ಪ್ರತಿದಿನ 10 ಸೆಕೆಂಡ್‌ ಶಂಖ ಊದಿದ್ರೆ ಸಾಕು.. ನಿಮ್ಮ ಜೀವನದಲ್ಲಿ ಅದ್ಭುತಗಳು ಜರುಗುತ್ತವೆ..! : ಹಿಂದೂ ಧರ್ಮದಲ್ಲಿ, ಶಂಖವು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ಆಚರಣೆಗಳು ಮತ್ತು ಪೂಜೆಯ ವೇಳೆ ಶಂಖವನ್ನು ಊದಲಾಗುತ್ತದೆ. ಅದರಿಂದ ಬರುವ ಶಬ್ದವು ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.. ಹಾಗಿದ್ರೆ ಪ್ರತಿದಿನ 10 ಸೆಕೆಂಡ್‌ ಶಂಖ ಊದಿದ್ರೆ ಜೀವನದಲ್ಲಿ ಏನಾಗುತ್ತದೆ..? ಬನ್ನಿ ತಿಳಿಯೋಣ.. :ಹಿಂದೂ ಸಂಪ್ರದಾಯದಲ್ಲಿ ಅನೇಕ ಜನರು ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ. ವಿಶೇಷವಾಗಿ ಪೂಜೆಯಲ್ಲಿ ಗಂಟೆ ಬಾರಿಸುವುದು ಮತ್ತು ಶಂಖವನ್ನು ಊದುವುದು ವಾಡಿಕೆ. ಪೂಜೆ ಮಾಡುವಾಗ ಶಂಖ ಊದುವುದು ತುಂಬಾ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.. ಅಲ್ಲದೆ, ಪ್ರತಿದಿನ ಕೇವಲ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳಿವೆ.. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.. ಶಂಖ ಊದುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅದೊಂದು ವಿದ್ಯೆ. ಮೊದಲು ಪೂರ್ಣ ಉಸಿರನ್ನು ತೆಗೆದುಕೊಂಡು ನಂತರ ಶಂಖದ ಚಿಕ್ಕ ರಂದ್ರಕ್ಕೆ ಬಾಯಿಯಿಟ್ಟು ಬಲವಾಗಿ ಊದಬೇಕು. ಆಗ ಧ್ವನಿ ಬರುತ್ತದೆ.. ನಂತರ ಸಂಪೂರ್ಣವಾಗಿ ಉಸಿರನ್ನು ಎಳೆದುಕೊಂಡು ಮತ್ತೆ ಶಂಖವನ್ನು ಊದಬೇಕು.. ಒಂದೇ ಬಾರಿಗೆ ಇದನ್ನು ಕಲಿಯಲು ಆಗುವುದಿಲ್ಲ... ಕ್ರಮೇಣ ಅಭ್ಯಾಸ ಮಾಡಬೇಕು.. ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಶಂಖವು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ಆಚರಣೆಗಳು ಮತ್ತು ಸಮಾರಂಭಗಳು ಹಾಗೂ ಪೂಜೆಯ ವೇಳೆ ಶಂಖವನ್ನು ಊದಲಾಗುತ್ತದೆ. ಇದರಿಂದ ಬರುವ ಶಬ್ದವು ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ ಅಲ್ಲದೆ, ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ನಂಬಲಾಗುತ್ತದೆ.. ಹೌದು.. ಶಂಖದಿಂದ ಬರುವ ಶಬ್ದವು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಇದರ ಕಂಪನಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ.. ಇದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಮನೆಯಲ್ಲಿ ಮುಂಜಾನೆ ಶಂಖವನ್ನು ಊದಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ಶಂಖವನ್ನು ಊದುವಾಗ ಬಾಯಿಗಿಂತ ಮೂಗಿನ ಮೂಲಕ ಹೆಚ್ಚು ಉಸಿರೆಳೆದುಕೊಳ್ಳಬೇಕು. ಇದು ಒಂದು ರೀತಿಯ ಉಸಿರಾಟದ ವ್ಯಾಯಾಮವಾಗಿ ಕೆಲಸ ಮಾಡುತ್ತದೆ. ಈ ಉಸಿರಾಟದ ವ್ಯಾಯಾಮವು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಪ್ರತಿದಿನ ಕನಿಷ್ಠ ಹತ್ತು ಸೆಕೆಂಡುಗಳ ಕಾಲ ಶಂಖವನ್ನು ಊದಿದರೆ, ಅದು ಉಸಿರಾಟದ ವ್ಯಾಯಾಮದಂತೆ ಕೆಲಸ ಮಾಡುತ್ತದೆ. ಶಂಖ ಊದುವುದರಿಂದ ಹಲವಾರು ಪ್ರಯೋಜನಗಳಿವೆ. ಇದರ ಹಿಂದೆ ವಿಜ್ಞಾನವಿದೆ. ಪ್ರತಿದಿನ 10 ಸೆಕೆಂಡುಗಳ ಕಾಲ ಶಂಖವನ್ನು ಊದುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಶಂಖವನ್ನು ಊದುವ ಶಬ್ದವು ಬಲವಾದ ಕಂಪನಗಳನ್ನು ಸೃಷ್ಟಿಸುತ್ತದೆ. ಅವು ನಮ್ಮ ದೇಹ, ಮನಸ್ಸು ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹರಡಿ ಧನಾತ್ಮಕ ಶಕ್ತಿಗಳ ಒತ್ತಡವನ್ನು ದೂರವಿಡುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...