ :ಸಕ್ಕರೆ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು ಬಿಳಿ ಸಕ್ಕರೆಯ ಸೇವನೆಯಿಂದ ದೂರವಿರಬೇಕು.ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಮೈದಾ :ಸಕ್ಕರೆ ಮತ್ತು ಅಧಿಕ ರಕ್ತದೊತ್ತಡ ರೋಗಿಗಳು ಮೈದಾ ಸೇವಿಸಬಾರದು. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿರುತ್ತದೆ.ಅಲ್ಲದೆ ಮೈದಾದಲ್ಲಿರುವ ಫೈಬರ್ ಕೊರತೆಯಿಂದಾಗಿ,ಅದರ ಅತಿಯಾದ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಂಸ್ಕರಿಸಿದ ಆಹಾರ :ಮೈದಾದಿಂದ ತಯಾರಿಸಿದ ಪೇಸ್ಟ್ರಿಗಳು ಮತ್ತು ಕುಕೀಗಳಂತಹ ಸಂಸ್ಕರಿಸಿದ ಆಹಾರಗಳು ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ಇದರಲ್ಲಿ ದೊಡ್ಡ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಮಧುಮೇಹಿಗಳು ಅಂತಹ ಆಹಾರವನ್ನು ಸೇವಿಸಬಾರದು. ಇದರೊಂದಿಗೆ ಅಧಿಕ ರಕ್ತದೊತ್ತಡ ಇರುವವರು ಕೂಡ ಇದರ ಸೇವನೆಯಿಂದ ದೂರವಿರಬೇಕು. ಇದನ್ನೂ ಓದಿ : ಬಿಳಿ ಉಪ್ಪು :ರಕ್ತದೊತ್ತಡ ಮತ್ತು ಸಕ್ಕರೆ ರೋಗಿಗಳು ಸಮುದ್ರದ ಉಪ್ಪನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಈ ಉಪ್ಪಿನಲ್ಲಿ ಸೋಡಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯ ಕಾಯಿಲೆಯ ಅಪಾಯ ಕೂಡಾ ಹೆಚ್ಚುತ್ತದೆ. (: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...