ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ? :ಇದು ದೇಶದ ಅತಿದೊಡ್ಡ ಬ್ಯಾಂಕ್ ಹಗರಣ. ಇಲ್ಲಿ ನಡೆದಿರುವುದು 34,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಹಗರಣ. ಈ ಹಗರಣದ ಆರೋಪಿ ಧೀರಜ್ ವಾಧವನ್ ಯಾರು? :ದೇಶದಲ್ಲಿ ಅನೇಕ ದೊಡ್ಡ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ.ಪಿಎನ್‌ಬಿ ಹಗರಣ, ಯೆಸ್ ಬ್ಯಾಂಕ್,ವಿಜಯ್ ಮಲ್ಯ ಹಗರಣಗಳಂತಹ ಹಗರಣಗಳು ದೇಶವನ್ನೇ ಬೆಚ್ಚಿಬೀಳಿಸಿದೆ.ಈ ಹಗರಣಗಳಲ್ಲಿ ಒಂದು ಹಗರಣ.34,000 ಕೋಟಿ ರೂ.ಗಳ ಈ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಡಿಎಚ್‌ಎಫ್‌ಎಲ್ ಮಾಜಿ ರ್ದೇಶಕ ಧೀರಜ್ ವಾಧವನ್ ಅವರನ್ನು ಸಿಬಿಐ ಬಂಧಿಸಿದೆ.ದೆಹಲಿಯ ವಿಶೇಷ ನ್ಯಾಯಾಲಯವು ದೇಶದ ಅತಿದೊಡ್ಡ ಬ್ಯಾಂಕ್ ಹಗರಣದ ಪ್ರಕರಣದಲ್ಲಿ ಧೀರಜ್ ವಾಧವನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ :ಆರೋಪಿ ಧೀರಜ್ ವಾಧವನ್ ವಂಚನೆ ಪ್ರಕರಣದಲ್ಲಿ ನೀರಜ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಿಂದೆ ಹಾಕಿದ್ದಾರೆ. ವಾಧವಾನ್ ಸಹೋದರರ ಮೇಲೆ 34000 ಕೋಟಿ ರೂಪಾಯಿಗಳ ಬ್ಯಾಂಕ್ ಹಗರಣದ ಆರೋಪವಿದೆ. ಹಗರಣದ ಆರೋಪಿ ನೀರಜ್ ಮೋದಿ ದೇಶಕ್ಕೆ 14,000 ಕೋಟಿ ರೂಪಾಯಿ ವಂಚಿಸಿದ್ದಾರೆ.ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ದೇಶದ ಹಲವು ಬ್ಯಾಂಕ್‌ಗಳಿಗೆ 9,900 ಕೋಟಿ ರೂ.ವಂಚಿಸಿದ್ದಾರೆ.ಇದೆಲ್ಲವನ್ನು ಬಿಟ್ಟು ಕಪಿಲ್ ಮತ್ತು ಧೀರಜ್ ವಾಧವನ್ 34,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮಾಡುವ ಮೂಲಕ ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ ಎಸಗಿದ್ದಾರೆ. ಇದನ್ನೂ ಓದಿ : ಧೀರಜ್ ವಾಧವನ್ ಯಾರು? : ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಅವರನ್ನು ಬಂಧಿಸಿದೆ. 17 ಬ್ಯಾಂಕ್‌ಗಳ ಒಕ್ಕೂಟದಿಂದ 34,000 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಸಿಬಿಐ ಡಿಎಚ್‌ಎಫ್‌ಎಲ್ ವಿರುದ್ಧ ಪ್ರಕರಣ ದಾಖಲಿಸಿತ್ತು.ಧೀರಜ್ ವಾಧವನ್ DHFLನ ಪ್ರವರ್ತಕ ಮತ್ತು ನಿರ್ದೇಶಕರಾಗಿದ್ದರು.ಅವರನ್ನು ನ ಉನ್ನತ ನಿರ್ವಹಣಾ ತಂಡದಲ್ಲಿ ಸೇರಿಸಲಾಯಿತು.ಅವರ ಸಹೋದರ ಕಪಿಲ್ ವಾಧವನ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಇಬ್ಬರೂ ಸಹೋದರರು,ಕೆಲವು ಉದ್ಯಮಿಗಳೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ. ದೇಶದ ಅತಿ ದೊಡ್ಡ ಹಗರಣವನ್ನು ಮಾಡಿರುವುದು ಹೇಗೆ? :ಡಿಎಚ್ಎಫ್‌ಎಲ್ ಹೆಸರಿನಲ್ಲಿ ಈ ಬ್ಯಾಂಕ್‌ಗಳಿಂದ 42,71 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ನಂತರ ವಾಧವನ್ ಸಹೋದರರು ಭಾರೀ ಮೊತ್ತವನ್ನು ವಂಚಿಸಿದ್ದಾರೆ. DHFLನ ಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ನಿಂದ 24595 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡು ಅದನ್ನು 66 ಕಂಪನಿಗಳು ಮತ್ತು ಅವರ ಸಹವರ್ತಿಗಳಿಗೆ ವಿತರಿಸಿದ್ದಾರೆ. ನಕಲಿ ಜನರ ಹೆಸರಿನಲ್ಲಿ 14,00 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ,2010 ಮತ್ತು 2018 ರ ನಡುವೆ, 42,871 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು, ಈ ಪೈಕಿ 34,615 ಕೋಟಿ ರೂ.ವಂಚಿಸಲಾಗಿದೆ. 2019 ರಲ್ಲಿ,ಈ ಸಾಲವನ್ನು ಎನ್‌ಪಿಎ ಎಂದು 2020ರಲ್ಲಿ ಇದನ್ನು ವಂಚನೆ ಎಂದು ಘೋಷಿಸಲಾಯಿತು.2019 ರಲ್ಲಿ, ಫಂಡ್ ಡೈವರ್ಶನ್ ಬಗ್ಗೆ ಆರೋಪಗಳು ಕೇಳಿ ಬಂದವು. ಇದಾದ ನಂತರ ಧೀರಜ್ ಮತ್ತು ಕಪಿಲ್ ವಾಧವನ್ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಮೂಲಕ ಇವರಿಬ್ಬರ ಮೋಸದ ಜಾಲವನ್ನು ಬಹಿರಂಗಪಡಿಸಲಾಯಿತು. ಇದನ್ನೂ ಓದಿ : ಕಂಪನಿ ಷೇರು ಮಾರುಕಟ್ಟೆ ಪಟ್ಟಿಯಿಂದ ಹೊರಕ್ಕೆ :ಹಗರಣ ಬಯಲಾದ ನಂತರ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದವು. ಡೀಫಾಲ್ಟ್ ಸುದ್ದಿಯ ನಡುವೆ,ಕಂಪನಿಯ ಷೇರುಗಳು ಒಂದು ದಿನದಲ್ಲಿ 60 ಪ್ರತಿಶತದಷ್ಟು ಕುಸಿದವು.ಷೇರುಗಳು ಎಷ್ಟು ಕುಸಿದವು ಎಂದರೆ ಜೂನ್ 2021 ರಲ್ಲಿ, ಅನ್ನು ಷೇರು ಮಾರುಕಟ್ಟೆ ಪಟ್ಟಿಯಿಂದಲೇ ತೆಗೆದುಹಾಕಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...