ದೇಹದಲ್ಲಿ ಐರನ್ ಕೊರತೆಯಾದಾಗ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು !ನಾರ್ಮಲ್ ಅಂದುಕೊಂಡು ನಿರ್ಲಕ್ಷಿಸಬೇಡಿ ! :ರಕ್ತಹೀನತೆ ಎಂದರೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳು () ಅಥವಾ ಹಿಮೋಗ್ಲೋಬಿನ್ ಕೊರತೆ ಎದುರಾಗುವುದು. :ಕಬ್ಬಿಣದ ಕೊರತೆ (ರಕ್ತಹೀನತೆ) ಮಹಿಳೆಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.ರಕ್ತಹೀನತೆ ಎಂದರೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳು () ಅಥವಾ ಹಿಮೋಗ್ಲೋಬಿನ್ ಕೊರತೆ ಎದುರಾಗುವುದು. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಒಂದು ರೀತಿಯ ಪ್ರೋಟೀನ್.ಇದು ಶ್ವಾಸಕೋಶದಿಂದ ದೇಹದ ಉಳಿದ ಭಾಗಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ.ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್ ಅನ್ನು ಹೊಂದಿಲ್ಲದಿದ್ದರೆ,ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ.ಇದು ವಿವಿಧ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು.ರಕ್ತಹೀನತೆ ದೇಹದಲ್ಲಿ ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆಯಾಸ ಮತ್ತು ದೌರ್ಬಲ್ಯ :ಕಬ್ಬಿಣದ ಕೊರತೆಯಿಂದಾಗಿ,ದೇಹದಲ್ಲಿನಕಡಿಮೆಯಾಗುತ್ತದೆ.ಇದರಿಂದಾಗಿ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ.ಮಾತ್ರವಲ್ಲ ದಣಿವು ದೌರ್ಬಲ್ಯ ಕಾಣಿಸುತ್ತದೆ.ಇದು ನಿರಂತರ ಆಯಾಸ, ದೈಹಿಕ ದೌರ್ಬಲ್ಯ,ಶಕ್ತಿಯ ಕೊರತೆ ಮೂಲಕ ಕೆಲಸ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.ಇದರಿಂದಾಗಿ ದೈನಂದಿನ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಇದನ್ನೂ ಓದಿ : ಉಸಿರಾಟದ ಸಮಸ್ಯೆಗಳು :ಆಮ್ಲಜನಕದ ಕೊರತೆಯಿಂದಾಗಿ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ರಕ್ತಹೀನತೆಯ ಲಕ್ಷಣವಾಗಿದೆ. ಇದನ್ನು ನೀವು ನಿರ್ಲಕ್ಷಿಸಬಾರದು.ಲಘು ಚಟುವಟಿಕೆಗಳಲ್ಲಿ, ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ವ್ಯಾಯಾಮ ಮಾಡುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಹಳದಿ :ದೇಹದಲ್ಲಿ ರಕ್ತಹೀನತೆಯಿಂದಾಗಿ,ದೇಹದ ಚರ್ಮ,ಉಗುರು ಮತ್ತು ಒಸಡುಗಳು ಹಳದಿ ಬಣ್ಣಕ್ಕೆ ತಿರುಗಬಹುದು.ಚರ್ಮದ ಹಳದಿ ಬಣ್ಣ,ತುಟಿಗಳು ಮತ್ತು ಉಗುರುಗಳ ಬಣ್ಣ,ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಇದರ ಮುಖ್ಯ ಲಕ್ಷಣಗಳಾಗಿವೆ. ಇದನ್ನೂ ಓದಿ : ಹೃದಯ ಸಂಬಂಧಿ ಸಮಸ್ಯೆಗಳು :ಕಬ್ಬಿಣದ ಕೊರತೆಯು ಹೃದಯವು ಹೆಚ್ಚು ಕೆಲಸ ಮಾಡಲು ಕಾರಣವಾಗುತ್ತದೆ. ಇದು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.ತ್ವರಿತ ಹೃದಯ ಬಡಿತ,ಅನಿಯಮಿತ ಹೃದಯ ಬಡಿತ,ಎದೆ ನೋವು ಮತ್ತು ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕೂದಲಿನ ಸಮಸ್ಯೆಗಳು :ಕಬ್ಬಿಣದ ಕೊರತೆಯಿಂದಾಗಿ,ಕೂದಲು ಮತ್ತು ಚರ್ಮಕ್ಕೆ ಸರಿಯಾದ ಪೋಷಣೆ ಸಿಗುವುದಿಲ್ಲ.ಈ ಕಾರಣದಿಂದ ಕೂದಲು ಉದುರುವುದು,ಕೂದಲು ದೌರ್ಬಲ್ಯ, ಶುಷ್ಕತೆ ಮತ್ತು ಚರ್ಮದ ತುರಿಕೆ,ಉಗುರುಗಳ ಒಡೆಯುವಿಕೆ ಪ್ರಾರಂಭವಾಗುತ್ತದೆ.ಆದ್ದರಿಂದ ಈ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...